ಚಾಮುಂಡಿ ಬೆಟ್ಟದ ಮೆಟ್ಟಿಲುಗಳಿಗೆ ಕುಂಕುಮ: ಶ್ರದ್ಧೆಯ ಜೊತೆ ಸುರಕ್ಷತೆ ಮುಖ್ಯ

Spread the love

ಮೈಸೂರು: ಮೈಸೂರು ನಗರದ ಪುರಾಣ ಪ್ರಸಿದ್ದ ಚಾಮುಂಡಿ ಬೆಟ್ಟ, ನಾಡ ಅದಿದೇವತೆ ದೇವಿ ಚಾಮುಂಡೇಶ್ವರಿ ತಾಯಿಯ ಪವಿತ್ರ ಸ್ಥಾನ.

ಪ್ರತಿ ದಿನವೂ ಸಾವಿರಾರು ಭಕ್ತರು ತಾಯಿಯ ದರ್ಶನಕ್ಕಂದು ಬೆಟ್ಟ ಹತ್ತುತ್ತಾರೆ. ತಮ್ಮ ಹರಕೆ ತೀರಿಸಲು, ಕೃತಜ್ಞತೆ ವ್ಯಕ್ತಪಡಿಸಲು ಹಲವಾರು ಮಹಿಳೆಯರು ಬೆಟ್ಟದ ಮೆಟ್ಟಲುಗಳಿಗೆ ಶ್ರದ್ಧೆಯಿಂದ ಕುಂಕುಮ ಹಚ್ಚುವ ಪದ್ಧತಿ ಅನುಸರಿಸುತ್ತಿದ್ದಾರೆ. ಈ ಪದ್ಧತಿ ಭಕ್ತಿ,ಶ್ರದ್ಧೆಯ ಪ್ರತೀಕವಾಗಿದೆ.

ಕುಂಕುಮ ಧಾರ್ಮಿಕ ಮಹತ್ವದ ಸಂಕೇತ,
ಕುಂಕುಮವು ಹಿಂದೂ ಧರ್ಮದಲ್ಲಿ ಮಂಗಳದ ಪ್ರತೀಕ. ಅರಿಶಿನ ಮತ್ತು ಸುಣ್ಣದಿಂದ ತಯಾರಾಗುವ ಈ ಕುಂಕುಮ ದೇವಿಗೆ ಅರ್ಪಣೆ, ಹಣೆಯಲ್ಲಿ ತಿಲಕ, ಹಾಗು ಹಬ್ಬಹರಿ ದಿನಗಳಲ್ಲಿ ಪ್ರಮುಖವಾಗಿ ಬಳಸಲಾಗುತ್ತದೆ. ಭಕ್ತಿಯ ಮನೋಭಾವದಲ್ಲಿ, ತಾಯಿಗೆ ಅರ್ಪಿಸುವ ಈ ಕುಂಕುಮ ಹರಕೆ, ಆತ್ಮತೃಪ್ತಿ ನೀಡುತ್ತದೆ.

ಆದರೆ ಇದರಿಂದ ಇತ್ತೀಚೆಗೆ ಏನೆಲ್ಲಾ ಸಮಸ್ಯೆಗಳು ಕಾಡುತ್ತಿದು ಯಾರ ಅರಿವಿಗೂ ಬರುತ್ತಿಲ್ಲ.

ಇತ್ತೀಚಿನ ದಿನಗಳಲ್ಲಿ ಕುಂಕುಮ ಬಳಸುವ ವಿಧಾನದಲ್ಲಿ ಬದಲಾವಣೆ ಕಂಡು ಬರುತ್ತಿದೆ. ಈಗ ತಯಾರಾಗುತ್ತಿರುವ ಕೆಲವೊಂದು ಕುಂಕುಮಗಳಲ್ಲಿ ರಾಸಾಯನಿಕ ಮಿಶ್ರಣಗಳಿದ್ದು,ಇದು ಭಕ್ತರ ಪಾದಗಳಿಗೆ ಅಂಟಿ ಜಾರುವಿಕೆಗೆ ಕಾರಣವಾಗುತ್ತಿದೆ.

ವಿಶೇಷವಾಗಿ ಮಳೆಯ ದಿನಗಳಲ್ಲಿ ಅಥವಾ ಮೆಟ್ಟಿಲು ಒದ್ದೆಯಾದಾಗ, ಇದು ಬಹಳ ಅಪಾಯಕರಿ, ಹಲವಾರು ಭಕ್ತರು ಜಾರಿ ಗಾಯಗೊಂಡ ಉದಾಹರಣೆ ಕೂಡಾ ಇದೆ.

ಇತ್ತೀಚಿನ ದಿನಗಳಲ್ಲಿ ಮೆಟ್ಟಿಲುಗಳ ಮೇಲೆ ಕುಂಕುಮದ ಕೆಂಪು ಬಣ್ಣದ ಕಲೆಗಳು ಬೆಟ್ಟದ ಅಂದಕ್ಕೆ, ಸ್ವಚ್ಛತೆಗೆ ಧಕ್ಕೆಯಾಗುತ್ತಿದೆ.ಈ ಹಿನ್ನೆಲೆಯಲ್ಲಿ, ಚಾಮುಂಡೇಶ್ವರಿ ದೇವಾಲಯದ ಆಡಳಿತ ಮಂಡಳಿ ಹಾಗೂ ಸಾರ್ವಜನಿಕರ ಪರವಾಗಿ, ಎಲ್ಲ ಭಕ್ತರಿಗೆ ವಿನಮ್ರ ಮನವಿ ಏನೆಂದರೆ ನಿಮ್ಮ ಭಕ್ತಿಯ ಹರಕೆಯನ್ನು ಚಾಮುಂಡಿ ಬೆಟ್ಟದ ಪಾದದಲ್ಲಿ ಅಥವಾ ನಿಗದಿತ ಸ್ಥಳದಲ್ಲಿ ಮಾತ್ರ ಕುಂಕುಮ ಹಚ್ಚುವ ಮೂಲಕ ತೀರಿಸಿಕೊಳ್ಳಬೇಕು ಎಂದು ಒಂದು ಹೆಜ್ಜೆ ರಕ್ತದಾನಿಗಳ ಬಳಗ ಮೈಸೂರು ಜಿಲ್ಲೆ ಅಧ್ಯಕ್ಷ
ರಕ್ತದಾನಿ ಮಂಜು ಮನವಿ ಮಾಡಿದ್ದಾರೆ.

ನಿಮ್ಮ ಶ್ರದ್ಧೆಗೆ ಭಂಗವಾಗದೆ, ಇತರರಿಗೂ ತೊಂದರೆ ಆಗದ ಮಾರ್ಗವೇ ನಿಜವಾದ ಜವಾಬ್ದಾರಿಯ ಭಕ್ತಿ ಎಂದು
ರಕ್ತದಾನಿ ಮಂಜು ತಿಳಿಹೇಳಿದ್ದಾರೆ.