ಫುಟ್‌ಬಾಲ್‌ ಆಟಗಾರ ಮೆಸ್ಸಿ ನೋಡಲಾಗದೆ ಅಭಿಮಾನಿಗಳ ದಾಂಧಲೆ!

ಕೋಲ್ಕತಾ: ಖ್ಯಾತ ಫುಟ್‌ಬಾಲ್‌ ಆಟಗಾರ ಲಿಯೋನೆಲ್ ಮೆಸ್ಸಿ 3 ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿದ್ದು,ಕೋಲ್ಕತ್ತಾ‌ ಕ್ರೀಡಾಂಗಣದಲ್ಲಿ ಅಭಿಮಾನಿಗಳು ದಾಂಧಲೆ ನಡೆಸಿದರು.

ಮೆಸ್ಸಿ ಬೆಳಿಗ್ಗೆ ಕೋಲ್ಕತ್ತಾಗೆ ಆಗಮಿಸಿ ಸಾಲ್ಟ್ ಲೇಕ್ ಕ್ರೀಡಾಂಗಣಕ್ಕೆ ಭೇಟಿ ನೀಡಿದರು. ಆದರೆ ಮೆಸ್ಸಿ ಕೇವಲ 10 ನಿಮಿಷ ಕ್ರೀಡಾಂಗಣದಲಿದ್ದು, ಅಲ್ಲಿಂದ ಹೊರಟುಬಿಟ್ಟರು.

ಮೆಸ್ಸಿ ನೋಡಲೆಂದೆ ಅಭಿಮಾನುಗಳು 5000 ದಿಂದ 50000 ಸಾವಿರದವರೆಗೆ ಟಿಕೆಟ್ ಕೊಟ್ಟು ಸ್ಟೇಡಿಯಂಗೆ ಬಂದಿದ್ದರು.ಆದರೆ ಮೆಸ್ಸಿಯನ್ನ ನೋಡಲಾಗದೇ ಹತಾಶೆಯಿಂದ ಸ್ಟೇಡಿಯಂನ ವಿಐಪಿ ಗೇಟ್​​​ನಿಂದ ಮೈದಾನಕ್ಕೆ ನುಗ್ಗಲು ಯತ್ನಿಸಿದರು.

ಈ ವೇಳೆ ಅಭಿಮಾನಿಗಳು ತೀವ್ರ ಆಕ್ರೋಶಗೊಂಡು ಆಸನಗಳನ್ನ ಮೈದಾನಕ್ಕೆ ಎಸೆದಿದ್ದಾರೆ. ಅಭಿಮಾನಿಗಳನ್ನ ಕಂಟ್ರೋಲ್ ಮಾಡಲು ಪೊಲೀಸರು ಹರಸಾಹಸ ಪಟ್ಟರು. ಅಭಿಮಾನಿಗಳು ಕೈಗೆ ಸಿಕ್ಕಿದ್ದನ ಭದ್ರತಾಪಡೆಗಳ ಮೇಲೂ ಎಸೆದಿದ್ದರೆ,ಒಂದು ಹಂತದಲ್ಲಿ ಅಭಿಮಾನಿಗಳ ದಾಂಧಲೆಯಿಂದ ತಪ್ಪಿಸಿಕೊಳ್ಳಲು ಪೊಲೀಸರು ಮೈದಾನಕ್ಕೆ ಓಡಿದರು.ಈ‌ ಸಂದರ್ಭದಲ್ಲಿ
ಕೆಲ ಸಿಬ್ಬಂದಿ ಗಾಯಗೊಂಡಿದ್ದಾರೆ.

ಫುಟ್‌ಬಾಲ್‌ ಆಟಗಾರ ಮೆಸ್ಸಿ ನೋಡಲಾಗದೆ ಅಭಿಮಾನಿಗಳ ದಾಂಧಲೆ! Read More

ಮೃತಪಟ್ಟ ಸೆರೆಸಿಕ್ಕ ನಾಲ್ಕೂ ಹುಲಿಮರಿಗಳು

ಮೈಸೂರು: ಇತ್ತೀಚೆಗೆ ತಾಲ್ಲೂಕು ಗೌಡನಕಟ್ಟೆ ಬಳಿ ಸೆರೆ ಸಿಕ್ಕಿದ್ದ ನಾಲ್ಕೂ ಹುಲಿಮರಿಗಳು ತಾಯಿಯ ಆರೈಕೆ ಇಲ್ಲದೆ ಮೃತಪಟ್ಟಿವೆ.

ಗೌಡನಕಟ್ಟೆಯ ಪ್ರಕಾಶ್‌ ಎಂಬುವರ ಜೋಳದ ಹೊಲದಲ್ಲಿ ನ. 28ರಂದು ನಾಲ್ಕು ಮರಿಗಳೊಂದಿಗೆ ತಾಯಿ ಹುಲಿ ಕಾಣಿಸಿಕೊಂಡಿತ್ತು.

