ಧ್ವನಿ ಇಲ್ಲದವರಿಗೆ ಧ್ವನಿ ಕೊಟ್ಟವರು ಡಿ. ದೇವರಾಜ ಅರಸರು-ಡಾ. ಡಿ.ತಿಮ್ಮಯ್ಯ

Spread the love

ಮೈಸೂರು: ಧ್ವನಿ ಇಲ್ಲದವರಿಗೆ ಧ್ವನಿಯನ್ನು ಕೊಟ್ಟವರು ಮಾಜಿ ಮುಖ್ಯ ಮಂತ್ರಿ ಡಿ. ದೇವರಾಜ ಅರಸು ಅವರು ಎಂದು ವಿಧಾನ ಪರಿಷತ್ ಸದಸ್ಯ ಡಾ. ಡಿ.ತಿಮ್ಮಯ್ಯ ಹೇಳಿದರು.

ನಗರದ ರೋಟರಿ ಶಾಲಾಸಭಾಂಗಣದಲ್ಲಿ
ಕರ್ನಾಟಕ ಸೇನಾ ಪಡೆ ವತಿಯಿಂದ ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ ಹಮ್ಮಿಕೊಳ್ಳ ಲಾಗಿದ್ದ ಹಿಂದುಳಿದ ವರ್ಗಗಳ ಧೀಮಂತ ನಾಯಕ, ನಾಡು ಕಂಡ ಶ್ರೇಷ್ಠ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡಿ ದೇವರಾಜ ಅರಸರು ಪ್ರಾರ್ತ ಸ್ಮರಣೀಯರು,ನಾಡಿನ ಪ್ರತಿಯೊಬ್ಬರು ಅವರನ್ನು ನೆನೆಯಲೇಬೇಕು, ‌ಅವರ ಆಡಳಿತ ಕಾಲದಲ್ಲಿ ಹಿಂದುಳಿದವರಿಗೆ, ದೀನ ದಲಿತರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಪ್ರತಿಯೊಂದು ಸೌಲಭ್ಯಗಳು ಪ್ರತಿಯೊಬ್ಬರಿಗೂ ತಲುಪುವಂತೆ ಮಾಡಿದವರು ಎಂದು ಸ್ಮರಿಸಿದರು.

