ಮೈಸೂರು: ಮನಮೋಹನ್ ಸಿಂಗ್ ರವರು ಮೌನಿಯಲ್ಲ ಮಹಾನ್ ಜ್ಞಾನಿ ಎಂದು ಗೃಹಶೋಭೆ ಕೃಷ್ಣ ತಿಳಿಸಿದರು.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಗೃಹಶೋಭೆ ವಸ್ತುಪ್ರದರ್ಶನದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರವರಿಗೆ ಗೃಹಶೋಭೆ ಸಾಂಸ್ಕೃತಿಕ ವೇದಿಕೆಯಲ್ಲಿ ಕಲಾವಿದರಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ವೇಳೆ ಅವರು ಮಾತನಾಡಿದರು.
ಈ ವೇಳೆ ಗೃಹಶೋಭೆ ವ್ಯವಸ್ಥಾಪಕರಾದ ಕಷ್ಣ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ನಂತರ ಮಾತನಾಡಿದ ಅವರು, ಅಮೇರಿಕ, ರಷ್ಯಾ ಇಂಗ್ಲೆಂಡ್ ಸೇರಿದಂತೆ ಅನೇಕ ದೇಶಗಳು ಭಾರತದ ಕಡೆ ತಿರುಗಿ ನೋಡುವಂತೆ ಜಾಗತಿಕ ಮನ್ನಣೆ,ಬರುವಂತೆ ಮಾಡಿದವರು ಮನಮೋಹನ್ ಸಿಂಗ್ ಅವರು ಎಂದು ತಿಳಿಸಿದರು.
ಆಡಳಿತದಲ್ಲಿ ಅಭಿವೃದ್ಧಿ ಕೆಲಸ ಮಾಡಿ ದೇಶದೆಲ್ಲೆಡೆ ರಾಜಕೀಯ ವ್ಯವಸ್ಥೆಯಲ್ಲಿ ಪದವೀಧರ ಪ್ರಜ್ಞಾವಂತ ಸಮಾಜ ಕಟ್ಟಿದವರು ಮನಮೋಹನ್ ಸಿಂಗ್ ಅವರು, ಆಧಾರ್ ಕಾರ್ಡ್ ಜಾರಿ, ಅರಣ್ಯ ಭೂಮಿ ಹಕ್ಕು ಕಾಯ್ದೆ, ಆಶಾ ಕಾರ್ಯಕರ್ತರ ಯೋಜನೆ, ನರೇಗಾ ಮಾಹಿತಿ ಹಕ್ಕು, ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದು ದೇಶದ ಭವಿಷ್ಯಕ್ಕೆ ಆರ್ಥಿಕ ವ್ಯವಸ್ಥೆಯ ಭದ್ರಬುನಾದಿ ಹಾಕಿದರು ಎಂದು ಕೃಷ್ಣ ಬಣ್ಣಿಸಿದರು.
ನಮ್ಮ ಮಾತಿಗಿಂತ ಕಲಸವೇ ಮಾತಾಗಬೇಕು ಎನ್ನುವುದಕ್ಕೆ ನಿದರ್ಶನವಾಗಿ ಮೌನಿಯಲ್ಲ ದೇಶದ ಮಹಾನ್ ಜ್ಞಾನಿಯಾದವರು ಮನಮೋಹನ್ ಸಿಂಗ್ ಎಂದು ಸ್ಮರಿಸಿದರು.

ಈ ಸಂಧರ್ಭದಲ್ಲಿ ನಿರೂಪಕ ಅಜಯ್ ಶಾಸ್ತ್ರಿ, ಗಾಯಕರಾದ ಸೇತುರಾಂ, ಜಗದೀಶ್, ಸುಬ್ರಹ್ಮಣ್ಯ, ಮೀನಾಕ್ಷಿ ಚಟ್ನಿ, ವಿಶ್ವನಾಥ್, ಮೋಹನ್ ಕುಮಾರ್, ಶ್ರೀನಿವಾಸ್, ಸುಮಾ ಮತ್ತಿತರರು ಹಾಜರಿದ್ದರು.