ಮದ್ಯರಾತ್ರಿ ತಾಯಿ ಹುಲಿ ಸೆರೆಸಿಕ್ಕಿತ್ತು,ಎರಡು ದಿನಗಳ ನಂತರ ನಾಲ್ಕು ಹುಲಿಮರಿಗಳು ಪತ್ತೆಯಾಗಿದ್ದವು. ಎರಡು ದಿನ ತಾಯಿಯಿಂದ ದೂರವಾಗಿದ್ದ ಮರಿಗಳು ಆಹಾರವಿಲ್ಲದೆ ಬಳಲಿದ್ದವು.

ಸೆರೆ ಹಿಡಿಯುವಾಗಲೇ ಬಹಳ ನಿತ್ರಾಣಗೊಂಡಿದ್ದವು,ಕೂಡಲೇ ಕೂರ್ಗಳ್ಳಿ
ಪುನರ್ವಸತಿ ಕೇಂದ್ರಕ್ಕೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.

ಆದರೆ ತಾಯಿಯ ಆರೈಕೆ,ಹಾಲು ಇಲ್ಲದೆ ಗಾಬರಿಗೊಂಡಿದ್ದ ಮರಿಗಳು ಸೊರಗಿದ್ದವು.
ಸರಿಯಾಗಿ ಆಹಾರ ಸೇವಿಸುತ್ತಿರಲಿಲ್ಲ, ಅಸ್ವಸ್ಥಗೊಂಡಿದ್ದ ಹುಲಿ ಮರಿಗಳು ಸಾವನ್ನಪ್ಪಿದ್ದು,ಪಶುವೈದ್ಯರು ಹುಲಿ ಮರಿಗಳ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ತಾಯಿ ಹುಲಿ ಆರೋಗ್ಯವಾಗಿದೆ,
ಹುಲಿಮರಿಗಳ ಅಂಗಾಗಗಳನ್ನು ಪರೀಕ್ಷೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ,ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.

ಮೃತಪಟ್ಟ ಸೆರೆಸಿಕ್ಕ ನಾಲ್ಕೂ ಹುಲಿಮರಿಗಳು Read More

ಪ್ರತಿಭಟನೆ ವೇಳೆ ರೈತ ತೀವ್ರ ಅಸ್ವಸ್ಥ

ಬೆಳಗಾವಿ: ಚಳಿಗಾಲದ ಅಧಿವೇಶನ ಮೂರನೇಯ ದಿನ ಕೂಡಾ ವಿವಿಧ ಸಂಘಟನೆಗಳ ಪ್ರತಿಭಟನೆ ತೀವ್ರಗೊಂಡಿದ್ದು,ಈ ವೇಳೆ ರೈತರೊಬ್ಬರು ತೀವ್ರವಾಗಿ ‌ಅಸ್ವಸ್ಥಗೊಂಡ ಪ್ರಸಂಗ ನಡೆದಿದೆ.

ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ಕಾವು ಜೋರಾಗಿದೆ,
ಈ ಸಂದರ್ಭದಲ್ಲಿ ರಾಯಬಾಗ ತಾಲೂಕಿನ ಕುಡಚಿ ಗ್ರಾಮದ ರೈತ ಯಲ್ಲಪ್ಪಾ ಹಿರೇಕುರಬರ (35) ಅವರು ಅಸ್ವಸ್ಥರಾಗಿದ್ದಾರೆ.

ಬುಧವಾರ ಸುವರ್ಣಸೌಧದ ಪಕ್ಕದಲ್ಲಿರುವ ಪ್ರತಿಭಟನಾ ಸ್ಥಳದಲ್ಲಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದಾಗ ಭಾರೀ ಒತ್ತಡ, ಜನಸಮೂಹ ಹಾಗೂ ದೀರ್ಘ ಕಾಲದಿಂದ ಕೂಗಾಟ, ಘೋಷಣೆಗಳ ತೀವ್ರಗೊಂಡಿತು,ಆಗ ರೈತ ಯಲ್ಲಪ್ಪಾ ಹಿರೇಕುರಬರ ತಲೆ ಸುತ್ತಿ ನೆಲಕ್ಕೆ ಬಿದ್ದರು.

ತಕ್ಷಣ ಇತರೆ ರೈತರು, ಸಂಘಟಕರು ಹಾಗೂ ಪೊಲೀಸರು ಶಿಶ್ರೂಷೆ ಮಾಡಿದರು.
ಸ್ಥಳಕ್ಕೆ ವೈದ್ಯಕೀಯ ಸಿಬ್ಬಂದಿ ಧಾವಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ, ಅವರನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರು.
ಇದರಿಂದ ಆತಂಕ ಹಾಗೂ ಗೊಂದಲ ವಾತಾವರಣ ನಿರ್ಮಾಣಕೊಂಡಿತ್ತು, ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಯಿತು.

ಯಲ್ಲಪ್ಪಾ ಹಿರೇಕುರಬರ ಅವರ ಆರೋಗ್ಯ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಆಸ್ಪತ್ರೆಗೆ ಮೂಲಗಳು ತಿಳಿಸಿವೆ.

ರೈತರ ಬೇಡಿಕೆಗಳನ್ನು ತ್ವರಿತವಾಗಿ ಮೌಲ್ಯಮಾಪನ ಮಾಡಿ ಈಡೇರಿಸಲು ಸರಕಾರ ಕೂಡಲೇ ಕ್ರಮ ಕೈಗೊಳಬೇಕೆಂದು ಪ್ರತಿಭಟನಾ ನಿರತರು ಆಗ್ರಹಿಸಿದ್ದಾರೆ.

