ಅಭಿವೃದ್ಧಿ ಕಾಮಗಾರಿಗಳಿಗೆ ಮಂಜುನಾಥ್ ಗುದ್ದಲಿ ಪೂಜೆ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೂದು ನೀರು ನಿರ್ವಹಣೆ ಹಾಗೂ ಇನ್ನಿತರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಹನೂರು ಶಾಸಕ ಎಂ.ಆರ್. ಮಂಜುನಾಥ್ ಗುದ್ದಲಿ ಪೂಜೆ ನೆರವೇರಿಸಿದರು.

ನರೇಗಾ ಯೋಜನೆ ಹಾಗೂ ಪಿ.ಆರ್.ಇ.ಡಿ ಇಲಾಖೆಯ ಸುಮಾರು 2.50 ಕೋಟಿ ರೂ. ವಿಶೇಷ ಅನುದಾನದಲ್ಲಿ ಕೈಗೊಳ್ಳುವ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದರು.

ಮಧುವನಹಳ್ಳಿ ಗ್ರಾಮದ ಉಪ್ಪಾರರ ಎರಡು ಬಡಾವಣೆಗಳಲ್ಲಿ ಪಿ.ಆರ್.ಇ.ಡಿ ಇಲಾಖೆಯ ವಿಶೇಷ ಅನುದಾನದಡಿ 70 ಲಕ್ಷ ರೂ ವೆಚ್ಚದಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿ, ಹಾಗೂ ನರೇಗಾ ಯೋಜನೆಯಡಿ 9,21 ಲಕ್ಷ ರೂ ಸೇರಿದಂತೆ 2.8 ಕೋಟಿ ರೂ. ವೆಚ್ಚದಲ್ಲಿ ಬೂದು ನೀರು ನಿರ್ವಹಣೆ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಹಾಗೆಯೇ ದೊಡ್ಡಿಂದುವಾಡಿ ಗ್ರಾಮದಲ್ಲಿ 5.ಲಕ್ಷ ರೂ ವೆಚ್ಚದಲ್ಲಿ ಬೂದು ನೀರು ನಿರ್ವಹಣೆ, ಸಿಂಗನಲ್ಲೂರು ಗ್ರಾಮದಲ್ಲಿ 26 ಲಕ್ಷ ರೂ ವೆಚ್ಚದಲ್ಲಿ ಬೂದು ನೀರು ನಿರ್ವಹಣೆ, ಸತ್ತೇಗಾಲ ಗ್ರಾಮದಲ್ಲಿ 10 ಲಕ್ಷ ರೂ ವೆಚ್ಚದಲ್ಲಿ ಬೂದು ನೀರು ನಿರ್ವಹಣೆ, ಕಾಮಗಾರಿಗಳಿಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ತಾಲೂಕಿನ ಮದವನಹಳ್ಳಿ ಗ್ರಾಮದ ಅಂಬೇಡ್ಕರ್ ಸಮುದಾಯ ಭವನದಲ್ಲಿ 14 ಲಕ್ಷ ವೆಚ್ಚದ ಶೌಚಾಲಯ ನಿರ್ಮಾಣ ಕಾಮಗಾರಿಗೂ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಶಾಸಕರು, ಬೂದು ನೀರು ನಿರ್ವಹಣೆ ಯೋಜನೆಯು ರಾಜ್ಯ ಸರಕಾರದ ಮಹತ್ವಕಾoಕ್ಷೆ ಯೋಜನೆಯಾಗಿದ್ದು ಹಿಂದೆ ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ ಹಾಗೂ ನಗರಪಾಲಿಕೆಗಳಲ್ಲಿ ಈ ಯೋಜನೆಯನ್ನು ಕಾಣುತ್ತಿದ್ದೆವು. ಈಗ ಸರ್ಕಾರ ಗ್ರಾ. ಪಂ ಮಟ್ಟದಲ್ಲೂ ಈ ಯೋಜನೆ ಕೈ ಗೊಂಡಿದೆ ಎಂದು ತಿಳಿಸಿದರು.

