ಅ.ಕ. ಬ್ರಾ. ಮಹಾಸಭಾ ಚುನಾವಣೆ: ಡಾ.ಲಕ್ಷ್ಮೀದೇವಿ, ಕಲ್ಕೆರೆ ನಾಗರಾಜ್ ನಾಮಪತ್ರ ಸಲ್ಲಿಕೆ

Spread the love

ಮೈಸೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ 2025-2030 ನೇ ಸಾಲಿನ ಚುನಾವಣೆಗೆ ಮೈಸೂರು ಜಿಲ್ಲೆಯ ಎರಡು ಪ್ರತಿನಿಧಿ ಸ್ಥಾನಕ್ಕೆ ಡಾ.ಲಕ್ಷ್ಮೀದೇವಿ ಮತ್ತು ಕಲ್ಕೆರೆ ನಾಗರಾಜ್ ನಾಮಪತ್ರ ಸಲ್ಲಿಸಿದ್ದಾರೆ.

ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಎಸ್ ರಘುನಾಥ್ ಸ್ಪರ್ಧಿಸಿದ್ದು, ಮೈಸೂರು ಜಿಲ್ಲೆಯ ಎರಡು ಪ್ರತಿನಿಧಿ ಸ್ಥಾನಕ್ಕೆ ಎಸ್ ರಘುನಾಥ್ ಅವರ ತಂಡದಿಂದ ಗ್ರಾಜುಯೇಟ್ ಕೋ ಆಪರೇಟಿವ್ ಬ್ಯಾಂಕ್
ನಿರ್ದೇಶಕರು ಹಾಗೂ ವಿಪ್ರ ಮಹಿಳಾಸಂಗಮದ ಅಧ್ಯಕ್ಷರಾದ ಡಾ ಲಕ್ಷ್ಮೀದೇವಿ ಹಾಗೂ ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಖಜಾಂಚಿ ಕೆ ನಾಗರಾಜ್ ಇಂದು ಬೆಂಗಳೂರಿನ
ಬನಶಂಕರಿಯಲ್ಲಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕೇಂದ್ರ ಕಚೇರಿಯ ಗಾಯತ್ರಿ ಭವನದಲ್ಲಿ ಚುನಾವಣೆ ಅಧಿಕಾರಿ ಎನ್ ವೆಂಕಟೇಶ್ ಅವರಿಗೆ ನಾಮಪತ್ರ ಸಲ್ಲಿಸಿದರು,

ಈ ಸಂದರ್ಭದಲ್ಲಿ ಮಹಾಸಭಾ ರಾಜ್ಯ ಉಪಾಧ್ಯಕ್ಷರಾದ ನo ಶ್ರೀಕಂಠ ಕುಮಾರ್, ರಥಯಾತ್ರೆ ಸುರೇಶ್, ನಿವೃತ್ತ ಮುಜರಾಯಿ ತಹಶೀಲ್ದಾರರಾದ ಎಸ್ ಎನ್ ಯತಿರಾಜ್ ಸಂಪತ್ ಕುಮಾರ್, ಶಂಕರ್ ನಾರಾಯಣ್, ಬಿ ಎಸ್ ವನಜ ಮತ್ತಿತರರು ಹಾಜರಿದ್ದರು.