ಮೈಸೂರು: ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ಅವರಿಗೆ ಚಾಮುಂಡೇಶ್ವರಿ ಬಳಗದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಎನ್. ವಿಷ್ಣುವರ್ಧನ್ ಅವರಿಗೆ
ರಾಜ್ಯ ಸರ್ಕಾರದಿಂದ ಪಧೋನ್ನತಿ ಸಿಕ್ಕಿದೆ.ಹಾಗಾಗಿ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.

ನೂತನ ಎಎಸ್ ಪಿಯಾಗಿ ನೇಮಕವಾಗಿರುವ ಮಲ್ಲಿಕ್ ಅವರನ್ನು ಚಾಮುಂಡೇಶ್ವರಿ ಬಳಗದ ವತಿಯಿಂದ ಅಭಿನಂದಿಸಲಾಯಿತು.
ಚಾಮುಂಡೇಶ್ವರಿ ಬಳಗದ ಅಧ್ಯಕ್ಷ ಹಾಗೂ ಕೆಪಿಸಿಸಿ ಸದಸ್ಯ ನಜರ್ ಬಾದ್ ನಟರಾಜ್, ಪಂಚಾಯತ್ ರಾಜ್ ಕಾರ್ಯದರ್ಶಿ ಲೋಕೇಶ್, ರಮೇಶ ರಾಮಪ್ಪ, ಸುನಿಲ್ ನಾರಾಯಣ್ ಮತ್ತು ರಾಜಶೇಖರ್ ಅವರುಗಳು ವಿಷ್ಣುವರ್ಧನ್ ಮತ್ತು ಮಲ್ಲಿಕ್ ಅವರುಗಳನ್ನು ಶಾಲು ಹೊದಿಸಿ, ಹಾರ ಹಾಕಿ ಗೌರವಿಸಿ ಶುಭ ಕೋರಿದರು.