ಪ್ರತಿಭಟನೆ ವೇಳೆ ರೈತ ತೀವ್ರ ಅಸ್ವಸ್ಥ Read More

ಸಿದ್ದು ಪರ ಮತ್ತೆ ಪುತ್ರ ಯತೀಂದ್ರ ‌ಬ್ಯಾಟಿಂಗ್

ಬೆಳಗಾವಿ: ಕಾಂಗ್ರೆಸ್ ಸರ್ಕಾರದ ಗೊಂದಲಗಳಿಗೆ ತೆರೆ ಬಿತ್ತು ಅನ್ನುವಷ್ಟರಲ್ಲಿ ಸಿಎಂ ಸಿದ್ದು ಪುತ್ರ ಯತೀಂದ್ರ ಮತ್ತೆ ತಂದೆ ಪರ ಬ್ಯಾಟಿಂಗ್ ಮಾಡಿದ್ದಾರೆ.

ಸಿದ್ದರಾಮಯ್ಯ ಅವರೇ ಪೂರ್ಣಾ ವಧಿಯವರೆಗೆ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದು,ಚರ್ಚೆಗೆ ಗ್ರಾಸ ಒದಗಿಸಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರೇ ಪೂರ್ಣ ಅವಧಿಯಲ್ಲಿ ಮುಖ್ಯ ಮಂತ್ರಿಯಾಗಿರುತ್ತಾರೆ ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದರು.

ಹೈಕಮಾಂಡ್ ಹಲವಾರು ವಿಚಾರಗಳಿಗೆ ಕರೆಯುತ್ತಾರೆ ಹೋಗಿ ಮಾತನಾಡಿಕೊಂಡು ಬರುತ್ತಾರೆ. ಆ ರೀತಿ ಆಗಬಹುದು ಈ ರೀತಿ ಆಗಬಹುದು ಅನ್ನೋದು ಈಗಲೇ ಯಾಕೆ ಎಂದು ಪ್ರಶ್ನಿಸಿದರು.

ಡಿಸಿಎಂ ಶಿವಕುಮಾರ್‌ ನಾನು ಮುಖ್ಯಮಂತ್ರಿ ಆಗಬೇಕು ಎಂದು ಕೇಳಿದರು. ಹಾಗಾಗಿ ಗೊಂದಲ ಇತ್ತು ಹೈಕಮಾಂಡ್ ಸ್ಪಷ್ಟನೆ ಕೊಟ್ಟಿದೆ,ಮತ್ತೆ ಇನ್ನೇನು ಇಲ್ಲ ಎಂದು ಯತೀಂದ್ರ ತಿಳಿಸಿದರು.

ಸಿದ್ದು ಪರ ಮತ್ತೆ ಪುತ್ರ ಯತೀಂದ್ರ ‌ಬ್ಯಾಟಿಂಗ್ Read More

ಕೊಳ್ಳೇಗಾಲ ತಾ.ಮುಳ್ಳೂರಿನಲ್ಲಿ ಗೃಹಿಣಿ ನಾಪತ್ತೆ

ಕೊಳ್ಳೇಗಾಲ: ಮನೆಯಲ್ಲಿದ್ದ ಗೃಹಿಣಿ ದಿಡೀರ್ ನಾಪತ್ತೆಯಾಗಿರುವ ಘಟನೆ ತಾಲ್ಲೂಕಿನ ಮೂಳ್ಳೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಗ್ರಾಮದ ಲೇ. ಮಹೇಶ್ ಎಂಬುವವರ ಪತ್ನಿ ಪಾರ್ವತಿ ಎಂಬಾಕೆ ನಾಪತ್ತೆಯಾಗಿರುವ ಗೃಹಿಣಿ.

ತಾಲ್ಲೂಕಿನ ಇಕ್ಕಡಹಳ್ಳಿ ಗ್ರಾಮದ ಪಾರ್ವತಿ ಮೂಳ್ಳೂರು ಗ್ರಾಮದ ಮಹೇಶ್ ಎಂಬುವವರನ್ನು ಕಳೆದ 18 ವರ್ಷಗಳ ಹಿಂದೆ ಮದುವೆಯಾಗಿದ್ದು ಮೂವರು ಹೆಣ್ಣು ಮಕ್ಕಳಿದ್ದಾರೆ.

ಈ ಹಿಂದೆ ಕೂಡಾ ಇದೇ ರೀತಿ ನಾಲ್ಕೈದು ಬಾರಿ ನಾಪತ್ತೆಯಾಗಿದ್ದಳು. ಠಾಣೆಯಲ್ಲಿ ದೂರು ದಾಖಲಾಗುತ್ತಿತ್ತು.ಆಗ ಪೊಲೀಸರು ಪತ್ತೆ ಹಚ್ಚಿ ಕರೆತಂದಿದ್ದರು.

