ಚಂದನ್ ಕೆ ಪಿ ಅವರಿಗೆ ಅಭಿನಂದನೆಗಳ ಸುರಿಮಳೆ

ಮೈಸೂರು: ಪ್ರಥಮ ರಾಂಕ್ ಪಡೆದಿರುವ
ರೈತಾಪಿ ಕುಟುಂಬದ ಚಂದನ್ ಕೆ ಪಿ ಅವರಿಗೆ ಅಭಿನಂದನೆಗಳ ಸುರಿಮಳೆ ಸುರಿದಿದೆ.

ಕರ್ನಾಟಕ ಸರ್ಕಾರದ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಥಮ ಧರ್ಜೆ ಪದವಿ ಕಾಲೇಜುಗಳಲ್ಲಿನ 1242 ಸಹಾಯಕ ಪ್ರಧ್ಯಾಪಕ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ‌ ನಡೆದಿತ್ತು.

ಈ ಪರೀಕ್ಷೆಯಲ್ಲಿ ಸಮಾಜ ಕಾರ್ಯ ವಿಷಯದಲ್ಲಿ ರಾಜ್ಯಕ್ಕೆ ಕಡಕೋಳದ ರೈತಾಪಿ ಕುಟುಂಬದ ಚಂದನ್ ಕೆ ಪಿ ಅವರು ಪ್ರಥಮ ರಾಂಕ್ ಪಡೆದು ಕೀರ್ತಿ ತಂದಿದ್ದಾರೆ.

ಚಂದನ್ ಅವರ ಸಾಧನೆಯನ್ನು ಕಡಕೋಳದ ಯುವ ಮಿತ್ರರು, ಕಡಕೋಳ ವಾರಿಯರ್ಸ್ ತಂಡದವರು, ಅಡ್ಡಬಾಯ್ಸ್ ತಂಡದವರು ಹಾಗೂ ಹಲವಾರು ಯುವಕರು ಶ್ಲಾಘಿಸಿ,ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.