ಕೊಳ್ಳೇಗಾಲ: ಚಾಮರಾಜನಗರ ತಾಲೂಕಿನ ಕೋಡಿ ಉಗ್ಗನೆ ಗ್ರಾಮದ ಕೆ ಎಸ್. ತನ್ಮಯ್ ಅವರು ಜೀ ಅಡ್ವಾನ್ಸ್ 2025 ಪರೀಕ್ಷೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ 131 ರ್ಯಾಂಕ್ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಉಗ್ಗನೆ ಗ್ರಾಮದ ಸರ್ವೆಶ್ ಸಿದ್ದಯ್ಯ ಅವರ ಮಗ ಎಸ್ ಶ್ರೀಧರ್ ಮತ್ತು ಮಂಜುಳಾ ದಂಪತಿಗಳ ಪುತ್ರ ಕೆ ಎಸ್. ತನ್ಮಯ್ ಇತ್ತೀಚಿಗೆ ನಡೆದ ಜೀ ಅಡ್ವಾನ್ಸ್ 2025 ಪರೀಕ್ಷೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ 131 ರ್ಯಾಂಕ್ ಪಡೆದಿದ್ದಾರೆ.
ಕೇರಳದ ಕೊಟ್ಟಾಯಮ್ ನ ಪಿ ಎಂ ಶ್ರೀ ಜವಹರ್ ನವೋದಯ ವಿದ್ಯಾಲಯದಲ್ಲಿ ಐ ಐ ಟಿ ಸಿ ಗೆ ಪ್ರವೇಶ ಪಡೆದು ವಿದ್ಯಾಭ್ಯಾಸ ಮಾಡುತ್ತಿದ್ದು ಜಿಲ್ಲೆಗೆ ಕೀರ್ತಿ ತಂದಿರುವ ತನ್ಮಯ್ ಅವರ ಸಾಧನೆಯನ್ನು ನಾಗರಿಕರು ಹಾಗೂ ಕುಟುಂಬದವರು ಬಂಧು ಬಳಗದವರು ಶ್ಲಾಘಿಸಿ ಅಭಿನಂದನೆ ಸಲ್ಲಿಸಿದ್ದಾರೆ.