ಈಕೆಯ ಪತಿ 2 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಪತಿ ಮಹೇಶ್ ಕಾಲವಾದ ನಂತರ ತವರು ಮನೆ ಸೇರಿದ್ದ ಪಾರ್ವತಿಯನ್ನು ಆಕೆಯ ಪೋಷಕರು ಗ್ರಾಮದ ಯಜಮಾನರು, ಮುಖಂಡರ ಸಮ್ಮುಖದಲ್ಲಿ ಮುಳ್ಳೂರಿನಲ್ಲಿರುವ ಗಂಡನ ಮನೆಗೆ ಕರೆತಂದು ಬಿಟ್ಟಿದ್ದರು.

ಪಾರ್ವತಿ ಕಳೆದ 3 – 4 ದಿನಗಳ ಹಿಂದೆ ಕಾರಣವಿಲ್ಲದೇ ಮನೆಬಿಟ್ಟು ಹೊರಗೆ ಹೋಗಿ ಮರಳಿ ಮನೆಗೆ ಬಾರದ ಹಿನ್ನೆಲೆ ಕುಟುಂಬದವರು ಆತಂಕಕ್ಕೊಳಗಾಗಿದ್ದಾರೆ.

ಸೊಸೆ ಪಾರ್ವತಿಯನ್ನು ಮನೆಯ ಸುತ್ತಮುತ್ತ ಹಾಗೂ ಬಂಧು- ಬಳಗದ ಮನೆಗಳಲ್ಲಿಯೂ ಹುಡುಕಿದರೂ ಸುಳಿವು ಸಿಗದ ಕಾರಣ, ಆಕೆಯ ಅತ್ತೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ನಾಪತ್ತೆಯಾಗಿರುವ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹುಡುಕಾಟ ಪ್ರಾರಂಭಿಸಿದ್ದಾರೆ.

ಗೃಹಿಣಿಯ ಪತ್ತೆಗೆ ಸಾರ್ವಜನಿಕರ ಸಹಕಾರದ ಅಗತ್ಯವಿದ್ದು,ಈಕೆ ಯಾರಿಗಾದರೂ ಕಂಡುಬಂದಲ್ಲಿ ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.

ಕೊಳ್ಳೇಗಾಲ ತಾ.ಮುಳ್ಳೂರಿನಲ್ಲಿ ಗೃಹಿಣಿ ನಾಪತ್ತೆ Read More

ಟ್ರಾಕ್ಟರ್ ಹರಿದು ೧೦ ಕುರಿಗಳು ದಾರುಣ ಸಾವು

ಯಾದಗಿರಿ: ರಸ್ತೆಯಲ್ಲಿ ಹೋಗುತ್ತಿದ್ದ‌ ಕುರಿಗಳ ಮೇಲೆ ಟ್ರ್ಯಾಕ್ಟರ್ ಹರಿದು 10 ಕುರಿಗಳು ದಾರುಣವಾಗಿ ಮೃತಪಟ್ಟ‌ ಘಟನೆ ಯಾದಗಿರಿ ಜಿಲ್ಲೆಯ ಶಹಾಪೂರ ತಾಲ್ಲೂಕಿನಲ್ಲಿ ನಡೆದಿದೆ.
ಈ ಘಟನೆ ಗೋಗಿ ಮತ್ತು ಹೊಸಕೇರಾ ರಸ್ತೆಯಲ್ಲಿ ಶನಿವಾರ ಬೆಳಿಗ್ಗೆ ೫ ಗಂಟೆ ವೇಳೆ ನಡೆದಿದೆ.

ಘಟನೆಯಲ್ಲಿ ಗಾಯಗೊಂಡ ಇನ್ನೂ ೬ ಕುರಿಗಳನ್ನು ಗೋಗಿ ಪಶು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಸುರಪುರ ತಾಲ್ಲೂಕಿನ ಬಾದ್ಯಾಪೂರ ಗ್ರಾಮದ ಸೋಮಲಿಂಗಪ್ಪ ಪೂಜಾರಿ ಅವರಿಗೆ ಸೇರಿದ ಕುರಿಗಳು ಮೃತಪಟ್ಟಿದ್ದು,ಕುರಿಗಳಿಂದಲೇ ಬದುಕು ಕಟ್ಟಿಕೊಂಡಿದ್ದ ಅವರು ಕುರಿಗಳ ಸಾವಿನಿಂದ ಆತಂಕಕ್ಕೆ ಒಳಗಾಗಿದ್ದಾರೆ.

ಸ್ಥಳಕ್ಕೆ ಕರ್ನಾಟಕ ರಾಜ್ಯ ಕುರಿ ಮತ್ತು ಮೇಕೆ ಸಾಗಾಣಿಕೆದಾರರ ಮಹಾ ಮಂಡಳಿ ನಿರ್ದೇಶಕ ಶಾಂತಗೌಡ ನಾಗನಟಗಿ ಮತ್ತು ತಾಲ್ಲೂಕು ಪಶು ಆಸ್ಪತ್ರೆ ವೈಧ್ಯಾಧಿಕಾರಿ ಡಾ, ಅಣ್ಣಾರಾವ್ ಪಾಟೀಲ್ ಭೇಟಿ ನೀಡಿ, ಕುರಿಗಾರರಿಗೆ ಸಾಂತ್ವಾನ ಹೇಳಿ, ನಿಗಮದ ಅನುಗ್ರಹ ಯೋಜನೆಯಡಿಯಲ್ಲಿ ಪ್ರತಿ ಕುರಿಗೆ ೭೫೦೦ ರೂ, ಸಹಾಯಧನ ಒದಗಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ..