ನೈರ್ಮಲ್ಯ ತಡೆಗಟ್ಟುವುದು ಇದರ ಮೂಲ ಉದ್ದೇಶ, ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡಲು ಸಹಕಾರಿಯಾಗಲಿದೆ. ಹಲವಾರು ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ, ಗ್ರಾಮದ ಮನೆ ಮನೆಯಿಂದ ಹೊರಹೊಮ್ಮುವ ನೀರು ಒಂದೆಡೆ ನಿಂತು ಬೂದು ಬಣ್ಣಕ್ಕೆ ತಿರುಗುತ್ತದೆ. ಈ ಎಲ್ಲಾ ನಿರುಪಯುಕ್ತ ನೀರನ್ನು ಒಂದು ಸೋಪ್ ಫಿಟ್ ಮಾಡಿ ಅಲ್ಲಿ ಒಂದೆಡೆ ಶೇಖರಣೆ ಮಾಡಿ ಅಲ್ಲಿ ತಿಳಿಯಾದ ನೀರನ್ನು ಮುಂದೆ ಹೋಗಿ ವೆಟ್ ಲ್ಯಾಂಡ್ ನಿರ್ಮಾಣ ಮಾಡಲಾಗುತ್ತದೆ. ಅಲ್ಲಿ ಶುದ್ಧವಾದ ನೀರನ್ನು ಕೃಷಿ ಚಟುವಟಿಕೆಗಳಿಗೆ ಮರುಬಳಕೆ ಮಾಡಲಾಗುವುದು ಹಾಗೂ ಉಳಿದ ನೀರು ಹಳ್ಳ ಸೇರುವಂತೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ವಿವರಿಸಿದರು.

ಗುತ್ತಿಗೆದಾರರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಸದಸ್ಯರು, ಗ್ರಾಮಸ್ಥರು ಹೇಳುವ ಸಮಸ್ಯೆ ಶೀಘ್ರದಲ್ಲಿ ಬಗಹರಿಸಿ ಒಂದು ವಾರದ ಒಳಗಡೆ ಕಾಮಗಾರಿಯನ್ನು ಪ್ರಾರಂಭಿಸಿ ಮೂರು ತಿಂಗಳ ಒಳಗೆ ಮುಕ್ತಾಯಗೊಳಿಸಿ. ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ ಸಾರ್ವಜನಿಕರ ಸಹಕಾರದ ಜೊತೆ ಕೆಲಸ ಮಾಡಿ .ಗ್ರಾಮಸ್ಥರು ನಿಂತು ಗುಣಮಟ್ಟದ ಕಾಮಗಾರಿ ಮಾಡಿಸಿಕೊಳ್ಳಿ ಎಂದು ಮಂಜುನಾಥ್ ಸಲಹೆ ನೀಡಿದರು.

ಇದೇ ವೇಳೆ ಶಾಸಕ ಮಂಜುನಾಥ್ ಅವರಿಗೆ ಭಾರೀ ಗಾತ್ರದ ಗುಲಾಬಿ ಹಾರ ಹಾಕಿ‌ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಜಿಪಂ ತಾಂತ್ರಿಕ ಉಪ ವಿಭಾಗದ ಎ.ಇ.ಇ ಶಿವಪ್ರಸಾದ್ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎ.ಇ.ಇ ಸುಧನ್ವ ನಾಗ್, ನರೇಗಾ ಎ.ಡಿ ಗೋಪಾಲಕೃಷ್ಣ, ಮದುವನಹಳ್ಳಿ ಗ್ರಾಪಂ ಅಧ್ಯಕ್ಷ ಸಿದ್ದಪ್ಪ ಸತ್ತೇಗಾಲ ಗ್ರಾ. ಪಂ. ಅಧ್ಯಕ್ಷ ಮಲ್ಲೇಶ್ ಸಿಂಗನಲ್ಲೂರುಗ್ರಾ. ಪಂ. ಅಧ್ಯಕ್ಷೆ ಗಂಗಮ್ಮ, ಸದಸ್ಯ ಚಿನ್ನಮತ್ತು, ಮುಖಂಡರುಗಳಾದ ಸಿಂಗನಲ್ಲೂರು ರಾಜಣ್ಣ, ಮಂಜೇಶ್, ಕಣ್ಣೂರು ಮಹಾದೇವ, ಹೆಚ್ ಆರ್ ಮಹಾದೇವ, ಪಾಳ್ಯ ಗೋಪಾಲ್ ನಾಯ್ಕ, ಶಿವಮೂರ್ತಿ, ಜೋಗಪ್ಪ, ಪ್ರಭುಸ್ವಾಮಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಜುನೈದ್ ಅಹ್ಮದ್, ಶೋಭರಾಣಿ, ಕಮಲ್ ರಾಜ್, ಮರಿಸ್ವಾಮಿ, ಶಿವಕುಮಾರ್, ಮಹೇಂದ್ರ ಹಾಗೂ ವಿವಿಧ ಗ್ರಾ. ಪಂ ಅಧ್ಯಕ್ಷರು, ಸದಸ್ಯರು ಹಾಗೂ ಜೆಡಿಎಸ್, ಬಿಜೆಪಿ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.