ಮೈಸೂರು: ಶ್ರೀ ಯೋಗಿ ನಾರಾಯಣ
ಕೈವಾರ ತಾತಯ್ಯ ನವರು ಕೇವಲ ಒಂದು ಸಮುದಾಯಕ್ಕೆ ಸೀಮಿತರಲ್ಲ, ಎಲ್ಲ ಸಮುದಾಯದವರಿಗೂ ಸಲ್ಲುತ್ತಾರೆ ಎಂದು ಸಾಹಿತಿಗಳು ಹಾಗೂ ಅಂಕಣಕಾರರಾದ ಗುಬ್ಬಿ ಗೂಡು ರಮೇಶ್ ಅಭಿಪ್ರಾಯ ಪಟ್ಟಿದ್ದಾರೆ.

ಶ್ರೀ ಕೈವಾರ ತಾತಯ್ಯ ಬಣಜಿಗ (ಬಲಿಜ )ಸಂಘದ ವತಿಯಿಂದ ಡಿ ದೇವರಾಜ ಅರಸು ರಸ್ತೆಯಲ್ಲಿ ಶ್ರೀ ಯೋಗಿ ನಾರಾಯಣ ಕೈವಾರ ತಾತಯ್ಯ ನವರ 299 ನೇ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಸಾರ್ವಜನಿಕರಿಗೆ ಲಾಡು ಹಾಗೂ ಮಜ್ಜಿಗೆ ವಿತರಿಸಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ವೇಳೆ ಮಾತನಾಡಿದ
ಗುಬ್ಬಿ ಗೂಡು ರಮೇಶ್,
ಮಹನೀಯರ ಜಯಂತಿಗಳು ಆಚರಣೆಗಷ್ಟೆ ಸೀಮಿತವಾಗದೆ ಅವರ ಆದರ್ಶ ತತ್ವಗಳನ್ನು ನಾವು ಮೈಗೂಡಿಸಿಕೊಂಡು ಅರ್ಥಪೂರ್ಣಗೊಳಿಸಬೇಕು ಎಂದು ಹೇಳಿದರು.
ಜೀವನ ಸಾರ್ಥಕತೆಗಾಗಿ ಸಮಾಜದ ಒಳಿತಿಗೆ ಶ್ರಮಿಸುವ ಮೂಲಕ ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಜಯನಗರ ಬಲಿಜ ಸಂಘದ ಗೌರವಾಧ್ಯಕ್ಷರಾದ ಮೀನಾ ತೂಗುದೀಪ್, ಕಾಂಗ್ರೆಸ್ ಮುಖಂಡರಾದ ವೆಂಕಟೇಶ್,ನಗರಪಾಲಿಕೆ ಮಾಜಿ ಸದಸ್ಯ ಪ್ರಶಾಂತ್ ಗೌಡ, ಆನಂದ್ ಶೆಟ್ಟಿ, ಜಿ ಶ್ರೀನಾಥ್ ಬಾಬು, ಮೈಸೂರು ರಕ್ಷಣಾ ವೇದಿಕೆ ಅಧ್ಯಕ್ಷ ಮೈಕ ಪ್ರೇಮ್ ಕುಮಾರ್, ಮೂಡ ಮಾಜಿ ಸದಸ್ಯರಾದ ನವೀನ್ ಕುಮಾರ್,ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್,
ಸಮಾಜದ ಮುಖಂಡರಾದ ಗುರುರಾಜ್ ಶೆಟ್ಟಿ, ಎಸ್ ಎನ್ ರಾಜೇಶ್, ಶೇಖರ್, ಉಮೇಶ್, ರಮೇಶ್, ಶೇಖರ್, ನಿತಿನ್, ಗುರುಪ್ರಸಾದ್, ಕಿರಣ್, ಉಮೇಶ್, ರಘು, ಸಂತೋಷ್ ನಾಯ್ಡು, ಹರೀಶ್ ನಾಯ್ಡು ಹಾಗೂ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.