ಕನ್ನಡ ದೀಪ ನಿರತರ ಬೆಳಗಲಿ-ಎಂ ಡಿ ಪಾರ್ಥಸಾರಥಿ

 

ಮೈಸೂರು: ಕನ್ನಡ ದೀಪವು ನಿತ್ಯವು ಬೆಳಗಲಿ ರಾಜ್ಯೋತ್ಸವ ನಿತ್ಯೋತ್ಸವವಾಗಲಿ ಎಂದು
ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಎಂ ಡಿ ಪಾರ್ಥಸಾರಥಿ ಹೇಳಿದರು.

ಉದ್ಬೂರ್ ಗೇಟ್ ಹತ್ತಿರ ಇರುವ ಸಾಹಸಸಿಂಹ ಕರ್ನಾಟಕ ರತ್ನ ವಿಷ್ಣುವರ್ಧನ್ ಸ್ಮಾರಕದಲ್ಲಿ ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿ ಸಾಹಸಸಿಂಹ ವಿಷ್ಣುವರ್ಧನ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಿಹಿ ಹಂಚಿದ ಸಂದರ್ಭದಲ್ಲಿ ಪಾರ್ಥಸಾರಥಿ ಮಾತನಾಡಿದರು.

ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡದ ಅಭಿವೃದ್ಧಿ ಹಾಗೂ ಏಕೀಕರಣಕ್ಕಾಗಿ ಅನೇಕರು ಹೋರಾಡಿದ್ದಾರೆ, ಇಂಗ್ಲೀಷ್ ಗೆ ಗೌರವ ಕೊಡುವುದು ತಪ್ಪಲ್ಲ, ಆದರೆ ಆ ನೆಪದಲ್ಲಿ ಕನ್ನಡವನ್ನು ಮರೆತರೆ ಅದು ದೌರ್ಭಾಗ್ಯ, ಮಾತೃಭಾಷೆಯನ್ನು ಪ್ರೀತಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ಅಧ್ಯಕ್ಷ ಎನ್ ರಾಜೇಶ್, ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್,ಆಟೋ ಸದಾಶಿವ್, ಮಹದೇವ್, ರಘು, ಸಂತೋಷ್, ಅಮಿತ್, ಸದಾಶಿವ್, ಚಂದ್ರು, ಪ್ರಭು, ಸುರೇಶ್ ಮತ್ತಿತರ ಅಭಿಮಾನಿಗಳು ಹಾಜರಿದ್ದರು.