ಯಾದಗಿರಿ: ಕಲುಶಿತ ನೀರು ಸೇವುಸಿ
ಒಂದೇ ಗ್ರಾಮದ ಮೂವರು ಮೃತಪಟ್ಟ ಘಟನೆ ಯಾದಗಿರಿಯಲ್ಲಿ ವರದಿಯಾಗಿದೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಪ್ಪನಟಗಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,ದೇವಿಕೆಮ್ಮ ಹೊಟ್ಟಿ(48) ವೆಂಕಮ್ಮ (60) ರಾಮಣ್ಣ ಪೂಜಾರಿ(50) ಮೃತ ದುರ್ದೈವಿಗಳು.
ಕಳೆದ ಹತ್ತು ದಿನಗಳ ಹಿಂದೆ
ತಿಪ್ಪನಟಗಿ ಗ್ರಾಮದಲ್ಲಿ ಕಲುಶಿತ ನೀರು ಸೇವಿಸಿ ಹಲವಾರು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅವರಲ್ಲಿ ದೇವಿಕೆಮ್ಮ ಹೊಟ್ಟಿ, ವೆಂಕಮ್ಮ, ರಾಮಣ್ಣ ಪೂಜಾರಿ ಮೃತಪಟ್ಟಿದ್ದಾರೆ.
ಬೇರೆ,ಬೇರೆ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ
ಆರು ಜನರ ಸ್ಥಿತಿ ಗಂಭೀರವಾಗಿದೆ,
ಕೆಲವರ ಆರೋಗ್ಯ ಚೇತರಿಕೆ ಕಂಡಿದೆ,ಒಟ್ಟಾರೆ 20 ಜನರು ಅಸ್ವಸ್ಥರಾಗಿದ್ದಾರೆ
ಸ್ಥಳಕ್ಕೆ ಸುರಪುರ ಡಿಹೆಚ್ಒ ರಾಜಾ ವೆಂಕಟಪ್ಪ ನಾಯಕ ಭೇಟಿ,ಪರಿಶೀಲಿಸಿ ಸಂತ್ರಸ್ತರ ಆರೋಗ್ಯ ವಿಚಾರಿಸಿ ದೈರ್ಯ ತುಂಬಿದರು.