(ವರದಿ:ಸಿದ್ದರಾಜು, ಕೊಳ್ಳೇಗಾಲ)
ಕೊಳ್ಳೇಗಾಲ: ಪತ್ನಿಯ ಅಕ್ರಮ ಸಂಬಂಧದಿಂದ ಬೇಸತ್ತ ಪತಿ ಆಕೆಯ ಕುತ್ತಿಗೆ ಕೊಯ್ದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಹನೂರು ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಒಡೆಯರಪಾಳ್ಯ ಸಮೀಪದ ಗೂಳ್ಯದ ಬಯಲು ಗ್ರಾಮದಲ್ಲಿ ಈ ಘಟನೆ ನಡೆದಿದ್ದು,ಗ್ರಾಮದ ಮಾದೇವಿ (32) ಕೊಲೆಯಾದ ಮಹಿಳೆ.ಈಕೆಯ ಪತಿ ಭದ್ರ ಎಂಬಾತ ಕೊಲೆ ಮಾಡಿರುವ ಆರೋಪಿ.
ಗೂಳ್ಯದ ಬಯಲು ಗ್ರಾಮದ ಸೋಲಿಗ ಜನಾಂಗದ ಲೇ. ಶಂಭಯ್ಯ ಹಾಗೂ ಈರಮ್ಮ ಎಂಬುವವರ ಮಗಳು ಮಾದೇವಿಯನ್ನು ಕಳೆದ 10 ವರ್ಷಗಳ ಹಿಂದೆ ಅದೇ ಗ್ರಾಮದ ಲೇ.ಈರಣ್ಣನ ಮಗ ಭದ್ರ ಎಂಬಾನಿಗೆ ಕೊಟ್ಟು ಮದುವೆ ಮಾಡಲಾಗಿತ್ತು.
ದಂಪತಿಗಳು ಪ್ರಾರಂಭದಲ್ಲಿ ಅನ್ಯೋನ್ಯವಾಗಿದ್ದರು. ಇವರಿಗೆ 4 – 5 ವರ್ಷದವರೆಗೆ ಮಕ್ಕಳಿರಲಿಲ್ಲ. 4 ವರ್ಷದ ಒಂದು ಹಾಗೂ ಒಂದುವರೇ ವರ್ಷದ ಒಂದು ಇಬ್ಬರು ಗಂಡು ಮಕ್ಕಳಿದ್ವಾರೆ.
ಆದರೆ ಮಾದೇವಿ ಅದೇ ಗ್ರಾಮದ ಸ್ವಾಮಿ ಎಂಬ ಯುವಕನೊಂದಿಗೆ ಅಕ್ರಮ ಸಂಬಂಧವಿರಿಸಿ ಕೊಂಡಿದ್ದಳು ಇದು ಗಂಡ ಭದ್ರನಿಗೆ ತಿಳಿದು ಹುಚ್ಚನಂತಾಗಿದ್ದ.
ಪತ್ನಿಯ ನಡತೆಯಿಂದ ಸಂಸಾರದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಈ ವೇಳೆ ಮಗಳಿಗೆ ಬುದ್ಧಿವಾದ ಹೇಳಿದ್ದ ಮಾದೇವಿಯ ಮನೆಯವರು ಸ್ವಾಮಿಯ ಜೊತೆ ಜಗಳ ಮಾಡಿ ಇನ್ನು ಮುಂದೆ ನಮ್ಮ ಮನೆಯ ಕಡೆ ಬರಬೇಡ ಎಂದು ಎಚ್ಚರಿಕೆ ನೀಡಿದ್ದರು.
ಆದರೂ ಮಾದೇವಿ ಸ್ವಾಮಿಯ ಜೊತೆ ಅಕ್ರಮ ಸಂಬಂಧ ಮುಂದುವರೆಸಿದ್ಧಳು ಇದರಿಂದಾಗಿ ಭದ್ರ ಮಾನಸಿಕ ನಿಯಂತ್ರಣ ಕಳೆದು ಕೊಂಡು ಹುಚ್ಚನಾಗಿದ್ದ.