ಟ್ರಾಕ್ಟರ್ ಹರಿದು ೧೦ ಕುರಿಗಳು ದಾರುಣ ಸಾವು Read More

ಗುರುವಿನ ಅವತಾರ ದತ್ತಾತ್ರೇಯ:ವಿದ್ವಾನ್ ಎಸ್ ಕೃಷ್ಣಮೂರ್ತಿ

ಮೈಸೂರು: ದತ್ತಾತ್ರೇಯ ಅಂದರೆ ಬ್ರಹ್ಮ ವಿಷ್ಣು ಮಹೇಶ್ವರರ ಅವತಾರ, ಅವರನ್ನೆಲ್ಲ ನಾವು ಗುರುವಿನಲ್ಲಿ ಕಾಣುತ್ತೇವೆ ದತ್ತಾತ್ರೇಯ ಅಂದರೆ ಗುರುವಿನ ಅವತಾರ ಎಂದು ಅರ್ಚಕ ಸಂಘದ ಅಧ್ಯಕ್ಷರಾದ ವಿದ್ವಾನ್ ಎಸ್ ಕೃಷ್ಣಮೂರ್ತಿ ಹೇಳಿದರು.
ಮಂಡಿ ಮೊಹಲ್ಲಾದ ಬೆಂಕಿನವಾಬರ ಬೀದಿ ಯಲ್ಲಿರುವ ಶ್ರೀ ದತ್ತಾತ್ರೇಯ ಸ್ವಾಮಿ ದೇವಸ್ಥಾನ ಸಾಯಿಬಾಬಾ ಮಂದಿರದಲ್ಲಿ
ಗುರುವಾರ ದತ್ತ ಜಯಂತಿ ಪ್ರಯುಕ್ತ ಜರುಗಿದ ದತ್ತಾತ್ರೇಯ ಪೂಜೆ, ಮಹಾರುದ್ರಾ ಭಿಷೇಕ, ಪಂಚಾಮೃತ ಅಭಿಷೇಕ, ಬೆಣ್ಣೆ ಅಲಂಕಾರ, ತೋಮಾಲೆ ಸೇವೆ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜೆ
ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ದೇವಸ್ಥಾನಗಳಲ್ಲಿ ನಿತ್ಯ ನಿಯಮ, ಭಜನೆ ಧ್ಯಾನ ಉಪಾಸನೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ, ಇದರಿಂದ ಮನಸ್ಸಿಗೆ ನೆಮ್ಮದಿ ಶಾಂತಿ ಸಮಾಧಾನ ಸಿಗಲಿದೆ ಎಂದು ಹೇಳಿದರು.
ನಂತರ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ದೇವಸ್ಥಾನದ ಧರ್ಮದರ್ಶಿಗಳು ಹಾಗೂ ನಗರ ಪಾಲಿಕೆ ಮಾಜಿ ಸದಸ್ಯರಾದ ಬಿ ವಾಸುದೇವ,
ಅರ್ಚಕರಾದ ರಾಜೇಶ್, ದೀಕ್ಷಿತ್, ರಮೇಶ್, ಸಾಗರ್, ಶರತ್ ಹಾಗೂ ಡಾಕ್ಟರ್ ಲೋಕೇಶ್ ಕುಟುಂಬ ಮತ್ತು ನೂರಾರು ಭಕ್ತರು ಹಾಜರಿದ್ದರು.

ಗುರುವಿನ ಅವತಾರ ದತ್ತಾತ್ರೇಯ:ವಿದ್ವಾನ್ ಎಸ್ ಕೃಷ್ಣಮೂರ್ತಿ Read More

ಎಚ್.ಡಿ.ಕೋಟೆಯಲ್ಲಿ ಕಾಡಾನೆಗಳ ಕಾಟ

ಎಚ್.ಡಿ.ಕೋಟೆ: ಕಳೆದ ಕೆಲ ದಿನಗಳಿಂದ ಹುಲಿ ದಾಳಿಯಿಂದ ಕಂಗೆಟ್ಟಿದ್ದ ಎಚ್.ಡಿ.ಕೋಟೆ ತಾಲ್ಲೂಕಿನ ಜನತೆ ಈಗ ಕಾಡಾನೆಗಳ ಕಾಟದಿಂದ‌ ಬೇಸತ್ತು ಹೋಗಿದ್ದಾರೆ.

ತಾಲ್ಲೂಕಿನ ಬೂದನೂರು ಹಾಡಿ ಬೋಚಿಕಟ್ಟೆ ರಸ್ತೆಯಲ್ಲಿ ಕಾಡಾನೆ ದಾಂಧಲೆ ನಡೆಸಿದ್ದು, ಜಮೀನಿಗೆ ತೆರಳುತ್ತಿದ್ದ ರೈತರ ಮೇಲೆ ದಾಳಿ ಮಾಡಲು ಯತ್ನಿಸಿದೆ.ಆದರೆ ರೈತರು ಕ್ಷಣಾರ್ಧದಲ್ಲಿ ದಾಳಿಯಿಂದ ಪಾರಾಗಿದ್ದಾರೆ.

