ಮೈಸೂರು: ಶ್ರೀ ರಾಮ ಸೇವಾ ಸಮಿತಿ,ಜಯನಗರ ವತಿಯಿಂದ 19ನೇ ವರ್ಷದ ಕುಂಭಾಭಿಷೇಕ ಮಹೋತ್ಸವ ಹಮ್ಮಿಕೊಳ್ಳಲಾಯಿತು.
ಈ ವೇಳೆ ಮೈಸೂರಿನ ಆದಿಚುಂಚನಗಿರಿ ಶಾಖಾ ಮಠದ ಪೂಜ್ಯ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಅವರಿಗೆ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಚೆನ್ನಪ್ಪ, ಮುಖಂಡ ವಿಕ್ರಾಂತ್ ದೇವೇಗೌಡ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾ ಒಕ್ಕಲಿಗ ಸಂಘದ ಪ್ರಧಾನ ಕಾರ್ಯದರ್ಶಿ ಚೇತನ್ ಎಂ ಈ,ನಿರ್ದೇಶಕ ಗಿರೀಶ್ ಗೌಡ, ಜಯನಗರ ಹಾಗೂ ಕೆ ಜಿ ಕೊಪ್ಪಲು ಗ್ರಾಮದ ಮುಖಂಡರಾದ ಕೆಂಪಣ್ಣ, ನಾಗಪ್ಪ, ದೇವರಾಜು, ಗುರು, ಸುರೇಶ್ ಗೌಡ, ಭರತ್, ಸಿದ್ದೇಶ್, ರವಿಗೌಡ, ಶಂಭುಗೌಡ , ಚಂದನ್, ಜಯನಗರ ಹಾಗೂ ಕೆ ಜಿ ಕೊಪ್ಪಲ್ ಗ್ರಾಮದ ಯಜಮಾನರುಗಳು ಹಾಗೂ ಯುವಕರು ಉಪಸ್ಥಿರಿದ್ದರು.
