ಮೈಸೂರು: ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಆಯ್ಕೆ ಸ್ವಾಗತಿಸಿ ದಲಿತ ಮಹಾಸಭಾ ದವರು
ಚಾಮುಂಡಿ ನಡಿಗೆ ಹಮ್ಮಿಕೊಳ್ಳಲು ಮುಂದಾದರು ಆದರೆ ಪೊಲೀಸರು ಅನುಮತಿ ನೀಡಲಿಲ್ಲ.
ದಲಿತ ಮಹಾಸಭಾ ದಿಂದ ನೂರಾರು ಮಂದಿ ಚಾಮುಂಡಿ ನಡಿಗೆ ಹೆಸರಲ್ಲಿ ಬೆಟ್ಟದ ಕಡೆಗೆ ಹೊರಟಿದ್ದರು.
ದಸರಾ ಮಹೋತ್ಸವ ವೇಳೆ ಪರ-ವಿರೋಧ ಮೆರವಣಿಗೆಯಿಂದ ಕಾನೂನು-ಸುವ್ಯವಸ್ಥೆಗೆ ಧಕ್ಕೆಯಾಗುವ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದೆ.
ಬಿಜೆಪಿ ಹಾಗೂ ಹಿಂದೂ ಜಾಗರಣಾ ವೇದಿಕೆಯವರನ್ನು ತಡೆದಂತೆಯೇ ಪೊಲೀಸರು ದಲಿತ ಮಹಾಸಭಾದವರನ್ನೂ ವಶಕ್ಕೆ ಪಡೆದರು.