ಅಷ್ಟರಲ್ಲಿ ರೊಚ್ಚಿಗೆದ್ದ ಕಾಡಾನೆಯು ಮನೆ ಬಳಿ ಕಟ್ಟಿ ಹಾಕಿದ್ದ ಮೇಕೆ ಮೇಲೆ ದಾಳಿ ಮಾಡಿ ಕಾಲನ್ನು ಮುರಿದು ಹಾಕಿದೆ.

ಈ ಭಾಗದಲ್ಲಿ ಕಳೆದ ತಿಂಗಳು ಹುಲಿ ಕಾಟದಿಂದ ಜನರು ಆತಂಕಗೊಂಡಿದ್ದರು. ಈಗ ಆನೆಗಳ ಕಾಟ‌ ಪ್ರಾರಂಭವಾಗಿದ್ದು, ಅರಣ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಚ್.ಡಿ.ಕೋಟೆಯಲ್ಲಿ ಕಾಡಾನೆಗಳ ಕಾಟ Read More

ಭಗವದ್ಗೀತೆಯ ಪಾರಾಯಣ ನಮ್ಮ ಜೀವನದ ಉಸಿರಾಗಲಿ: ಗಣಪತಿ ಶ್ರೀ ಕರೆ

ಮೈಸೂರು: ಜಗದ್ಗುರು ಶ್ರೀ ಕೃಷ್ಣ ಪರಮಾತ್ಮನು ಭಗವದ್ಗೀತೆಯಲ್ಲಿ ಹೇಳಿರುವ ಪ್ರತಿಯೊಂದು ಮಾತು ಹಾಗೂ ಅಕ್ಷರಗಳನ್ನು ಅರ್ಥಮಾಡಿಕೊಂಡು ನಮ್ಮ ಜೀವನವನ್ನು ಮುನ್ನಡೆಸಬೇಕು ಎಂದು ಅವಧೂತ ದತ್ತ ಪೀಠದ ಪರಮಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಭಕ್ತರಿಗೆ ಕರೆ ನೀಡಿದರು.

ಅವಧೂತ ದತ್ತ ಪೀಠದಲ್ಲಿ ಗೀತಾ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ ಸಂಪೂರ್ಣ ಭಗವದ್ಗೀತೆ ಪಾರಾಯಣ ಮತ್ತು ಚಿನ್ನದ ಪದಕ ಪ್ರದಾನ ಸಮಾರಂಭದಲ್ಲಿ ಶ್ರೀಗಳು ಆಶೀರ್ವಚನ ನೀಡಿ ಮಾತನಾಡಿದರು.

ಪುಸ್ತಕ ದಾನ ಶ್ರೇಷ್ಠ:
ಭಾರತೀಯ ಸಂಪ್ರದಾಯದ ಬಗ್ಗೆ ಮಾತನಾಡಿದ ಅವರು,ನಮ್ಮ ಪೂರ್ವಜರು ಭಗವದ್ಗೀತೆಯನ್ನು ತಮ್ಮ ಜೀವನದ ಭಾಗವಾಗಿಸಿಕೊಂಡಿದ್ದರು. ಹಿಂದೆ ಮಹಾತ್ಮರು ಮತ್ತು ಶ್ರೀಮಂತರು ಲಕ್ಷಾಂತರ ಚಿಕ್ಕ ಭಗವದ್ಗೀತೆ ಪುಸ್ತಕಗಳನ್ನು ಮುದ್ರಿಸಿ ಜನರಿಗೆ ಉಚಿತವಾಗಿ ಹಂಚುತ್ತಿದ್ದರು. ಆ ಸಂಪ್ರದಾಯ ಮತ್ತೆ ಮರುಕಳಿಸಬೇಕು ಎಂದು ಆಶಿಸಿದರು.

ದತ್ತ ಪೀಠದಲ್ಲಿ ಮುದ್ರಿತವಾದ ಪುಸ್ತಕಗಳನ್ನು ಭಕ್ತರು ಖರೀದಿಸಿ, ಅದನ್ನು ಕೊಂಡುಕೊಳ್ಳಲು ಶಕ್ತಿಯಿಲ್ಲದವರಿಗೆ ಉಚಿತವಾಗಿ ಹಂಚುವ ಸಂಕಲ್ಪ ಮಾಡಬೇಕು,ಎಂದು ತಿಳಿಸಿದರು.

ಕಂಠಪಾಠದ ಮಹತ್ವ:
ಪುಸ್ತಕಗಳು ಯಾವಾಗಲೂ ನಮ್ಮ ಕೈಯಲ್ಲಿ ಇರುವುದಿಲ್ಲ, ಆದರೆ ಭಗವದ್ಗೀತೆಯನ್ನು ಕಂಠಪಾಠ ಮಾಡಿದರೆ ಶ್ಲೋಕಗಳು 24 ಗಂಟೆಯೂ ನಮ್ಮ ಜೊತೆಗೇ ಇರುತ್ತವೆ. ಪ್ರಯಾಣದ ಸಮಯದಲ್ಲಿ ಅಥವಾ ಊಟ ಮಾಡುವಾಗಲೂ ಮನಸ್ಸಿನಲ್ಲಿಯೇ ಪಾರಾಯಣ ಮಾಡಬಹುದು ಎಂದು ಸ್ವಾಮೀಜಿ ಕಂಠಪಾಠದ ಮಹತ್ವವನ್ನು ವಿವರಿಸಿದರು.

