ಮೈಸೂರು: ಬಿಸಿನೀರಿನ ಪಾತ್ರೆಗೆ ಬಿದ್ದು ಮಗು ಮೃತಪಟ್ಟ ದಾರುಣ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ವಿಜಯಗಿರಿ ಹಾಡಿಯಲ್ಲಿ ನಡೆದಿದೆ.
ಆದಿವಾಸಿ ಜೇನುಕುರುಬ ದಂಪತಿ ರಮ್ಯಾ ಮತ್ತು ಬಸಪ್ಪನವರ ಒಂದೂವರೆ ವರ್ಷದ ಹೆಣ್ಣುಮಗು ಸಾವನ್ನಪ್ಪಿದೆ.
ಸ್ನಾನ ಮಾಡಿಸುವಾಗ ಈ ದುರ್ಘಟನೆ ನಡೆದಿದೆ.ನೀರು ಸುಡುತ್ತಿದ್ದರಿಂದ ತಣ್ಣೀರು ತರಲು ಮನೆಯೊಳಗೆ ಹೋದ ಸಂದರ್ಭದಲ್ಲಿ ಮಗು ಸುಡುವ ನೀರಿನ ಪಾತ್ರೆಗೆ ಬಿದ್ದು ಮೈ ಕಾಲು ಕೈ ಸುಟ್ಟು ಗಂಭೀರ ವಾಗಿತ್ತು.
ತಕ್ಷಣ ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು,ಆದರೆ ಚಿಕಿತ್ಸೆ ಫಲಿಸದೇ ಮಗು ಮೃತಪಟ್ಟಿದೆ.
ಬಿಸಿನೀರಿನ ಪಾತ್ರೆಗೆ ಬಿದ್ದು ಮಗು ಸಾವು