ಹಿಂದೆ ಇದ್ದ ಮಲ ಹೊರುವ ಪದ್ಧತಿಯನ್ನು ನಿರ್ಮೂಲನೆ ಗೊಳಿಸಿದರು, ಉಳುವವನಿಗೆ ಭೂಮಿ ಎಂದು ಹಲವಾರು ನಿರ್ಗತಿಕರಿಗೆ ಭೂಮಿಯನ್ನು ಕೊಡಿಸಿಕೊಟ್ಟ ಮಹಾ ನಾಯಕ, ಧಣಿ ಇವರು. ಇಂತಹ ಮಹನೀಯರ ಹೆಸರಿನಲ್ಲಿ ಕರ್ನಾಟಕ ಸೇನಾ ಪಡೆ ಸೇವಾ ರತ್ನ ಪ್ರಶಸ್ತಿ ನೀಡುತ್ತಿರುವುದು ಸೂಕ್ತವಾಗಿದೆ ಎಂದು ಶ್ಲಾಘನೀಯ ಡಿ.ತಿಮ್ಮಯ್ಯ ಮೆಚ್ಚುಗೆ‌ ವ್ಯಕ್ತಪಡಿಸಿದರು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಮೈಸೂರು ಮಹಾನಗರ ಪಾಲಿಕೆಯ ಉಪ ಆಯುಕ್ತರಾದ (ಕಂದಾಯ) ಜಿ.ಎಸ್. ಸೋಮಶೇಖರ್ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ- ಡಾ. ಫ್ರೊ. ಎನ್ ಲಕ್ಷ್ಮೀ, ಡೀನ್, ಕರಾಮುವಿನಿ, ಸಮಾಜಸೇವೆ ಕ್ಷೇತ್ರದಲ್ಲಿ- ಎಸ್ ಬಸವೇಗೌಡ, ಮುಖ್ಯಸ್ಥರು, ಎಸ್ ಎಂ ಪಿ ಕನ್ಸ್ಟ್ರಕ್ಷನ್, ಪೋಲಿಸ್ ಸೇವಾ ಕ್ಷೇತ್ರದಲ್ಲಿ ಎನ್ ಸಿ. ನಾಗೇಗೌಡ, ಆರಕ್ಷಕ ನಿರೀಕ್ಷಕರು, ಕೆ ಆರ್ ಪೋಲಿಸ್ ಠಾಣೆ, ಉನ್ನತ ಶಿಕ್ಷಣ ಕ್ಷೇತ್ರದಲ್ಲಿ- ಬಿಳಿಗಿರಿರಂಗ, ಮುಖ್ಯಸ್ಥರು, ಸ್ನಾತಕೋತ್ತರ ಸಸ್ಯ ಶಾಸ್ತ್ರ ವಿಭಾಗ, ಜೆಎಸ್ಎಸ್, ನಿರ್ವಹಣಾ ಕ್ಷೇತ್ರದಲ್ಲಿ – ಡಾ. ಚಿರಂತ್ ಕೆ ಎಂ, ಸಹಾಯಕ ಪ್ರಾಧ್ಯಾಪಕರು ವಿಟಿಯು ಇವರುಗಳಿಗೆ ಶ್ರೀ ಡಿ. ದೇವರಾಜ ಅರಸು ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿ, ಸನ್ಮಾನಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಡಾದ ಅಧ್ಯಕ್ಷ ಸಿ ಮರಿಸ್ವಾಮಿ ರವರು ವಹಿಸಿದ್ದರು. ಸ್ವಾಗತ ಹಾಗೂ ಪ್ರಾಸ್ತಾವಿಕ ಭಾಷಣವನ್ನು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ನೆರೆವೇರಿಸಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಸಬಾದ ವಲಯ ಉಪಾಧ್ಯಕ್ಷ ಡಾ. ಬಿ ಆರ್ ನಟರಾಜ್ ಜೋಯ್ಸ್, ಕರ್ನಾಟಕ ಸೇನಾ ಪಡೆಯ ರಾಜ್ಯಾಧ್ಯಕ್ಷ ಚಾ. ರಂ. ಶ್ರೀನಿವಾಸ ಗೌಡ, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಎಚ್ ಮಂಜುನಾಥ್, ತಾಂತ್ರಿಕ ಸಹಾಯಕ ಎಸ್ .ಪಿ ಭಾಸ್ಕರ್, ಕರ್ನಾಟಕ ಸೇನಾ ಪಡೆಯ ಪ್ರಭುಶಂಕರ್, ಕೃಷ್ಣಪ್ಪ, ಪ್ರಜೀಶ್ ಪಿ, ಸುರೇಶ್ ಗೋಲ್ಡ್, ಪ್ರಭಾಕರ್, ನೇಹ, ಮಂಜುಳಾ, ಶಿವಲಿಂಗಯ್ಯ, ಸುಶೀಲಾ ನಂಜಪ್ಪ, ಲಕ್ಷ್ಮಿ, ಭಾಗ್ಯಮ್ಮ, ಸಿಂದುವಳ್ಳಿ ಶಿವಕುಮಾರ್, ವರಕೂಡು ಕೃಷ್ಣೇಗೌಡ, ವಿಜಯೇಂದ್ರ, ಗೊರೂರು ಮಲ್ಲೇಶ್, ನಾಗರಾಜು, ಹನುಮಂತಯ್ಯ, ಗೀತಾ ಗೌಡ, ಕುಮಾರ್ , ರಘು ಅರಸ್, ಅಕ್ಬರ್ , ನಂದಕುಮಾರ್ ವಿಷ್ಣು ಮತ್ತಿತರರು ಉಪಸ್ಥಿತರಿದ್ದರು.