ದರ್ಶನ್ ಅಭಿಮಾನಿ ಬಳಗದಿಂದ ಸಂಕಷ್ಟ ಪರಿಹಾರಕ್ಕಾಗಿ ವಿಶೇಷ ಪೂಜೆ

Spread the love

ಮೈಸೂರು: ನೆಚ್ಚಿನ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಎದುರಾಗಿರುವ ಸಂಕಷ್ಟಗಳು ದೂರವಾಗಲಿ ಎಂದು ಪ್ರಾರ್ಥಿಸಿ ದರ್ಶನ್ ಅಭಿಮಾನಿ ಬಳಗದವರು
ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಚಾಮುಂಡೇಶ್ವರಿ ತಾಯಿ ಆಶೀರ್ವಾದ ಸದಾ ಡಿ ಬಾಸ್ ಮೇಲಿರಲಿ, ಎಂದು ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಯ ಮೊರೆ ಹೋಗಿದ್ದಾರೆ ದರ್ಶನ್ ಅಭಿಮಾನಿಗಳು.

ಈ ಸಂದರ್ಭದಲ್ಲಿ ದರ್ಶನ್ ಅವರ ಭಾವಚಿತ್ರ ಹಿಡಿದು ಸ್ಟ್ಯಾಂಡ್ ವಿತ್ ದರ್ಶನ್ ಎಂದು ಘೋಷಣೆ ಕೂಗಿ ಅವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ದರ್ಶನ್ ಅಭಿಮಾನಿಗಳಾದ ಹರೀಶ್ ನಾಯ್ಡು, ನಿತೀಶ್ ಗೌಡ, ದೀಪಕ್, ಮಹಾನ್ ಶ್ರೇಯಸ್, ರಾಕೇಶ್, ರಾಜೇಶ್, ಮಂಗಳ, ರಾಜೇಶ್ವರಿ, ರುಕ್ಮಿಣಿ ಮತ್ತಿತರ ಅಭಿಮಾನಿಗಳು ಹಾಜರಿದ್ದರು.