ಮೈಸೂರು: ಚಾಮುಂಡೇಶ್ವರಿ ಬೆಟ್ಟದ ದರ್ಶನ ಹಾಗೂ ಸೇವೆಗಳ ಶುಲ್ಕ ಏರಿಸಿರುವುದನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ಸದಸ್ಯರು ಮೈಸೂರಿನ ಹಳೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ, ಪ್ರತಿನಿತ್ಯ ಒಂದಲ್ಲ ಒಂದು ದಿನನಿತ್ಯ ಪದಾರ್ಥಗಳ ಬೆಲೆಗಳನ್ನು ಏರಿಕೆ ಮಾಡಿ ಜನರು ಜೀವನ ನಡೆಸುವುದೇ ದುಸ್ತರವಾಗಿದೆ. ಈಗಾಗಲೇ ಕೋಟ್ಯಂತರ ಆದಾಯವಿರುವ ಚಾಮುಂಡಿ ಬೆಟ್ಟದಲ್ಲಿ, ಸರ್ಕಾರ ಭಕ್ತಾದಿಗಳಿಗೆ ಅನುಕೂಲಗಳನ್ನು ಮಾಡಿಕೊಡದೆ, ಅವರನ್ನೇ ಲೂಟಿ ಮಾಡಲು ಹೊರಟಿರುವುದು ಖಂಡನೀಯ ಎಂದು ಪ್ರತಿಭಟನಾನಿರತರು ಕಿಡಿಕಾರಿದರು.
ಚಾಮುಂಡಿ ಬೆಟ್ಟದಲ್ಲಿ ದೇವಸ್ಥಾನದಿಂದ ಪ್ರಸಾದದ ರೂಪದಲ್ಲಿ ನೀಡಲಾಗುವ ಲಡ್ಡು ದರವನ್ನು 15 ರೂಪಾಯಿಯಿಂದ 25 ರೂಪಾಯಿಗೆ ಏಕಾಏಕಿ ಹೆಚ್ಚಿಸಿರುವುದು ದೇವಿ ಭಕ್ತರಲ್ಲಿ ಆಕ್ರೋಶ ಉಂಟುಮಾಡಿದೆ.
ದೇವಿ ದರ್ಶನಕ್ಕೆ ಪ್ರವೇಶ ದರ 30 ರೂ. ನಿಂದ 50 ರೂ. ಗೆ ಹಾಗೂ 100 ರೂ. ನಿಂದ 200 ರೂ. ಗೆ ಅವೈಜ್ಞಾನಿಕವಾಗಿ ಹೆಚ್ಚಿಸಲಾಗಿದೆ
ಚಾಮುಂಡಿ ಬೆಟ್ಟದಲ್ಲಿ, ನಾಮಪಲಕದಲ್ಲಿ 20 ರೂ ನಿಂದ 15 ಸಾವಿರದ ತನಕ ವಿಶೇಷ ಸೇವೆಗಳಿವೆ. ಅದರಲ್ಲಿ 220 ಹಾಗೂ 300 ರೂಗಳ ಅಭಿಷೇಕ ಸೇವೆ ಯನ್ನು ಬಹಳ ಭಕ್ತಾದಿಗಳು ಪ್ರತಿದಿನ ಮಾಡಿಸುತ್ತಿದ್ದು, ಅದನ್ನು ಪ್ರಾಧಿಕಾರ ಈಗ ಅನಧಿಕೃತವಾಗಿ ತೆಗೆದುಹಾಕಿ ಬರಿ 550 ರೂಗಳನ್ನು ಅಭಿಷೇಕಕ್ಕಾಗಿ ಜನರಿಂದ, ಭಕ್ತಾದಿಗಳಿಂದ ವಸೂಲಿ ಮಾಡಲಾಗುತ್ತಿದೆ.
ಭಕ್ತಾದಿಗಳ ಮೇಲೆ ಸರ್ಕಾರ ಹೊರೆಹಾಕಲು ಹೊರಟಿರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ ಎಂದು ಈ ವೇಳೆ ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಬೆಟ್ಟಕ್ಕೆ ಆಗಮಿಸುವ ಭಕ್ತಾದಿಗಳಿಗೆ ಶುದ್ಧ ಕುಡಿಯುವ ನೀರು, ಸಮರ್ಪಕ ಶೌಚಾಲಯ ವ್ಯವಸ್ಥೆ ಹಾಗೂ ಆಯಾಸವನ್ನು ತಣಿಸಿಕೊಳ್ಳಲು ಸಮರ್ಪಕ ತಂಗುಧಾಣದ ವ್ಯವಸ್ಥೆಗಳನ್ನು ಮೊದಲು ಸರ್ಕಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಚಾಮುಂಡೇಶ್ವರಿ ಬೆಟ್ಟದಲ್ಲಿ ಹಸಿದು ದೇವಿಯ ದರ್ಶನ ಮಾಡಲು ಬರುವ ಭಕ್ತಾದಿಗಳಿಗೆ, ನಮ್ಮ ರಾಜ್ಯದ ಧರ್ಮಸ್ಥಳ, ಉಡುಪಿ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ನೀಡುವಂತಹ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.
ಕೂಡಲೇ ಮುಖ್ಯಮಂತ್ರಿಗಳು ಶೀಘ್ರ ಸಭೆ ನಡೆಸಿ ಇದಕ್ಕೆಲ್ಲಾ ಕಡಿವಾಣ ಹಾಕಿ ಎಲ್ಲಾ ದರ್ಶನ ಸೇವೆಗಳನ್ನು ಯಥಾ ಸ್ಥಿತಿಗೆ ತರಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿದ್ದರು, ಸುರೇಶ್ ಗೋಲ್ಡ್, ಪ್ರಭುಶಂಕರ, ಕೃಷ್ಣಪ್ಪ, ಹನುಮಂತೇಗೌಡ, ಗಿರೀಶ್, ಸಿಂದುವಳ್ಳಿ ಶಿವಕುಮಾರ್, ಬೋಗಾದಿ ಸಿದ್ದೇಗೌಡ, ಶಿವಲಿಂಗಯ್ಯ, ನೇಹಾ, ಮಂಜುಳಾ, ಮಧುವನ ಚಂದ್ರು, ಹೊನ್ನೇಗೌಡ, ತಾಯೂರು ಗಣೇಶ್, ಡಾ.ನರಸಿಂಹೇಗೌಡ, ಬಸವರಾಜು , ಭಾಗ್ಯಮ್ಮ, ಸುಜಾತಾ , ಪ್ರಭಾಕರ್, ಡಾ. ಶಾಂತರಾಜೇಅರಸ್, ರಾಧಾಕೃಷ್ಣ , ನಂದಕುಮಾರ್, ದರ್ಶನ್ ಗೌಡ, ಪ್ರದೀಪ್, ರಘು ಅರಸ್, ಶಿವರಾಂ, ಗಣೇಶ್ ಪ್ರಸಾದ್, ಚಂದ್ರಶೇಖರ್, ರವೀಶ್, ರವಿ ನಾಯಕ್ ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡಿದ್ದರು..
ಚಾಮುಂಡಿ ಬೆಟ್ಟದಲ್ಲಿ ಸೇವೆಗಳ ಶುಲ್ಕ ಏರಿಕೆ ಖಂಡಿಸಿ ಕರ್ನಾಟಕ ಸೇನಾ ಪಡೆ ಪ್ರತಿಭಟನೆ