ಈ ವೇಳೆ ಮಾದೇವಿ ತನ್ನ ತವರು ಮನೆಯಲ್ಲೇ ಇದ್ದಳು. ಅಲ್ಲಿಗೆ ಸ್ವಾಮಿ ರಾತ್ರಿ ಹೊತ್ತು ಬರುತ್ತಿದ್ದ ಎಂದು ಹೇಳಲಾಗಿದ್ದು. ಅದೇ ಕನವರಿಕೆಯಲ್ಲಿದ್ದ ಭದ್ರ ಇದೇ 20 ರಂದು ರಾತ್ರಿ ಮಾದೇವಿಯ ತವರು ಮನೆಗೆ ಬಂದು ಸ್ವಾಮಿ ನನ್ನ ಹೆಂಡತಿಯ ಜೊತೆ ಮಲಗಿದ್ದಾನೆ ಎಂದು ಗಲಾಟೆ ಮಾಡಿದ್ದಾನೆ.ಮನೆಯವರು ಇಲ್ಲಿ ಯಾರೂ ಇಲ್ಲ ಎಂದು ಸಮಾಧಾನ ಮಾಡಿ ಕಳುಹಿಸಿದ್ದಾರೆ.
21 ರಂದು ಹೆಂಡತಿಯ ಮನೆಗೆ ಬಂದು ಊಟ ಮಾಡಿದಗದಾನೆ. ಈ ವೇಳೆ ಪತ್ನಿಯೇ ಅನ್ನ ಮಾಡಿ ಬಡಿಸಿದ್ದಾಳೆ. ಆದರೂ ಈತನ ತಲೆಯಲ್ಲಿರುವ ಅನುಮಾನ ಹೋಗಿರಲಿಲ್ಲ.
ಬದ್ರ ಒಡೆಯರಪಾಳ್ಯಕ್ಕೆ ಬಂದು ನಾಗಭೂಷಣ್ ಎಂಬುವವರ ಅಂಗಡಿಯಲ್ಲಿ ಚಾಕು ಖರೀದಿಸಿದ್ದಾನೆ.
ನಂತರ ಮಾದೇವಿಯ ತವರಿನಲ್ಲಿ ಎಲ್ಲರೂ ಕೂಲಿ ಕೆಲಸಕ್ಕೆ ತೆರಳಿದ ಮೇಲೆ ಮನೆಗೆ ಬಂದು ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ.ಈ ವೇಳೆ ಆಕೆ ತಪ್ಪಿಸಿಕೊಳ್ಳಲು ಯತ್ನಿಸಿದರೂ ಬಿಡದೆ ಆಕೆಯ ಕುತ್ತಿಗೆಯನ್ನು ಚಾಕುವಿನಿಂದ ಕೊಯ್ದು ಕೂಲೆ ಮಾಡಿದ್ದಾನೆ.
ಚೀರಾಟ ಕೇಳಿದ ಅಕ್ಕ ಪಕ್ಕದ ಮನೆಯವರು ಓಡಿ ಬಂದಿದ್ದಾರೆ ಕೊಲೆ ಮಾಡಿ ಅಲ್ಲೇ ಪಕ್ಕದಲ್ಲೇ ಕುಳಿತಿದ್ದ ಬದ್ರನನ್ನು ಹಿಡಿಯಲಿ ಯತ್ನಿಸಿದಾಗ ಆತ ಅವರಿಗೂ ಚಾಕು ತೋರಿಸಿ ಹೆದರಿಸಿ ಪರಾರಿಯಾಗಿದ್ದಾನೆ.
ವಿಷಯ ತಿಳಿದ ಕೂಡಲೇ ಹನೂರು ಠಾಣೆ ಪಿ ಎಸ್ ಐ ಮಂಜುನಾಥ್ ಪ್ರಸಾದ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮಾದೇವಿಯ ಶವವನ್ನು ಚಾಮರಾಜನಗರ ಆಸ್ಪತ್ರೆ ಶವಗಾರಕ್ಕೆ ಸಾಗಿಸಿ, ವೈದ್ಯರಿಂದ ಪಂಚನಾಮೆ ನಡೆಸಿ ನಂತರ ವಾರಸುದಾರರಿಗೆ ನೀಡಿದ್ದಾರೆ
ಈ ಸಂಬಂಧ ಮೃತಳ ಸಹೋದರ ಮಾದೇಶ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಹನೂರು ಠಾಣೆ ಪೊಲೀಸರು ಆರೋಪಿ ಬದ್ರನನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.