ಕುಡಿದ ನಶೆಯಲ್ಲಿ ಕಂದನ ಕೊಂ*ದ ಪಾಪಿ ಅಪ್ಪ

Spread the love

ಬೆಳಗಾವಿ: ಬೆಳಗಾವಿಯಲ್ಲಿ ಅಮಾನವೀಯ ಘಟನೆ ನಡೆದಿದ್ದು ಮೂರು ವರ್ಷದ ಕಂದನನ್ನು ಕುಡಿತ ನಶೆಯಲ್ಲಿ ತಂದೆಯೇ ಗೆಳೆಯರ ಜತೆ ಸೀರಿ ಕೊಂದಿರುವ ಕ್ರೂರ ಘಟನೆ ನಡೆದಿದೆ.

ತನ್ನದೇ ಮಗುವನ್ನು ಪಾಪಿ ಅಪ್ಪ ಒಲೆಯಲ್ಲಿರುವ ಕಟ್ಟಿಗೆಯಿಂದ ತಲೆ, ಕೈ, ಎದೆಗೆ ಹೊಡೆದು ಕೊಂದಿದ್ದಾನೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಾರುಗೋಪ್ಪ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕುಡಿದ ಮತ್ತಿನಲ್ಲಿ ಮಗುವಿನ ಅಪ್ಪ ಮತ್ತು ಆತನ ಗೆಳೆಯರು ಹತ್ಯೆ ಮಾಡಿದ್ದಾರೆ.

ಬಿಹಾರ ಮೂಲದ ಕಾರ್ತಿಕ್ ಮುಕೇಶ್ ಮಾಜಿ (3) ಕೊಲೆಯಾದ ನತದೃಷ್ಟ ಬಾಲಕ.

ಗಂಡ ಹೆಂಡತಿ ನಡುವೆ ಆಗಾಗ‌ ಜಗಳವಾಗುತ್ತಿತ್ತು. ತಾಯಿ ಅಡುಗೆ ಮಾಡುತ್ತಿದ್ದಾಗ ತಂದೆ ಒಲೆಯಲ್ಲಿದ್ದ ಬೆಂಕಿಯ ಕಟ್ಟಿಗೆಯನ್ನು ತೆಗೆದುಕೊಂಡು ಬಾಲಕನ ತಲೆಗೆ, ಬೆನ್ನಿಗೆ, ಕೈಯಗಳಿಗೆ ಹೊಡೆದಿದ್ದಾನೆ.

ಸ್ಥಳಕ್ಕೆ ಡಿ ವೈ ಎಸ್ ಪಿ ಡಾ. ವೀರಯ್ಯ ಹಿರೇಮಠ, ನೇಸರಗಿ ಸಿಪಿಐ ಗಜಾನನ ನಾಯ್ಕ, ಪಿ ಎಸ್ ವಾಹಿದ್ ಯಾದವಾಡ ಭೇಟಿ ನೀಡಿ ಪರಿಶೀಲಿಸಿದರು.

ಮುರಗೋಡ ಪೊಲೀಸರು ಪ್ರಕರಣ ದಾಖಲಿಸಿದ್ದು,ನಾಲ್ವರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.