ಹೈದರಾಬಾದ್‌ನಲ್ಲಿ ಬೃಹತ್ ಪಾರಾಯಣ:‌
ಇದೇ ವೇಳೆ ಮುಂಬರುವ ಬೃಹತ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಸ್ವಾಮೀಜಿ, 2026ರ ಮಾರ್ಚ್ 22 ರಂದು ಹೈದರಾಬಾದ್‌ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಸಂಪೂರ್ಣ ಭಗವದ್ಗೀತೆ ಪಾರಾಯಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಅಲ್ಲದೆ ದೆಹಲಿಯ ಭಾರತ ಮಂಟಪದಲ್ಲಿಯೂ ಕಾರ್ಯಕ್ರಮ ನಡೆಯಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಶ್ರೀಗಳು ಆಹ್ವಾನಿದರು.

ಗೀತಾ ಪಾರಾಯಣ ಸಂಕಲ್ಪ:
ಪ್ರತಿಯೊಬ್ಬರೂ ಪ್ರತಿನಿತ್ಯ ಭಗವದ್ಗೀತೆಯ ಕನಿಷ್ಠ ಒಂದು ಅಧ್ಯಾಯವನ್ನಾದರೂ ಪಾರಾಯಣ ಮಾಡಬೇಕು ಎಂದು ಭಕ್ತರಿಂದ ಇದೇ‌ ವೇಳೆ ಸಂಕಲ್ಪ ಮಾಡಿಸಿದರು.

ಇಂದು ಕೇವಲ ತೆಲುಗು ರಾಜ್ಯಗಳಲ್ಲದೆ, ಕರ್ನಾಟಕ, ತಮಿಳುನಾಡು ಸೇರಿದಂತೆ ದೇಶ ವಿದೇಶಗಳಲ್ಲಿ ಗೀತಾ ಪಾರಾಯಣದ ಅರಿವು ಮೂಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಚಿನ್ನದ ಪದಕ ಪ್ರದಾನ:
ಕಾರ್ಯಕ್ರಮದಲ್ಲಿ ಭಗವದ್ಗೀತೆಯನ್ನು ಸಂಪೂರ್ಣವಾಗಿ ಕಂಠಪಾಠ ಮಾಡಿ ಒಪ್ಪಿಸಿದ ಸುಮಾರು 948 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮತ್ತು ಸಾಧಕರಿಗೆ ಶ್ರೀಗಳು ಚಿನ್ನದ ಪದಕ ಹಾಗೂ ಬಹುಮಾನಗಳನ್ನು ವಿತರಿಸಿದರು.

ನಂತರ ಮೈಸೂರಿನ ‘ಗೀತಾ ಪರಿವಾರ’ದ ಸದಸ್ಯರು ಮತ್ತು ರಾಜ್ಯದ ವಿವಿಧ ಮೂಲೆಗಳಿಂದ ಬಂದಿದ್ದ ಭಕ್ತರನ್ನು ಶ್ರೀಗಳು ಅಭಿನಂದಿಸಿದರು.

ಗೀತಾ ಜಯಂತಿ ಅಂಗವಾಗಿ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದ ನಾದ ಮಂಟಪದಲ್ಲಿ ಇಂದು ಸಂಪೂರ್ಣ ಭಗವದ್ಗೀತಾ ಪಾರಾಯಣ ಹಮ್ಮಿಕೊಳ್ಳಲಾಗಿತ್ತು.

ಈ ಪಾರಾಯಣದಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು 5000ಕ್ಕೂ ಹೆಚ್ಚು ಮಂದಿ ಭಾಗವಹಿಸಿ ಗೀತೆಯ ಸಂಪೂರ್ಣ 700 ಶ್ಲೋಕಗಳನ್ನು ಪಠಣ ಮಾಡಿದರು. 6 ವರ್ಷದಿಂದ ಮಕ್ಕಳಿಂದ 75 ವರ್ಷದವರೆಗಿನ ಭಕ್ತರು ಈ ಪಾರಾಯಣದಲ್ಲಿ ಪಾಲ್ಗೊಂಡಿದ್ದುದು‌ ವಿಶೇಷ.

ಭಗವದ್ಗೀತೆಯ ಪಾರಾಯಣ ನಮ್ಮ ಜೀವನದ ಉಸಿರಾಗಲಿ: ಗಣಪತಿ ಶ್ರೀ ಕರೆ Read More

ಅವಧೂತ ದತ್ತ ಪೀಠದಲ್ಲಿ ಶ್ರೀ ದತ್ತಾತ್ರೇಯ ಜಯಂತಿ

ಮೈಸೂರು: ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಅವಧೂತ ದತ್ತ ಪೀಠದಲ್ಲಿ 2025ರ ಸಾಲಿನ ‘ಶ್ರೀ ದತ್ತಾತ್ರೇಯ ಜಯಂತಿ ಮಹೋತ್ಸವ’ವು ನವೆಂಬರ್ 30 ರಿಂದ ಡಿಸೆಂಬರ್ 8 ರವರೆಗೆ ವಿಜೃಂಭಣೆಯಿಂದ ಜರುಗಲಿದೆ.

