ವಿದ್ಯುತ್ ತಂತಿ ತಗುಲಿ ಇಬ್ಬರ ದುರ್ಮರಣ

Spread the love

(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ತಾಲ್ಲೂಕಿ ಅಯ್ಯನಪುರ ಗ್ರಾಮದ ಸಮೀಪವಿರುವ ಕೋಟೆತಿಟ್ಟು ಬಳಿ ವಿದ್ಯುತ್ ತಂತಿ ತಗುಲಿ ಇಬ್ಬರು ಸಾವನ್ಬಪ್ಪಿರುವ ಘಟನೆ ನಡೆದಿದೆ.

ಮಲ್ಲೇಶ್ (40) ನಾಗೇಂದ್ರ (48) ಮೃತಪಟ್ಟ ದುದೈವಿಗಳು.

ರಾತ್ರಿ ವೇಳೆ ಜಮೀನಿಗೆ ಹೋಗಿ ನೀರು ಹಾಯಿಸಿ ಬೈಕ್ ನಲ್ಲಿ ಬರುವಾಗ ಜೋತು ಬಿದ್ದ ವಿದ್ಯುತ್ ತಂತಿ ತಗುಲಿ ಇಬ್ಬರು ಮೃತಪಟ್ಟಿದ್ದಾರೆ.

ಈ ಸಂಬಂಧ ರಾಮಸಮುದ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಸ್ಥಳಕ್ಕೆ ಡಿವೈಸ್ಪಿ, ಎಸ್ಪಿ ಭೇಟಿ ನೀಡಿ ಪರಿಶೀಲಿಸಿದ್ದಾರೆ‌.

ಸ್ಥಳಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬರಬೇಕು ಎಂದು ಅಯ್ಯನಪುರ ಗ್ರಾಮಸ್ಥರು ಪ್ರತಿಭಟನೆ ಕೂಡಾ ನಡೆಸಿದರು.