ಮೋದಿ‌ಜಿ ಹುಟ್ಟುಹಬ್ಬ:ಆರೋಗ್ಯಾಧಿಕಾರಿ,ಪೌರ‌ ಕಾರ್ಮಿಕರಿಗೆ ಅಭಿನಂದನೆ

Spread the love

ಮೈಸೂರು: ಭಾರತ ಕಂಡ ಶ್ರೇಷ್ಠ ನಾಯಕ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಬಿಜೆಪಿ ಮುಖಂಡರಾದ ಸಂದೀಪ್ ಸಿ ಅವರ ನೇತೃತ್ವದಲ್ಲಿ ಪಾಲಿಕೆ ಆರೋಗ್ಯಾಧಿಕಾರಿ ಮತ್ತು ಪೌರಕಾರ್ಮಿಕರನ್ನು ಗೌರವಿಸಲಾಯಿತು.

ಮೈಸೂರಿನ ಚಾಮುಂಡಿಪುರಂ ವೃತದಲ್ಲಿ ಮೋದಿಯವರ ಕನಸಿನ ಆಶಯದಂತೆ ಸ್ವಚ್ಛ ಭಾರತ್ ಅಭಿಯಾನಕ್ಕೆ ಸಹಕಾರ ನೀಡಿ ಯಶಸ್ವಿಯಾಗಿ ಕಸ ವಿಲೇವಾರಿ ನಿರ್ವಹಣೆ ಮಾಡುತ್ತಾ ಬಂದಿರುವ ಮೈಸೂರು ಮಹಾನಗರ ಪಾಲಿಕೆ ವಲಯ 1ರಲ್ಲಿನ ಆರೋಗ್ಯ ಅಧಿಕಾರಿಯಾದ ಹೆಚ್.ಎಂ. ಶಿವಪ್ರಸಾದ್ ಹಾಗೂ ಚಾಮುಂಡಿಪುರಂನ ಪೌರಕಾರ್ಮಿಕರಾದ ನವೀಂದ್ರ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.

ಇದೇ ವೇಳೆ ಮೋದಿಯವರ ಜನುಮದಿನಕ್ಕಾಗಿ ಸಾರ್ವಜನಿಕರಿಗೆ ಕಜ್ಜಾಯ ಮತ್ತು ಟೀ ವಿತರಣೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಶಾಸಕರಾದ ಟಿ ಎಸ್ ಶ್ರೀವತ್ಸ, ಮಾಜಿ ಸಂಸದರಾದ ಪ್ರತಾಪ್ ಸಿಂಹ, ಪ್ರಧಾನ ಕಾರ್ಯದರ್ಶಿ ಮಹೇಶ್, ಕೆ ಆರ್ ಕ್ಷೇತ್ರದ ಅಧ್ಯಕ್ಷ ರಘು ಅರಸ್, ಮುಖಂಡರಾದ ಚಂದ್ರಣ್ಣ, ಜಯರಾಮ್, ವಿದ್ಯಾ ಅರಸ್, ಚಂದ್ರಕಲಾ, ಪುರುಷೋತ್ತಮ್, ಶಿವಪ್ಪ, ಮುರಳಿಧರ್ , ಮಂಜುಳ, ಲತಾ, ಕಿಶೋರ್ ಜೈನ್, ಮುರಳಿ, ಪ್ರದೀಪ್ ಕುಮಾರ್, ಮಹೇಶ್, ಅಡಿಗೆ ಕಂಟ್ರಾಕ್ಟ್ ಕುಮಾರ್ , ಕಿರಣ್, ಅಂಬಳೆ ಶಿವಣ್ಣ, ವಿಜಯಾ, ಸಿಂಧೆ, ಧನುಷ್, ವಿನಯ್ ಸಾಗರ್, ಪವನ್, ಚೇತನ್ , ಹೇಮಂತ್, ಬಸವರಾಜು, ನಿಶಾಂತ್, ಭಾನು ಕುಮಾರ್, ಅಜ್ಗರ್, ರಮೇಶ್, ಸಂದೇಶ್ , ಪಾರ್ವತಿ, ದ್ರಾಕ್ಷಾಯಿಣಿ, ರಾಜೇಂದ್ರ, ಮೋಹನ್, ಕಿಟ್ಟಿ, ಗೋವಿಂದ್ , ಸೋಮು, ಸುರೇಶ್, ದೀಪಕ್, ವಿನಯ್, ಟಿಪೇಶ್, ಶಿವರಾಜ್, ನಂಜುಂಡಸ್ವಾಮಿ , ದೇವೇಂದ್ರ ಸ್ವಾಮಿ, ಗಾಯತ್ರಿ , ಸುಶೀಲಾ , ಮಧುರ, ರಿಂಕು, ರಾಮಸ್ವಾಮಿ ಮತ್ತಿತರರು ಹಾಜರಿದ್ದರು.