ಪೆಹಲ್ಗಾಂ ಭಯೋತ್ಪಾದಕ ಕೃತ್ಯ ಖಂಡಿಸಿ ಮಹಾಜನ ಕಾನೂನು ಕಾಲೇಜಿನಿಂದ ಜಾಥಾ

Spread the love

ಮೈಸೂರು: ಮೈಸೂರಿನ ಎಸ್ ಬಿ ಆರ್ ಆರ್ ಮಹಾಜನ ಕಾನೂನು ಕಾಲೇಜಿನ ವತಿಯಿಂದ ಪೆಹಲ್ಗಾಂ ನಲ್ಲಿ ನಡೆದ ಘೋರ ಭಯೋತ್ಪಾದಕ ಕೃತ್ಯವನ್ನು ಖಂಡಿಸಿ ಶಾಂತಿಯುತ ಜಾಥಾ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಮಹಾಜನ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಡಾ. ಟಿ ವಿಜಯಲಕ್ಷ್ಮಿ ಮುರಳಿಧರ್, ಮಹಾಜನ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಸೌಮ್ಯಾ.ಕೆ, ಬೋಧಕ – ಬೋಧಕೇತರ ಸಿಬ್ಬಂದಿ ಹಾಗೂ ಕಾನೂನು ವಿದ್ಯಾರ್ಥಿಗಳು ಹಾಗೂ ಮಹಾಜನ ಅಂಗ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದರು.

ಮೈಸೂರಿನ ಜಯಲಕ್ಷ್ಮಿಪುರಂ ಹಾಗೂ ವಿ.ವಿ ಮೊಹಲ್ಲಾದ ಪೊಲೀಸ್ ಅಧಿಕಾರಿಗಳ ಸಹಯೋಗದೊಂದಿಗೆ ಕಾಲೇಜಿನ ಸುತ್ತಮುತ್ತಲ ಪ್ರಮುಖ ರಸ್ತೆಗಳಲ್ಲಿ ಜಾಥಾ ಯಶಸ್ವಿಯಾಗಿ ಕೈಗೊಂಡು ಸಮಾಜಕ್ಕೆ ಭಯೋತ್ಪಾದಕ ಕೃತ್ಯದ ತೀವ್ರತೆಯ ಬಗ್ಗೆ ಅರಿವು ಮೂಡಿಸಲಾಯಿತು.