ಹೊನ್ನಿಕುಪ್ಪೆ ಗ್ರಾಮಕ್ಕೆಸಿಕ್ಕಿತು ಸ್ಮಶಾನ ಜಾಗ- 7 ದಶಕಗಳ ಹೋರಾಟಕ್ಕೆ ಸಂದ ಜಯ

Spread the love

ಹುಣಸೂರು: ಸ್ಮಶಾನ‌ ಜಾಗಕ್ಕಾಗಿ ಏಳು ದಶಕಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದ ಹುಣಸೂರು ತಾಲ್ಲೂಕು, ಕಸಬಾ ಹೋಬಳಿ,ಹೊನ್ನಿಕುಪ್ಪೆ ಗ್ರಾಮದ ಜನತೆಗೆ ಕಡೆಗೂ ಜಯ ಸಿಕ್ಕಿದೆ.

ಉದ್ದೂರು ಕಾವಲ್‌ ಗ್ರಾಮದ
ಸ.ನಂ. 729 ರಲ್ಲಿ ಹೊನ್ನಿಕುಪ್ಪೆ ಗ್ರಾಮದ ಸಾರ್ವಜನಿಕ ಸ್ಮಶಾನ ಉದ್ದೇಶಕ್ಕೆ ಕಾಯ್ದಿರಿಸಿರುವ 1 ಎಕರೆ ಜಮೀನನ್ನು ಅಳತೆ ಮಾಡಿ, ಹದ್ದುಬಸ್ತು ಗುರುತಿಸಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸುವಂತೆ ಮೈಸೂರು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ಇದೇ ಜಮೀನಿನಲ್ಲಿ ಎರಡು ಎಕರೆ ಜಮೀನನ್ನು ಸರ್ಕಾರಿ ಶಾಲೆಗೆ ಮೀಸಲಿಡುವಂತೆಯೂ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕ ಪ್ರಜಾಪಾರ್ಟಿ ರೈತ ಪರ್ವ, ಹೊನ್ನಿಕುಪ್ಪೆ ಗ್ರಾಮ, ಹುಣಸೂರು ತಾಲೂಕು ಅಧ್ಯಕ್ಷ ಚಲುವರಾಜು ಅವರು 17-8-2024 ರಲ್ಲಿ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರು.

ಆ ಮನವಿ ಪತ್ರದಲ್ಲಿ ಹುಣಸೂರು ತಾಲ್ಲೂಕು, ಕಸಬಾ ಹೋಬಳಿ, ಉದ್ದೂರು ಕಾವಲ್ ಗ್ರಾಮದ ಸ.ನಂ. 729 ರಲ್ಲಿ ಹೊನ್ನಿಕುಪ್ಪೆ ಗ್ರಾಮದ ಸಾರ್ವಜನಿಕ ಸ್ಮಶಾನ ಉದ್ದೇಶಕ್ಕೆ ಕಾಯ್ದಿರಿಸಿರುವ 1 ಎಕರೆ ಜಮೀನನ್ನು ಅಳತೆ ಮಾಡಿ, ಹದ್ದುಬಸ್ತು ಗುರುತಿಸಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿಕೊಡುವಂತೆ ಚಲುವರಾಜು ಕೋರಿದ್ದರು.

ಇದೇ‌ ವಿಷಯಕ್ಕೆ ಸಂಬಂದಿಸಿದಂತೆ ಸುಮಾರು 70 ವರ್ಷಗಳಿಂದ ಗ್ರಾಮದ ಹಲವಾರು ಮುಖಂಡರು ಹೋರಾಟ ಮಾಡಿದ್ದರು.ಅವರಲ್ಲಿ ಈಗಾಗಲೇ ನಾಲ್ವರು ಮೃತಪಟ್ಟಿದ್ದಾರೆ.

ಇತ್ತೀಚೆಗೆ ಚಲುವರಾಜು ಅವರು ತಮ್ಮ ಗ್ರಾಮಕ್ಕೆ ಸ್ಮಶಾನ ಬೇಕೇಬೇಕೆಂದು ಪಟ್ಟುಹಿಡಿದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಚಲುವರಾಜು ಅವರು ಸಲ್ಲಿಸಿದ ಮನವಿ ಪತ್ರದ ಬಗ್ಗೆ ಪರಿಶೀಲಿಸಿದ ಮೈಸೂರು ಜಿಲ್ಲಾಧಿಕಾರಿಗಳು, ಕಸಬಾ ಹೋಬಳಿ, ಉದ್ದೂರು ಕಾವಲ್ ಗ್ರಾಮದ ಸ.ನಂ. 729 ರಲ್ಲಿ 1 ಎಕರೆ ಜಮೀನನ್ನು ಹೊನ್ನಿಕುಪ್ಪೆ ಗ್ರಾಮದ ಎಲ್ಲಾ ಜನಾಂಗದವರ ಸ್ಮಶಾನ ಉದ್ದೇಶಕ್ಕಾಗಿ ಕಾಯ್ದಿರಿಸುವಂತೆ ಆದೇಶಿಸಿದ್ದಾರೆ.

ಅದರಂತೆ ಸಂಬಂಧಪಟ್ಟ ಹೋಬಳಿಯ ರಾಜಸ್ವ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಳು, ತಾಲ್ಲೂಕು ಭೂಮಾಪಕರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಉದ್ದೂರು ಕಾವಲ್ ಗ್ರಾಮದ ಸ.ನಂ. 729 ರಲ್ಲಿ 1 ಎಕರೆ ಜಮೀನಿನ ಸ್ಥಳ ತನಿಖೆ ನಡೆಸಿ,ಆ ಜಮೀನನ್ನು ಅಳತೆ ಮಾಡಿ, ಸ್ಮಶಾನ ಜಮೀನನ್ನು ಸಂಬಂಧಪಟ್ಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದು,
ಚಲುವರಾಜು ಅವರ ಸಮ್ಮುಖದಲ್ಲಿ ಸ್ಮಶಾನ ಜಾಗದ ಬೋರ್ಡ್ ಅಳವಡಿಸಲಾಗಿದೆ.