ಮೈಸೂರು: ಪ್ರಧಾನಿ ಮೋದಿ ಯವರು 79 ನೆ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಪಿಎಫ್ ನಿವೃತ್ತ ಹಿರಿಯ ನಾಗರಿಕರ ಬಗ್ಗೆ ಪ್ರಸ್ತಾಪ ಮಾಡಲಿಲ್ಲ ಎಂದು ಕರ್ನಾಟಕ ರಾಜ್ಯ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘ ಮೈಸೂರು ಪದಾಧಿಕಾರಿಗಳು ಬೇಸರ ಪಟ್ಟಿದ್ದಾರೆ.
ಕಾರ್ಖಾನೆ, ಇತರೆ ಕಂಪನಿಗಳಲ್ಲಿ ಸಹಕಾರ ಬ್ಯಾಂಕ್ ಗಳಲ್ಲಿ 30-40 ವರ್ಷಗಳ ಕಾಲ ಸೇವೆ ಮಾಡಿದ್ದೇವೆ,ನಮಗೆ ಬರುವ ಪಿಂಚಣಿ ಕೇವಲ 500 ರಿಂದ 2500ರೂ ಮಾತ್ರ ಅಷ್ಟರಲ್ಲಿ ಜೀವನ ಮಾಡಬೇಕಿದೆ ಎಂದು ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸ್ವಾಮಿ ಶೆಟ್ಟಿ ಮತ್ತು ಪ್ರಧಾನ ಕಾರ್ಯದರ್ಶಿ ಆರ್ ಜಿ ಮೋಹನ್ ಕ್ರಿಷ್ಣ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಧಾನ ಮಂತ್ರಿಯವರು ಆ.15 ರಂದು 79 ನೆಯ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ, ಸುದೀರ್ಘ 103 ನಿಮಿಷಗಳ ಕಾಲದ ಸುದೀರ್ಘ ಭಾಷಣದಲ್ಲಿ ಪಿಎಫ್ ನಿವೃತ್ತ ಹಿರಿಯ ನಾಗರಿಕರ ಬಗ್ಗೆ ಪ್ರಸ್ತಾಪವನ್ನೇ ಮಾಡಿರುವುದಿಲ್ಲ.ನಾವು ಸಲ್ಲಿಸಿರುವ ಲಕ್ಷಾಂತರ ಮನವಿಗಳಿಗೆ ಪ್ರಧಾನ ಮಂತ್ರಿಯವರು ಓಗೊಡದಿರುವುದು ವಿಪರ್ಯಾಸ ಎಂದು ತಿಳಿಸಿದ್ದಾರೆ.
ಪ್ರಧಾನ ಮಂತ್ರಿಯವರಿಗೂ 75 ವರ್ಷವಾಗಿದೆ.ವಯೋವ್ರೃಧ್ಧರ ಬವಣೆಗಳ ಬಗ್ಗೆ ಅವರಿಗೂ ಗೊತ್ತಿದೆ. ಆದರೆ ಏಕೆ ವಯೋವೃದ್ಧರ ಬಗ್ಗೆ ಅನುಕಂಪ ತೋರಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಶ್ರಮ ಇಲಾಖೆ, ಪಿಎಫ್ ನವರು ಪ್ರಧಾನ ಮಂತ್ರಿಯವರನ್ನು ದಿಕ್ಕು ತಪ್ಪಿಸುತ್ತಿದ್ದಾರೆ.
ಹಿರಿಯ ನಾಗರಿಕರ ಠೇವಣಿ ಬಡ್ಡಿದರಗಳನ್ನು ಏರಿಸುತ್ತಿಲ್ಲ, ಇತ್ತಾ ರೇಲ್ವೆ ರಿಯಾಯಿತಿ ದರವನ್ನು ಹಿಂತೆಗೆದುಕೊಳ್ಳಲಾಗಿದೆ ರಿಯಾಯಿತಿ ಆರೋಗ್ಯ ವಿಮಾ ಯೋಜನೆಯಲ್ಲಿ ಸಡಿಲಿಕೆ ಯಾಗಿದೆ,
ಬಿಪಿಎಲ್ ಪಡಿತರ ಯೋಜನೆಗೆ ಅಳವಡಿಸುವಿಕೆ, ಪಿಎಫ್ ರವರಿಂದ ಆಗುತ್ತಿರುವ ನಿರಂತರ ಮಾನಸಿಕ ಕಿರುಕುಳ, ನ್ಯಾಯಾಲಯದ ತೀರ್ಪ ನ್ನೇ ತಿರುಚಿತ್ತಿರುವ ಬಗ್ಗೆ, Exempted, unexempted ಎಂದು ಮಾಡಿ ತಾರತಮ್ಯ ಮಾಡಲಾಗಿದೆ ಎಂದು ಸಂಘದವರು ಬೇಸರ ತೋಡಿಕೊಂಡಿದ್ದಾರೆ.
