ಡಾ. ಜಾನಪದ ಬಾಲಾಜಿ ಅವರಿಗೆ ಮೇರಾ ಯುವ‌ ಭಾರತ್ ಗೌರವ

ಬೆಂಗಳೂರು: 17 ನೇ ಬುಡಕಟ್ಟು ವಿನಯ ಕಾರ್ಯಕ್ರಮ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ ಜಾನಪದ ಬಾಲಾಜಿ ಅವರನ್ನು
ಮೇರಾ ಯುವ‌ ಭಾರತ್ ಗೌರವ‌ ನೀಡಿ ಸನ್ಮಾನಿಸಲಾಯಿತು.

ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಡಾ ಜಾನಪದ ಬಾಲಾಜಿ ಅವರನ್ನು ಗೌರವಿಸಿದರು.

ಬೆಂಗಳೂರಿನ ಪದ್ಮನಾಭನಗರದ ರೀಜಿನಲ್ ಇನ್ಸ್ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೇಜ್ಮೆಂಟ್ ಸಭಾಂಗಣದಲ್ಲಿ ಭಾರತ ಸರ್ಕಾರ ಗೃಹ ಮಂತ್ರಾಲಯ, ಯುವ ಕಾರ್ಯ ಹಾಗೂ ಕ್ರೀಡಾ ಮಂತ್ರಾಲಯ ಸಿ ಆರ್ ಪಿ ಎಫ್, ಬಿಎಸ್ಎಫ್, ಮೈ ಭಾರತ, ಮೇರಾ ಯುವ ಭಾರತ್ ಸಂಯುಕ್ತ ಆಶ್ರಯದಲ್ಲಿ 17 ನೇ ಬುಡಕಟ್ಟು ವಿನಿಮಯ ಕಾರ್ಯಕ್ರಮ ಸಮಾರೋಪ ಸಮಾರಂಭ
ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದಲ್ಲಿ ಆರ್ ಅಶೋಕ್ ಅವರು ಡಾ ಜಾನಪದ ಬಾಲಾಜಿ ಅವರನ್ನು ಗೌರವಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ ನವೀನ್ ರಾಜ್ ಸಿಂಗ್, ಮೇರಾ ಯುವ ಭಾರತ್ ಪ್ರಾಂತಿಯ ನಿರ್ದೇಶಕ ಅಶೋಕ್ ದಾಸ್, ನೆಹರು ಯುವ ಕೇಂದ್ರದ ನಿವೃತ್ತ ನಿರ್ದೇಶಕ ಎಂ ಎನ್ ನಟರಾಜ್, ಮೈ ಭಾರತ ಬೆಂಗಳೂರು ನಗರ ಜಿಲ್ಲೆಯ ಯುವ ಅಧಿಕಾರಿ ನಾಗಲಕ್ಷ್ಮಿ, ರೀಜನಲ್ ಸೆಂಟರ್ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.