ಜಂಬೂಸವಾರಿ ರಾಜಕಾರಣಿಗಳು, ಅಧಿಕಾರಿಗಳ ಹಬ್ಬವಾಗದಿರಲಿ:ಮಹೇಶ್

Spread the love

ಮೈಸೂರು: ವಿಶ್ವ ವಿಖ್ಯಾತ ದಸರಾ ಹಬ್ಬವೆಂದರೆ ಜಿಲ್ಲೆ, ರಾಜ್ಯ, ದೇಶ ವಿದೇಶಗಳು ಸಂಭ್ರಮಿಸುವ ಹಬ್ಬವೇ ಸರಿ ಅದರಲ್ಲೂ ಮೈಸೂರು ಸುತ್ತಮುತ್ತವಿರುವ ಜನರಿಗಂತೂ ಹತ್ತು ದಿನ ಸಂಭ್ರಮ , ಸಡಗರದ ಹಬ್ಬವಾಗಿದೆ.

ಮಹಾರಾಜರ ಕಾಲದಿಂದಲೂ ಈ ಹಬ್ಬವನ್ನ ಬಹಳ ವಿಜ್ರಂಭಣೆಯಿಂದ ಆಚರಿಸಿಕೊಳ್ಳುತ್ತಾ ಬಂದಿರುವುದು ಜಗಜ್ಜಾಹೀರ.

ಸರ್ಕಾರಗಳು ಬಂದ ನಂತರ ಪ್ರತಿಯೊಂದು ವರ್ಷವೂ ಸರ್ಕಾರಗಳು ಈ ಹಬ್ಬವನ್ನ ಬಹಳ ವಿಜ್ರಂಭಣೆಯಿಂದ ಆಚರಿಸಲು ಪ್ರಯತ್ನಿಸುತ್ತಿದೆ. ಇದನ್ನ ಕಣ್ಣುತುಂಬಿ ನೋಡದವರೇ ಇಲ್ಲ

ಆದರೆ ಇತ್ತೀಚಿನ ದಿನದಲ್ಲಿ ಈ ಹಬ್ಬವು ಸರ್ಕಾರಕ್ಕೇ ಮತ್ತು ಅಧಿಕಾರಿಗಳಿಗೆ ಸೀಮಿತವಾಗಿರುವಂತೆ ಕಾಣಿಸುತ್ತಿದೆ ಎಂದು
ಉದ್ಯಮಿ ಕೆ ಮಹೇಶ ಕಾಮತ್ ಹೇಳಿದ್ದಾರೆ.

ಏಕೆಂದರೆ ದಸರಾ ಉಧ್ಗಾಟಣೆಗೂ ಸಹ ಅರ್ಹರನ್ನು ಕರೆಯದೇ ತಮಗೆಲ್ಲೋ ಯಾವುದೋ ಕಾರಣಕ್ಕೆ ಸಹಾಯವಾದವರನ್ನೇ ಕರೆಯುವಂತಾಗಿದ್ದು ಕಂಡು ಬರುತ್ತದೆ ಎಂದು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜಂಬೂ ಸವಾರಿ ಸಮಯದಲ್ಲೂ ಕೂಡ ಕೇವಲ ರಾಜಕಾರಣಿಗಳಿಗೋಸ್ಕರ ಏರ್ಪಡಿಸಿದಂತೆ ಕಾಣುತ್ತದೆ. ನಿಜವಾದ ಪ್ರವಾಸಿಗರಿಂದ ಹಣ ಪಡೆದು ಸಹ ಮೂಲೆ ಗುಂಪು ಮಾಡಿ ರಾಜಕಾರಣಿಗಳ ಕುಟುಂಬ ಹಾಗೂ ಚೇಲಾಗಳಿಗೆ ಎಲ್ಲಿಲ್ಲದ ಮಹತ್ವ ಕೊಟ್ಟಹಾಗೆ ಕಾಣಿಸುತ್ತಿದೆ. ಅಧಿಕಾರಿ ವರ್ಗದವರೂ ಸಹ ತಮ್ಮ ಕುಟುಂಬ ಹಾಗೂ ಪರಿಚಯಸ್ಥರಿಗೆ ಹೆಚ್ಚಿನ ಮಹತ್ವ ಕೊಟ್ಟಹಾಗೆ ಕಾಣಿಸುತ್ತಿದೆ ಎಂದು ಬೇಸರ‌ ವ್ಯಕ್ತಪಡಿಸಿದ್ದಾರೆ.

ಯುವ ದಸರಾ, ರೈತ ದಸರಾ, ವಸ್ತು ಪ್ರದರ್ಶನ, ಫಲ ಪುಷ್ಪ ಪ್ರಧರ್ಶನ , ಆಹಾರ ಮೇಳ ಹಾಗೂ ಇತರ ಕಾರ್ಯಕ್ರಮಕ್ಕೂ ಕೇವಲ ತಮಗೆ ಬೇಕಾಗಿರುವವರನ್ನು ನೇಮಿಸುವ ಕಾರಣ ಅವರು ಏನೇ ತಪ್ಪು ಮಾಡಿದರೂ ಕೇಳುವವರಿಲ್ಲ ಎಂಬಂತಾಗಿದೆ ಎಂದು ಮಹೇಶ್ ಕಾಮತ್ ಬೇಸರ ವ್ಯಕ್ತಪಡಿಸಿದ್ದಾರೆ.

ಜಂಬೂ ಸವಾರಿ ಪಾಸ್ ಗಳು ಕಾಳಸಂತೆಯಲ್ಲಿ ಮನಸಿಗೆ ಬಂದ ದರದಲ್ಲಿ ಮಾರಾಟಮಾಡಿದರೂ ಪೋಲೀಸರು ಮಾತ್ರ ಕಣ್ಣಿಗೆ ಬಟ್ಟೆ ಕಟ್ಟಕೊಂಡ ಹಾಗೆ ಇರುತ್ತಾರೆ. ಏಕೆಂದರೆ ಈ ಪಾಸ್ ಗಳು ಸಹ ರಾಜಕಾರಣಿಗಳ ಕಡೆಯವರೇ ಮಾರಾಟ ಮಾಡುತ್ತಾರೇನೋ ಅನಿಸುತ್ತಿದೆ.

ಪ್ರತೀ ರಾಜ್ಯದ ಪ್ರವಾಸೋದ್ಯಮ ಇಲಾಖೆಯ ಜೊತೆ ಚರ್ಚಿಸಿ ಪ್ರತೀ ರಾಜ್ಯದವರಿಗೆ ಕರೆಸಿದರೆ ಈ ಕಾರ್ಯಕ್ರಮಕ್ಕೂ ಮೆರಗು ತರಬಹುದು ಎಂದು ಅವರು ಸಲಹೆ ನೀಡಿದ್ದಾರೆ.

ಇಂತಹ ಕೆಲಸವನ್ನು ಈ ಸರ್ಕಾರವೇ ಅರಿತು ಬದಲಾವಣೆ ತಂದರೆ ಇದೇ ಬದಲಾವಣೆಯನ್ನು ಮುಂದೆ ಎಲ್ಲಾ ಸರ್ಕಾರಗಳೂ ಮುಂದುವರಿಸಲಿ ಎಂದು ಆಶಿಸುತ್ತೇನೆ ಎಂದು ಕೆ ಮಹೇಶ ಕಾಮತ್ ಆಶಿಸಿದ್ದಾರೆ.