ಪ್ರಿ ಸೆಪ್ಟೆಂಬರ್,ಆಫ್ಟರ್ ಸೆಪ್ಟೆಂಬರ್ ಎಂದು ಸ್ರೃಷ್ಟಿಸಿ ನಿವೃತ್ತ ನೌಕರರಲ್ಲಿ ಅಸಮಾಧಾನ ನಿರ್ಮಾಣ ಮಾಡಲಾಗುತ್ತಿದೆ, ಪಿಎಫ್ ನಲ್ಲಿ ಸಾಕಷ್ಟು ಹಣವಿದ್ದರೂ,ಹಣ ವಿಲ್ಲವೆಂದು ತಪ್ಪು ಮಾಹಿತಿ ನೀಡಲಾಗುತ್ತಿದೆ,ಕನಿಷ್ಟ ಪಿಂಚಣಿ ಹೆಚ್ಚುವರಿ 7000 ದಿಂದ 9000 ರೂ ಕೊಡುವುದರ ಜೊತೆಗೆ ಡಿಎ ಮಾಡುವಂತೆ ಮನವಿ ಮಾಡಿದ್ದೇವೆ ಎಂದು ಸ್ವಾಮಿ ಶೆಟ್ಟಿ ಮತ್ತು ಆರ್ ಜಿ ಮೋಹನ್ ಕ್ರಿಷ್ಣ ತಿಳಿಸಿದ್ದಾರೆ.
ಹಲವಾರು ವಿಷಯಗಳ ಬಗ್ಗೆ ಪ್ರಧಾನ ಮಂತ್ರಿಗಳಿಗೆ ಅನೇಕ ಸಂಘಟನೆಗಳು ಅಲ್ಲದೇ ಲಕ್ಷಾಂತರ ಮಂದಿ ಅಹವಾಲು ಸಲ್ಲಿಸಿದ್ದರೂ ಸಹ ಏನೂ ಪ್ರಯೋಜನವಾಗಲಿಲ್ಲ.ನಮಗೆ ದೈನಂದಿನ ಜೀವನ ನಡೆಸಲು ಕಷ್ಟವಾಗಿದೆ.
ವಯೋಸಹಜ ಕಾಯಿಲೆಯಿಂದ ಔಷದಿ ಮಾತ್ರೆಗೆ ಹಣವಿಲ್ಲದೆ ಲಕ್ಷಾಂತರ ಮಂದಿ ಅಸುನೀಗುತ್ತಿದ್ದಾರೆ.ನೀಡಿದ ಲಕ್ಷಾಂತರ ಮನವಿಗಳು ಪ್ರಧಾನ ಮಂತ್ರಿಯವರ ಗಮನಕ್ಕೆ ಬರಲಿಲ್ಲವೇ,ಆ ಮನವಿಗಳು ಎಲ್ಲಿಗೆ ಹೋದವು ಎಂದು ಅವರು ಪ್ರಶ್ನಿಸಿದ್ದಾರೆ.
ಈ ಇಳಿವಯಸ್ಸಿನಲ್ಲಿ, ಪಿಂಚಣಿಗಾಗಿ ಹೋರಾಟ ಮುಂದುವರಿಸಬೇಕೇ, ನಮಗೆ ಈಗ ಉಳಿದಿರುವುದು ದಯಾಮರಣ
ಕೋರುವುದಷ್ಟೇ ಎಂದು ಸ್ವಾಮಿ ಶೆಟ್ಟಿ ಮತ್ತು ಆರ್ ಜಿ ಮೋಹನ್ ಕ್ರಿಷ್ಣ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘ ಮೈಸೂರು, ಕರ್ನಾಟಕ ರಾಜ್ಯದ ಪರವಾಗಿ ಪ್ರಕಟಣೆಯಲ್ಲಿ ಅಳಲು ತೋಡಿಕೊಂಡಿದ್ದಾರೆ.