ಫಲಿತಾಂಶ ಸುಧಾರಣೆಗೆ ನೂತನ ಕಾರ್ಯ ಚಟುವಟಿಕೆ ಹಮ್ಮಿಕೊಳ್ಳಿ:ಹನುಮಂತ ರಾವ್

Spread the love

ಮೈಸೂರು: ಮೈಸೂರು ಜಿಲ್ಲೆ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪ ನಿರ್ದೇಶಕರಾದ ಹನುಮಂತ ರಾವ್ ಅವರು ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿದರು.

ಈ ವೇಳೆ ಅವರು ಶೈಕ್ಷಣಿಕ ಪ್ರಗತಿಯ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳಲ್ಲಿ ಓದಿನ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುವಂತೆ ಶೈಕ್ಷಣಿಕ ವಾತಾವರಣವನ್ನು ಕಾಲೇಜಿನಲ್ಲಿ ನಿರ್ಮಿಸಬೇಕು‌ ಎಂದು ಸಲಹೆ ನೀಡಿದರು.

ಫಲಿತಾಂಶ ಸುಧಾರಣೆಗೆ ನೂತನ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ನೂತನವಾಗಿ ಪ್ರಭಾರ ವಹಿಸಿಕೊಂಡಿರುವ ಉಪ ನಿರ್ದೇಶಕರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ಸಿ.ಆರ್. ದಿನೇಶ್, ಉಪನ್ಯಾಸಕರಾದ ಲಿಂಗಣ್ಣಸ್ವಾಮಿ, ರಂಗಸ್ವಾಮಿ, ನಾಗರಾಜು, ಡಾ.ರವಿ, ಡಾ.ಮಾಲತಿ, ಡಾ. ಸುಮಾ ,ರೂಪ ಸ್ವಾಮಿಗೌಡ, ಭವ್ಯ, ಸುಮಿತ್ರ ,ಮೀನಾ, ರಾಮಾನುಜ, ನಾಗರಾಜ ರೆಡ್ಡಿ, ಹರೀಶ್, ದಿನೇಶ್, ಅಂಬಿಕಾ, ಪದ್ಮಾವತಿ, ಶ್ರುತಿ, ಬಿಂದು, ಬಸವಣ್ಣ, ನಟರಾಜ್, ಮಿಲ್ಟನ್, ಹರ್ಷಿತ್, ನಿಂಗಯ್ಯ,ಮಹದೇವಸ್ವಾಮಿ, ದಿವ್ಯ ಉಪಸ್ಥಿತರಿದ್ದರು.