ರೇಷ್ಮೆ ಕೃಷಿ ಸಂಶೋಧನೆ ತರಬೇತಿ ಸಂಸ್ಥೆಯ ನೂತನ ನಿರ್ದೇಶಕಿ ಡಾ. ಪಿ. ದೀಪಾ

ಮೈಸೂರು: ಮೈಸೂರಿನಲ್ಲಿರುವ ಕೇಂದ್ರ ರೇಷ್ಮೆ ಕೃಷಿ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ ನೂತನ ನಿರ್ದೇಶಕಿಯಾಗಿ ಡಾ. ಪಿ. ದೀಪಾ ಅವರನ್ನು ನೇಮಕ ಮಾಡಲಾಗಿದ್ದು,
ಅವರು ಅಧಿಕಾರ ವಹಿಸಿಕೊಂಡಿದ್ದಾರೆ.

ರೇಷ್ಮೆ ಹುಳು ಬೀಜದ ಪ್ರಮುಖ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ,ರಾಷ್ಟ್ರೀಯ ರೇಷ್ಮೆ ಹುಳು ಬೀಜ ಸಂಸ್ಥೆ ಅಡಿಯಲ್ಲಿ ವಿವಿಧ ಸಾಮರ್ಥ್ಯ ಮತ್ತು ಘಟಕಗಳಲ್ಲಿ ಡಾ. ದೀಪಾ ಅವರು ಕಳೆದ 35 ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ.

2030ರ ವೇಳೆಗೆ ಪ್ರಸ್ತುತ 41,121 ಮೆಟ್ರಿಕ್ ಟನ್‌ ಗಳಿಂದ 50,000 ಮೆಟ್ರಿಕ್ ಟನ್ ಕಚ್ಚಾ ರೇಷ್ಮೆಯ ವಾರ್ಷಿಕ ಉತ್ಪಾದನೆಯನ್ನು ತಲುಪುವ ದೇಶದ ಗುರಿಯತ್ತ ಸಾಗುವ ಮಲ್ಬೆರಿ ಮತ್ತು ರೇಷ್ಮೆ ಹುಳು ಉತ್ಪಾದಕತೆಯನ್ನು ಸುಧಾರಿಸಲು ಕ್ಷೇತ್ರ-ಆಧಾರಿತ ಸಂಶೋಧನಾ ಯೋಜನೆಗಳನ್ನು ರೂಪಿಸುವುದು ಮತ್ತು ಕಾರ್ಯಗತಗೊಳಿಸುವುದು ಅವರ ಆದ್ಯತೆಗಳಲ್ಲಿ ಸೇರಿದೆ ಎಂದು ಡಾ. ದೀಪಾ ಹೇಳಿದ್ದಾರೆ.

ಮಲ್ಬೆರಿ ಮತ್ತು ರೇಷ್ಮೆ ಗೂಡು ಉತ್ಪಾದನಾ ಪ್ರಕ್ರಿಯೆಗಳಿಂದ ಉಪ-ಉತ್ಪನ್ನ ಅಭಿವೃದ್ಧಿ ಮೂಲಕ ಮೌಲ್ಯವರ್ಧನೆಯೊಂದಿಗೆ ಪಾಲುದಾರರಿಗೆ ಕಡಿಮೆ-ವೆಚ್ಚದ, ಪರಿಸರ ಸ್ನೇಹಿ ಮತ್ತು ಬಳಕೆದಾರ ಸ್ನೇಹಿ ತಂತ್ರಜ್ಞಾನಗಳ ಅಭಿವೃದ್ಧಿ ಸಹ ಪ್ರಮುಖ ಆದ್ಯತೆಯ ಕ್ಷೇತ್ರವಾಗಿದೆ.

ಕೇಂದ್ರ ರೇಷ್ಮೆ ಮಂಡಳಿಯ ಪ್ರಮುಖ ಕಾರ್ಯಕ್ರಮ ನನ್ನ ರೇಷ್ಮೆ ನನ್ನ ಹೆಮ್ಮೆ ಅನ್ನು ಮೈಸೂರಿನ ಸಿಎಸ್‌ ಆರ್‌ಟಿಐ ಏಳು ರಾಜ್ಯಗಳಲ್ಲಿ ಪೂರ್ಣ ಉತ್ಸಾಹ ಮತ್ತು ಹುರುಪಿನಿಂದ ಜಾರಿಗೆ ತರುತ್ತಿದೆ.

ಈ ಉಪಕ್ರಮವು ಯುವಜನರನ್ನು ರೇಷ್ಮೆ ಕೃಷಿಯತ್ತ ಆಕರ್ಷಿಸುವ ಗುರಿಯನ್ನು ಹೊಂದಿದು ಎಂದು ಡಾ.ದೀಪಾ ಅವರು ಹೇಳಿದರು.

ಜುಲೈ 2025 ರಲ್ಲಿ ಪ್ರಾರಂಭವಾದ 100 ದಿನಗಳ ಮೇರಾ ರೇಷಮ್ ಮೇರಾ ಅಭಿಮಾನ್ ಸೆಪ್ಟೆಂಬರ್ 2025 ರಲ್ಲಿ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. ಮೈಸೂರಿನ ಸಿಎಸ್‌ ಆರ್‌ಟಿಐನಲ್ಲಿ ವಿವಿಧ ವಿಭಾಗಗಳಿಂದ ಒಟ್ಟು 80 ವಿಜ್ಞಾನಿಗಳು ಕೆಲಸ ಮಾಡುತ್ತಿದ್ದಾರೆ. ಇದು ಕೇಂದ್ರ ರೇಷ್ಮೆ ಮಂಡಳಿಯ ಅಡಿಯಲ್ಲಿ ಬರುತ್ತದೆ. ಇದು ಭಾರತದ ಪ್ರಮುಖ ಉಷ್ಣವಲಯದ ರೇಷ್ಮೆ ಕೃಷಿ ಸಂಶೋಧನಾ ಸಂಸ್ಥೆಯಾಗಿದ್ದು, ಏಳು ರಾಜ್ಯಗಳಲ್ಲಿ ಮಲ್ಬೆರಿ ರೇಷ್ಮೆ ಕೃಷಿ ವಲಯಕ್ಕೆ ಸೇವೆ ಸಲ್ಲಿಸುತ್ತದೆ. ಸಂಶೋಧನೆ, ತರಬೇತಿ ಮತ್ತು ವಿಸ್ತರಣೆ ಮತ್ತು ಸಲಹಾ ಸೇವೆಗಳನ್ನು ಒದಗಿಸುತ್ತದೆ ಎಂದು ಡಾ.ದೀಪಾ ಅವರು ವಿವರಿಸಿದರು.