ಮಂಡ್ಯ: ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಹಲಗೂರು ಸಮೀಪದ ಗೊಲ್ಲರಹಳ್ಳಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಗ್ರಾಮ ದೇವರ ಪೂಜೆಯನ್ನು ಅದ್ದೂರಿಯಾಗಿ ನೆರವೇರಿಸಲಾಯಿತು.

ಪ್ರತಿ ವರ್ಷ ಊರಿನ ಸುಖ ಶಾಂತಿ ನೆಮ್ಮದಿಗಾಗಿ ಮತ್ತು ಯಾವುದೇ ಅವಘಡಗಳು ನಡೆಯಬಾರದೆಂದು ಪ್ರಾರ್ಥಿಸಿ ಗ್ರಾಮದೇವತೆ ಪೂಜೆ,ಮೆರವಣಿಗೆ ಮಾಡಿಕೊಂಡು ಬರಲಾಗುತ್ತಿದೆ.
ಅದರಂತೆ ಈ ಬಾರಿ ಕೂಡಾ ಹೆಬ್ಬೆಟರಾಯ,ಮಲೆ ಮಹದೇಶ್ವರ,ಕಾಳಮ್ಮ, ಶ್ರೀ ಸಿದ್ದಪ್ಪಾಜಿ ಕಂಡಾಯ, ನಂಜಾಪುರದ ಆಂಜನೇಯ ಸ್ವಾಮಿ ಹಾಗೂ ಶ್ರೀ ಕ್ಷೇತ್ರ ತಾಳವಾಡಿ ರಂಗನಾಥ ಸ್ವಾಮಿ ಯಾದಂತಹ ಬಂಟರು ಎಂದು ಹೆಸರು ಪಡೆದ ಶ್ರೀ ಕ್ಷೇತ್ರ ತಾಳವಾಡಿ ದೊಡ್ಡ ದೇವರುಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿದ ವಾಹನದಲ್ಲಿ ಇಟ್ಡು ಊರಿನಲ್ಲಿ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು.
ಗ್ರಾಮದ ಎಲ್ಲಾ ಜನತೆ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.