ಮೈಸೂರು: ಗುಬ್ಬಿವಾಣಿ ಟ್ರಸ್ಟ್, ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯ ಸಹಯೋಗದೊಂದಿಗೆ, ಮಹಿಳಾ ನಿರ್ದೇಶಕಿಯರ ಆಯ್ದ ಕನ್ನಡ ಕಿರುಚಿತ್ರಗಳ ಮರುಪ್ರದರ್ಶನ ಭರ್ಜರಿ ಯಶಸ್ಸು ಕಂಡಿತು.
ಈ ವರ್ಷದ ಆರಂಭದಲ್ಲಿ ಅವಳ ಹೆಜ್ಜೆ ಕಿರುಚಿತ್ರೋತ್ಸವಕ್ಕೆ ದೊರೆತ ಅಗಾಧ ಪ್ರತಿಕ್ರಿಯೆಯ ನಂತರ, ಇದು ಮೂರನೇ ಪ್ರದರ್ಶನವಾಗಿದ್ದು,ಮತ್ತೊಮ್ಮೆ ಕನ್ನಡ ಚಿತ್ರರಂಗದಲ್ಲಿ ಮಹಿಳಾ ಧ್ವನಿಗೆ ಪ್ರೇಕ್ಷಕರನ್ನು ಒಟ್ಟುಗೂಡಿಸಿ ಕರೆತಂದಿತು.
ಈ ಆಕರ್ಷಕ ಕಿರುಚಿತ್ರಗಳು ಪ್ರತ್ಯೇಕವಾಗಿ ಮಹಿಳೆಯರಿಗೆಂದೇ ಏರ್ಪಡಿಸಿದ್ದ ಅವಳ ಹೆಜ್ಜೆ ಕಿರುಚಿತ್ರೋತ್ಸವ ಸ್ಪರ್ಧೆಯಲ್ಲಿ ಆಯ್ಧ ಚಿತ್ರಗಳಾಗಿದ್ದು, ವಿವಿಧ ಸಮಕಾಲೀನ ವಿಷಯಗಳ ಕುರಿತು ವಿಭಿನ್ನ ಅಭಿವ್ಯಕ್ತಿ, ದೃಷ್ಟಿಕೋನಗಳನ್ನು ನಿರೂಪಿಸಿದವು.
ಸುಚಿತ್ರದ ಸಂಸ್ಥಾಪಕ ಎಚ್.ಎನ್. ನರಹರಿ ರಾವ್ ಅವರ ಆರಂಭಿಕ ಹೇಳಿಕೆಗಳು ಮತ್ತು ನಾರ್ಮನ್ ಮೆಕ್ಲಾರೆನ್ ಅವರ ಅಮರ (ಕ್ಲಾಸಿಕ್) ಕಿರುಚಿತ್ರ ನೈಬರ್ಸ್ (1952) ಪ್ರದರ್ಶನದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.
ಗುಬ್ಬಿವಾಣಿ ಟ್ರಸ್ಟ್ನ ಮಹಿಳಾ ಸಬಲೀಕರಣ ವಿಭಾಗವಾದ ಅವಳ ಹೆಜ್ಜೆಯ ನಿರ್ದೇಶಕಿ ಶಾಂತಲಾ ದಾಮ್ಲೆ,ಚಿತ್ರೋತ್ಸವದ ಆಶಯ ಮತ್ತು ದೃಷ್ಟಿಕೋನವನ್ನು ಹಂಚಿಕೊಂಡರು.
ಈ ವರ್ಷ ದೊರೆತ ಹೆಚ್ಚು ಬೆಂಬಲದಿಂದ ನಮಗೆ ಅಗಾಧ ಪ್ರೋತ್ಸಾಹ ಸಿಕ್ಕಿದೆ. ಮುಂದಿನ ವರ್ಷದ ಸ್ಪರ್ಧೆಗೆ ಸಲ್ಲಿಕೆಗಳು ಇದೇ ನವೆಂಬರ್ 1 ರಂದು ತೆರೆದಿರುತ್ತವೆ ಎಂದು ಹೇಳಿದರು.
ರಾಜ್ಯೋತ್ಸವ ವಿಶೇಷ ಕಾರ್ಯಕ್ರಮವಾಗಿ, ನವೆಂಬರ್ 30 ರೊಳಗೆ ಸಲ್ಲಿಸಿದ ಸಲ್ಲಿಕೆಗಳಿಗೆ ಪ್ರವೇಶ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ. ಹೆಚ್ಚಿನ ವಿವರಗಳು ನಮ್ಮ ವೆಬ್ಸೈಟ್: www.gubbivanitrust.ngo ನಲ್ಲಿ ಲಭ್ಯವಿರುತ್ತವೆ ಎಂದು ಮಾಹಿತಿ ನೀಡಿದರು.
ಪ್ರದರ್ಶಿತ ಕಿರುಚಿತ್ರಗಳು:
ಸತ್ಯ ಪ್ರಮೋದ ಎಂ.ಎಸ್ ನಿರ್ದೇಶನದ ‘ಆನ್ ಲೈನ್’* (2025), ಮಾನಸ ಯು ಶರ್ಮ ನಿರ್ದೇಶನದ ‘ಸೊಲೋ ಟ್ರಾವೆಲ್ಲರ್’ (2023), ತೃಪ್ತಿ ಕುಲಕರ್ಣಿ ನಿರ್ದೇಶನದ ‘ಹೌ ಆರ್ ಯು?’ (2023), ಮಂದಾರ ಬಟ್ಟಲಹಳ್ಳಿ ನಿರ್ದೇಶನದ ‘ದಿ ಲಾಸ್ಟ್ ಹ್ಯಾಪಿ ಕಸ್ಟಮರ್’ (2024), ಚಂದನಾ ನಾಗ್ ನಿರ್ದೇಶನದ ‘ಉಭಯ’ (2024), ಕ್ಷಮಾ ಅಂಬೆಕಲ್ಲು ನಿರ್ದೇಶನದ ‘ಪುಷ್ಪ’ (2024), ಕವಿತಾ ಬಿ ನಾಯಕ್ ನಿರ್ದೇಶನದ ‘ಗ್ಲೀ’ (2023), ಸಿಂಚನಾ ಶೈಲೇಶ್ ನಿರ್ದೇಶನದ ‘ಕೇಕ್ ವಾಕ್’ (2025)
ಪುರವಂಕರ ಸಭಾಂಗಣವು ಉತ್ಸಾಹಭರಿತ ಪ್ರೇಕ್ಷಕರಿಂದ ತುಂಬಿ, ಹಬ್ಬದ ವಾತಾವರಣವನ್ನು ಸೃಷ್ಟಿಸಿತ್ತು. ನಿರ್ದೇಶಕಿಯರೊಂದಿಗೆ ಪ್ರಶ್ನೋತ್ತರ ಅವಧಿಯಲ್ಲಿ, ಪ್ರೇಕ್ಷಕರು ನೇರವಾಗಿ ಉತ್ಸಾಹಭರಿತ ಹಾಗೂ ಚಿಂತನಶೀಲ ಸಂವಾದದಲ್ಲಿ ತೊಡಗಿದ್ದು ಬಹಳ ವಿಶೇಷ.