ಡಾ.ರಾಜ್ ಹೋರಾಟದ ಸ್ಪೂರ್ತಿ:ರಾಘವೇಂದ್ರ

Spread the love

ಮೈಸೂರು: ಗೋಕಾಕ್ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಡಾ. ರಾಜಕುಮಾರ್ ಕನ್ನಡಿಗರಲ್ಲಿ ಜಾಗೃತಿ ಮೂಡಿಸಿದ್ದರು ಎಂದು ಮಯೂರ ಕನ್ನಡ ಯುವಕರ ಬಳಗದ ಜಿ ರಾಘವೇಂದ್ರ ಸ್ಮರಿಸಿದರು.

ಮಯೂರ ಕನ್ನಡ ಯುವಕರ ಬಳಗದ ವತಿಯಿಂದ ಚಾಮರಾಜ ಜೋಡಿ ರಸ್ತೆಯಲ್ಲಿರುವ ವರನಟ ಡಾಕ್ಟರ್ ರಾಜಕುಮಾರ್ ಹುಟ್ಟು ಹಬ್ಬದ ಅಂಗವಾಗಿ ಡಾಕ್ಟರ್ ರಾಜ್ ಪ್ರತಿಮೆಗೆ ಪೂಜೆ ಸಲ್ಲಿಸಿ ಸಿಹಿ ವಿತರಿಸಿದ ವೇಳೆ ಅವರು ಮಾತನಾಡಿದರು.

ಗೋಕಾಕ್ ಚಳವಳಿಯಲ್ಲಿ ಭಾಗವಹಿಸುವ
ಮೂಲಕ ಡಾ.ರಾಜ್ ಹೋರಾಟದ ಸ್ಪೂರ್ತಿಯಾದರು, ಅದರ ಫಲವಾಗಿ ಕನ್ನಡ ಭಾಷೆಗೆ ಎಲ್ಲೆಡೆ ಪ್ರಧಾನ ಸ್ಥಾನ ದೊರೆಯಲು ಸಾಧ್ಯವಾಯಿತು ಎಂದು ತಿಳಿಸಿದರು.

ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದ ಡಾಕ್ಟರ್ ರಾಜ್ ತಮ್ಮ ಚಲನಚಿತ್ರಗಳಲ್ಲಿ ಸಾಮಾಜಿಕ ಮೌಲ್ಯಗಳನ್ನು ಜನಪ್ರಿಯಗೊಳಿಸಿದರು, ಸಾಮಾಜಿಕ ಬದಲಾವಣೆಯಲ್ಲಿ ಅವರ ಚಲನಚಿತ್ರಗಳು ಪ್ರಮುಖ ಪಾತ್ರವಹಿಸಿವೆ ಎಂದು ರಾಘವೇಂದ್ರ ಬಣ್ಣಿಸಿದರು.

ಮಯೂರ ಕನ್ನಡ ಯುವಕರ ಬಳಗದ ಕಿಶೋರ್ ಕುಮಾರ್, ಎಸ್ ಎನ್ ರಾಜೇಶ್, ಸುಬ್ರಮಣ್ಯ( ಸುಬ್ಬು), ಮಂಜುನಾಥ್, ಚಕ್ರಪಾಣಿ, ಲಕ್ಷ್ಮಣ, ರವಿಚಂದ್ರ, ಮುಸಿರ, ಹರೀಶ್ ನಾಯ್ಡು, ಕಿರಣ್ ಮತ್ತಿತರರು ಹಾಜರಿದ್ದರು.