ನಜರ್ ಬಾದ್ ನಟರಾಜ್ ಅವರಿಗೆ ಡಿ. ದೇವರಾಜ ಅರಸು ಸೇವಾರತ್ನ ಪ್ರಶಸ್ತಿ

ಮೈಸೂರು: ಕರ್ನಾಟಕ ಸೇನಾ ಪಡೆ ವತಿಯಿಂದ ಕೊಡಮಾಡುವ ಡಿ. ದೇವರಾಜ ಅರಸು ಸೇವಾರತ್ನ ಪ್ರಶಸ್ತಿಯನ್ನು
ನಜರ್ ಬಾದ್ ನಟರಾಜ್ ಅವರಿಗೆ ನೀಡಿ ಗೌರವಿಸಲಾಯಿತು.

ಕರ್ನಾಟಕ ಸೇನಾ ಪಡೆ ಪ್ರತಿ ವರ್ಷ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರನ್ನು ಗುರುತಿಸಿ ಡಿ. ದೇವರಾಜ ಅರಸು ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸುತ್ತಾ ಬಂದಿದೆ.

ಈ ವರ್ಷ ಸಮಾಜ ಸೇವೆ ಮತ್ತು 28 ವರ್ಷಗಳ ರಾಜಕೀಯ ಕ್ಷೇತ್ರದ ಸೇವೆಯನ್ನು ಗುರುತಿಸಿ ನಜರ್ ಬಾದ್ ನಟರಾಜ್ ಅವರಿಗೆ
ಡಿ.ದೇವರಾಜ ಅರಸು ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶ್ರೀ ಅವಧೂತ ಅರ್ಜುನ ಗುರೂಜಿ ಅವರು ನಜರ್ ಬಾದ್ ನಟರಾಜ್ ಅವರು ಪ್ರಶಸ್ತಿ ನೀಡಿ ಗೌರವಿಸಿದರು.

ಈ ವೇಳೆ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಆಲನಹಳ್ಳಿ ಚೇತನ್, ಹನುಮಂತಯ್ಯ, ಪ್ರಭಾಕರ್ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.