ಮೈಸೂರು: ಮೈಸೂರಿನ ನಜರ್ ಬಾದ್ ನ ಕಾಮಟಗೇರಿಯಲ್ಲಿ ಮರುಗಾದೇವಿ ಮತ್ತು ಚಾಮುಂಡೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವ ಶ್ರದ್ಧೆ ಯಿಂದ ನಡೆದಿದೆ.
ಜಾತ್ರೆಯ ಅಂಗವಾಗಿ ಪ್ರಮುಖ ಬೀದಿಗಳಲ್ಲಿ ದೇವಿಯ ವಿಶೇಷ ಮೆರವಣಿಗೆ ಹಾಗೂ ಪೂಜಾ ಕಾರ್ಯಗಳು ನೆರವೇರಿದವು.
ಈ ವೇಳೆ ಚಾಮುಂಡೇಶ್ವರಿ ಕ್ಷೇತ್ರದ ಕೆಪಿಸಿಸಿ ಸದಸ್ಯ ನಜರ್ ಬಾದ್ ನಟರಾಜ್ ವಿಶೇಷ ಪೂಜೆ ಸಲ್ಲಿಸಿದರು.
ಪಂಚಾಯತ್ ರಾಜ್ ಕಾರ್ಯದರ್ಶಿ ಲೋಕೇಶ್,ಹಿರಿಯ ಕಾಂಗ್ರೆಸ್ ಮುಖಂಡ ರಾಜು ಎನ್,ನಿತೀಶ್ ಗೌಡ, ಬಸವ, ಚಂದ್ರು, ಉಮೇಶ,ವೆಂಕಟೇಶ, ರಾಜು, ಗಿರೀಶ,ರಾಮಿ ಹಾಗೂ ಮರುಗಾದೇವಿ ದೇವಸ್ಥಾನದ ಪದಾಧಿಕಾರಿಗಳು ಹಾಜರಿದ್ದರು.