ಧರ್ಮಸ್ಥಳ ಎಸ್ಐಟಿ ಹಿಂದೆ ಷಡ್ಯಂತ್ರ:ಸಿಎಂ ಉತ್ತರಿಸಲಿ-ಅಶೋಕ್‌ ಆಗ್ರಹ

Spread the love

ಬೆಂಗಳೂರು: ಧರ್ಮಸ್ಥಳ ಎಸ್ಐಟಿ ಹಿಂದೆ ಷಡ್ಯಂತ್ರ ಇದೆ ಎಂಬುದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ಒಪ್ಪಿಕೊಂಡಿದ್ದಾರೆ,ಹಾಗಾಗಿ ಇದನ್ನು ಬಹಿರಂಗಪಡಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.

ಈ ಷಡ್ಯಂತ್ರ ಏನು, ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ, ಅವರ ಉದ್ದೇಶ ಏನು, ಇದೆಲ್ಲಾ ಕಾಂಗ್ರೆಸ್ ನಾಯಕರಾದ ರಾಹುಲ್‌ ಗಾಂಧಿ, ಸುರ್ಜೇವಾಲ ಅವರ ಸೂಚನೆಯಂತೆ ನಡುತ್ತಿದೆಯೇ ಎಂದು ಟ್ವೀಟ್ ಮಾಡಿ ಅಶೋಕ ಪ್ರಶ್ನಿಸಿದ್ದಾರೆ.

ಇವೆಲ್ಲಕ್ಕೂ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.