ಮೈಸೂರು: ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರು ಹಾಗೂ ಕಾವೇರಿ ರಕ್ಷಣಾ ಸಮಿತಿ ಬೆಂಗಳೂರು ಅಧ್ಯಕ್ಷರಾದ
ಎಚ್ ಕೆ ರಾಮು ಅವರ ಜನುಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮೈಸೂರಿನ ಶ್ರೀ ರಾಪುರ ದಲ್ಲಿರುವ ಶ್ರೀ ಬಸವೇಶ್ವರ ನವಚೇತನ ವಿಶೇಷ ಮಕ್ಕಳ ಶಾಲೆಯಲ್ಲಿ ದೇವರ ಮಕ್ಕಳ ಸನ್ನಿಧಿಯಲ್ಲಿ ಶನಿವಾರ ಎಚ್ ಕೆ ರಾಮು ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.
ಮಕ್ಕಳಿಗೆ ಹಣ್ಣು ಹಂಪಲು ನೀಡಿ ಆ ಮಕ್ಕಳಿಗೆ ಭಗವಂತ ಒಳ್ಳೆಯದನ್ನು ಮಾಡಲಿ ಎಂದು ಹಾರಿಸಲಾಯಿತು.
ಮಕ್ಕಳಿಗೆ ಹಿತನುಡಿಯನ್ನು ಹೇಳಿ ವಿಶೇಷವಾಗಿ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ನಿಖಿಲ್ ಕುಮಾರಸ್ವಾಮಿ ಅಭಿಮಾನಿ ಬಳಗದ ಅಧ್ಯಕ್ಷ ಪ್ರದೀಪ್ ಕೃಷ್ಣೆಗೌಡ, ಮಹೇಶ್, ದತ್ತ, ಅನಿಲ್ ಕುಮಾರ್, ಲಕ್ಷಿಕಾಂತ್, ಆನಂದ ಡಿ, ಅರುಣ್ ಕುಮಾರ್, ರಾಮಚಂದ್ರ, ಶ್ರೀ ನವಚೇತನ ಬಸವೇಶ್ವರ ವಿಶೇಷ ಶಾಲೆಯ ಅಧ್ಯಕ್ಷ ಮರಿಗೌಡರು ಮುಂತಾದವರು ಹಾಜರಿದ್ದರು .
ಎಚ್ ಕೆ ರಾಮು ಜನುಮ ದಿನ:ವಿಶೇಷ ಮಕ್ಕಳಿಗೆ ಹಣ್ಣು ವಿತರಣೆ