ಜಮೀನಿನಲ್ಲಿ ಉಳುಮೆ ಮಾಡುವಾಗಲೇ ಹಾರ್ಟ್ ಅಟ್ಯಾಕ್:ರೈತ ಸಾವು

Spread the love

ಮಂಡ್ಯ: ಜಮೀನಲ್ಲಿ ಉಳುಮೆ ಮಾಡುತ್ತಿದ್ದಾಗಲೇ ಹೃದಯಾಘಾತ ಸಂಭವಿಸಿ ರೈತ ಮೃತಪಟ್ಟ ಘಟನೆ
ಮಂಡ್ಯ ತಾಲ್ಲೂಕಿನ ಎಸ್.ಐ.ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಶಿವಣ್ಣಗೌಡ(55) ಮೃತಪಟ್ಡ ರೈತ.
ಅವರು ತಮ್ಮದೇ ಜಮೀನಿನಲ್ಲಿ ಹಿಪ್ಪುನೇರಳೆ ಉಳುಮೆ ಮಾಡುತ್ತಿದ್ದರು.

ರೈತ ರೇಷ್ಮೆ ಬೆಳೆ ಬೆಳೆದು ಜೀವನ ಸಾಗಿಸುತ್ತಿದ್ದರು.ಉಳುಮೆ ಮಾಡುವಾಗಲೇ ಪಾಪ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.ಈ ವೇಳೆ ಎತ್ತುಗಳು ಏನೂ ಮಾಡಲಾಗದೆ ಮೂಕ ವೇದನೆ‌ ಅನುಭವಿಸಿದವು.

ಎತ್ತುಗಳು ಸುಮ್ಮನೆ ನಿಂತಿದ್ದನ್ನು‌ ಗಮನಿಸಿದ ಅಕ್ಕ ಪಕ್ಕದ ಜಮೀನಿನವರು ಧಾವಿಸಿ ಉಪಚಾರ ಮಾಡಿದರೂ ಪ್ರಯೋಜನ ಆಗಿಲ್ಲ.ಅದಾಗಲೇ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು.

ಕುಟುಂಬಕ್ಕೆ ಆಸರೆಯಾಗಿದ್ದ ರೈತನ ಸಾವಿನಿಂದ ಪತ್ನಿ, ಇಬ್ಬರು ಚಿಕ್ಕ ಮಕ್ಕಳು ಅನಾಥರಾಗಿದ್ದಾರೆ.ಅವರ ದುಃಖದ ಕಟ್ಟೆ ಒಡೆದಿತ್ತು.