ಗುರುರಾಜ ಹೊಸಕೋಟೆ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಿ-ಡಾ.ಜಾನಪದ ಬಾಲಾಜಿ‌

 

ಬೆಂಗಳೂರು: ಗಾನ ಗಾರುಡಿಗ ಗುರುರಾಜ ಹೊಸಕೋಟೆ ಅವರಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಲಿ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯ ಅಧ್ಯಕ್ಷರಾದ ಡಾ ಜಾನಪದ ಎಸ್ ಬಾಲಾಜಿ‌ ಒತ್ತಾಯಿಸಿದರು.

ಗುರುವಾರ ಬೆಂಗಳೂರಿನ ಮುದ್ನಾಪಾಳ್ಯ ಹತ್ತಿರ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಪ್ರಸ್ಕಾರ ಪಡೆದ ಗುರುರಾಜ ಹೊಸಕೋಟೆ ಅವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಬಾಲಾಜಿ ಗುರುರಾಜ ಹೊಸಕೋಟೆ ಅವರಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಹಾಗೂ ರಾಜ್ಯ ಸರ್ಕಾರ ಜಾನಪದ ಶ್ರೀ ಪ್ರಶಸ್ತಿ ನೀಡಬೇಕೆಂದು ಅಗ್ರಹಿಸಿದರು.

ತಾಯಿ ಸತ್ತಮೇಲೆ ತವರಿಗೆ ಹೋಗಬಾರದು, ಕಲಿತ ಹುಡುಗಿ,ಹಾಡು ಬರೆದ ಪದ ಗಾರುಡಿಗ ಶ್ರೀ ಗುರುರಾಜ ಹೊಸಕೋಟೆ ಅವರ ಮನೆಗೆ ಡಾ ಜಾನಪದ ಎಸ್ ಬಾಲಾಜಿ ಭೇಟಿ ನೀಡಿ ಕುಶಲೋಪರಿ ವಿಚಾರಿಸಿದರು.

ಕನ್ನಡ ಜಾನಪದ ಪರಿಷತ್ ಗೋವಿಂದರಾಜ ನಗರ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷರಾದ ನರಸಿಂಹ ಮೂರ್ತಿ, ಬ್ಯಾಟರಾಯನಪುರ ಅಧ್ಯಕ್ಷರಾದ ಮಹೇಂದ್ರ ಜಾದವ್ ಉಪಸ್ಥಿತರಿದ್ದರು.