ಒಂದೇ ವಾರದಲ್ಲಿ ಡಾಂಬರು ಕಿತ್ತು ಜಲ್ಲಿಕಲ್ಲು ಹೊರಬಂದ ಹುಣಸೂರಿನ ಪಿಂಜಳ್ಳಿ ರಸ್ತೆ

Spread the love

ಹುಣಸೂರು: ಹುಣಸೂರು ತಾಲೂಕಿನಲ್ಲಿ ಕಳಪೆ ಕಾಮಗಾರಿಗಳು ನಡೆಯುತ್ತಲೇ ಇದ್ದು ಇದಕ್ಕೆ ಹುಣಸೂರು-ಪಾಲ ಪಿಂಜಳ್ಳಿ ರಸ್ತೆ ಅಪ್ಪಟ ಉದಾಹರಣೆಯಾಗಿದೆ.

ಹುಣಸೂರಿನಿಂದ ನಾಗರಹೊಳೆಗೆ ಹೋಗಿ ಅಲ್ಲಿಂದ ಪಿಂಜಳ್ಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಗೆ ಕಳೆದ ಒಂದು ವಾರವಷ್ಟೇ ಡಾಂಬರು ಹಾಕಲಾಗಿತ್ತು.

ಆದರೆ ಇದು ಅದೆಷ್ಟು ಕಳಪೆ ಮಟ್ಟದಿಂದ ಕೂಡಿದೆ ಎಂದರೆ ಕೈ ನಲ್ಲಿ ಮುಟ್ಟಿದರೆ ಸಾಕು ಡಾಂಬರು ಕಿತ್ತು ಬರುತ್ತದೆ.

ಡಾಂಬರು ಕಿತ್ತು ರಸ್ತೆ ತುಂಬಾ ಸಣ್ಣ ಸಣ್ಣ ಜಲ್ಲಿಕಲ್ಲುಗಳು ರಾಡಿಯಾಗಿ ಬಿದ್ದಿದೆ. ದ್ವಿಚಕ್ರ ವಾಹನ ಸವಾರರು ಇಲ್ಲಿ ಸಂಚರಿಸಿದರೆ ಸ್ಕಿಡ್ಡಾಗಿ ಬೀಳುತ್ತಾರೆ.

ಸಂಬಂಧಪಟ್ಟ ಇಂಜಿನಿಯರ್ ಗಳು ಇದಕ್ಕೆ ಉತ್ತರ ಕೊಡಬೇಕಿದೆ.

ಇನ್ನು ಅದೆಷ್ಟು ಭ್ರಷ್ಟಾಚಾರ ಮಾಡಲಾಗಿದೆಯೋ ತಿಳಿಯದು ಈ ರಸ್ತೆ ಕಾಮಗಾರಿಗೆ ಸುಮಾರು 15 ಲಕ್ಷ ರೂ ವೆಚ್ಚ ಮಾಡಲಾಗಿದೆ.ಕಾಮಗಾರಿ ಮಾಡಿದ ಒಂದು ವಾರದಲ್ಲೇ ಡಾಂಬರು ಕಿತ್ತು ಬಂದಿರುವುದು ನೋಡಿದರೆ ಅದೆಷ್ಟು ಕಳಪೆ ಕಾಮಗಾರಿ ಮಾಡಿರಬಹುದು ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಕಿಡಿ ಕಾರಿದ್ದಾರೆ.

ಈ‌ ಕಳಪೆ ರಸ್ತೆ ಕಾಮಗಾರಿ ಮಾಡಿ ಹಣ ಕೊಳ್ಳೆ ಹೊಡೆಯಲು ಕಾರಣರಾದ ಎಲ್ಲ ಇಂಜಿನಿಯರುಗಳು, ಪಿಡಬ್ಲ್ಯಡಿ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಚಲುವರಾಜು ಒತ್ತಾಯಿಸಿದ್ದಾರೆ.

ಕೂಡಲೇ ಸಂಬಂದಪಟ್ಟವರು ಪಿಂಜಳ್ಳಿ ರಸ್ತೆಗೆ ಗುಣಮಟ್ಟದ ಕಾಮಗಾರಿ ಮಾಡಿ ಸರಿಪಡಿಸಬೇಕೆಂದು ಅವರು ಆಗ್ರಹಿಸಿದ್ದಾರೆ.