ಮೈಸೂರು: ಮೈಸೂರು ಹನುಮ ಹಬ್ಬವು ಡಿ.13 ರಂದು ನಡೆಯಲಿದ್ದು,ಹಬ್ಬದ
ಪೋಸ್ಟರ್ ಗಳನ್ನು ಮಾಜಿ ಸಚಿವ ಸಾ.ರಾ.ಮಹೇಶ್ ಬಿಡುಗಡೆಗೊಳಿಸಿದರು.
ಈ ವೇಳೆ ಮಾತನಾಡಿದ ಸಾ.ರಾ.ಮಹೇಶ್, ಡಿ.13 ರಂದು ಬೆಳಿಗ್ಗೆ 11 ಗಂಟೆಗೆ ಮೈಸೂರು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಮೈಸೂರು ಹನುಮ ಹಬ್ಬದ ಬೃಹತ್ ಮೆರವಣಿಗೆ ಪಕ್ಷಾತೀತವಾಗಿ ನಡೆಯಲಿದೆ ಎಂದು ತಿಳಿಸಿದರು.
ಎಲ್ಲಾ ಹನುಮ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶೋಭಾ ಯಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ನಾನು ಬರುವೆ ನೀವು ಬನ್ನಿ ನಿಮ್ಮವರನ್ನು ಕರೆ ತರುವ ಮೂಲಕ ಹನುಮನ ಕೃಪೆಗೆ ಪಾತ್ರರಾಗಿ ಎಂದು ಹನುಮ ಭಕ್ತರಿಗೆ ಸಾ.ರಾ.ಮಹೇಶ್ ಕರೆ ನೀಡಿದರು.
ಈ ಸಂದರ್ಭದಲ್ಲಿ ಹನುಮ ಭಕ್ತರಾದ ಸಂಜಯ್, ಸಂತೋಷ್ (ಶಂಭು),ಎಸ್ ಪ್ರಕಾಶ್ ಪ್ರಿಯಾದರ್ಶನ್,ಕೆ. ಚಂದ್ರು ಗೌಡ, ಹೇಮಂತ್ ಗೌಡ,ಜೀವನ್, ನವೀನ್, ರಂಜನ ಮತ್ತಿತರ ಹನುಮ ಭಕ್ತರು ಹಾಜರಿದ್ದರು.
ಡಿ.13 ಮೈಸೂರು ಹನುಮ ಹಬ್ಬ: ಪೋಸ್ಟರ್ ಬಿಡುಗಡೆಗೊಳಿಸಿದ ಸಾ.ರಾ. ಮಹೇಶ್