ಮೈಸೂರು: ಮಾಜಿ ಸಂಸದರು ಹಾಗೂ
ಕೆಪಿಸಿಸಿ ಕಾರ್ಯಧ್ಯಕ್ಷರಾದ ದಿವಂಗತ ಧ್ರುವನಾರಾಯಣ್ ಅವರ ಹುಟ್ಟುಹಬ್ಬ ಅಂಗವಾಗಿ ಮೈಸೂರಿನಲ್ಲಿ ಅವರನ್ನು ಸ್ಮರಿಸಲಾಯಿತು.
ನಗರದ ಚಾಮುಂಡೇಶ್ವರಿ ಬಳಗದ ವತಿಯಿಂದ ಸಿದ್ದಪ್ಪ ವೃತ್ತದಲ್ಲಿರುವ ಕಚೇರಿಯಲ್ಲಿ ದಿವಂಗತ ಧ್ರುವನಾರಾಯಣ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರನ್ನು ಸ್ಮರಿಸಲಾಯಿತು
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ರಾಮಪ್ಪ ರಮೇಶ್, ಲೋಕೇಶ್, ಕೃಷ್ಣಪ್ಪ
(ಗಂಟಯ್ಯ),ಕಡಕೋಳ ಶಿವು, ಸೇವಾದಳ ಮೋಹನ, ಜಿ ರಾಘವೇಂದ್ರ, ರವಿಚಂದ್ರ, ದೀಪು ಮತ್ತಿತರರು ಹಾಜರಿದ್ದು ದೃವನಾರಾಯಣ್ ಅವರ ಭಾವಚಿತ್ರ ಹಿಡಿದು ಅವರ ಗುಣಗಾನ ಮಾಡಿದರು.