ಪೂಜ್ಯ ಶ್ರೀಗಳ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಕಾರ್ಯಕ್ರಮದ ವಿವರಗಳು ಈ ಕೆಳಗಿನಂತಿವೆ:

ನವೆಂಬರ್ 30, ಭಾನುವಾರ:
ಬೆಳಿಗ್ಗೆ 10 ಗಂಟೆಗೆ ಅಖಿಲ ಭಾರತ ಜ್ಞಾನ ಬೋಧ ಸಭಾ ಸಮ್ಮೇಳನ ನಡೆಯಲಿದೆ.
ಡಿಸೆಂಬರ್ 1, ಸೋಮವಾರ (ಶ್ರೀ ಗೀತಾ ಜಯಂತಿ):
ಬೆಳಿಗ್ಗೆ 10 ಗಂಟೆಗೆ ನಾದ ಮಂಟಪದಲ್ಲಿ ಸಂಪೂರ್ಣ ಭಗವದ್ಗೀತಾ ಪಾರಾಯಣ ಹಮ್ಮಿಕೊಳ್ಳಲಾಗಿದೆ.

ಮಧ್ಯಾಹ್ನ 3 ಗಂಟೆಗೆ ಭಗವದ್ಗೀತೆ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಪದಕ ವಿತರಣಾ ಸಮಾರಂಭ ನಡೆಯಲಿದೆ.

ಡಿಸೆಂಬರ್ 2, ಮಂಗಳವಾರ:
ಬೆಳಿಗ್ಗೆ 9 ಗಂಟೆಗೆ ಶ್ರೀ ಕಾಲಾಗ್ನಿ ಶಮನ ದತ್ತಾತ್ರೇಯ ಸ್ವಾಮಿಗೆ ಮಂಟಪೋತ್ಸವ ಹಾಗೂ ಪಂಚಾಮೃತ ಅಭಿಷೇಕ, ಬೆಳಿಗ್ಗೆ 10ಕ್ಕೆ ಶ್ರೀ ಚಕ್ರ ಪೂಜೆ ಹಾಗೂ ದತ್ತಾತ್ರೇಯ ಹೋಮದ ಪೂರ್ಣಾಹುತಿ ನೆರವೇರಲಿದೆ. ಸಂಜೆ 6 ಗಂಟೆಗೆ ನಾದ ಮಂಟಪದಲ್ಲಿ ದಿವ್ಯ ನಾಮ ಸಂಕೀರ್ತನೆ ಇರಲಿದೆ.

ಡಿಸೆಂಬರ್ 3, ಬುಧವಾರ (ಶ್ರೀ ಹನುಮಾನ್ ಜಯಂತಿ):
ಬೆಳಿಗ್ಗೆ 7 ಗಂಟೆಗೆ ಕಾರ್ಯ ಸಿದ್ಧಿ ಹನುಮಾನ್ ಸ್ವಾಮಿಗೆ 13ನೇ ವಾರ್ಷಿಕ ಅಭಿಷೇಕ, ಬೆಳಿಗ್ಗೆ 11 ಗಂಟೆಗೆ ಹನುಮದ್ ವ್ರತ ಪೂಜೆ, ಸಂಜೆ 5 ಗಂಟೆಗೆ ರಥೋತ್ಸವ, ಸಂಜೆ 6 ಗಂಟೆಗೆ ಸನಾತನ ದತ್ತ ಬಂಧು ಮಹೋತ್ಸವ ಮತ್ತು ರಾತ್ರಿ 8 ಗಂಟೆಗೆ ಹನುಮಾನ್ ದೇವಾಲಯದಲ್ಲಿ ಲಕ್ಷ ದೀಪೋತ್ಸವ ಜರುಗಲಿದೆ.

ಡಿಸೆಂಬರ್ 4, ಗುರುವಾರ (ಹುಣ್ಣಿಮೆ – ಶ್ರೀ ದತ್ತಾತ್ರೇಯ ಜಯಂತಿ):
ಅಂದು ಉತ್ಸವದ ಪ್ರಮುಖ ದಿನವಾಗಿದ್ದು, ಬೆಳಿಗ್ಗೆ 9 ಗಂಟೆಗೆ ಶ್ರೀ ಕಾಲಾಗ್ನಿ ಶಮನ ದತ್ತಾತ್ರೇಯ ಸ್ವಾಮಿಗೆ ತೈಲಾಭಿಷೇಕ, ಬೆಳಿಗ್ಗೆ 10 ಗಂಟೆಗೆ ಭಕ್ತಾದಿಗಳಿಂದ ಸಹಸ್ರ ಕಳಶ ತೈಲಾಭಿಷೇಕ ನೆರವೇರಲಿದೆ.

ಸಂಜೆ 6 ಗಂಟೆಗೆ ಸಪ್ತರ್ಷಿ ಸರೋವರದಲ್ಲಿ ಶ್ರೀ ದತ್ತಾತ್ರೇಯ ಸ್ವಾಮಿಯ ಪಲ್ಲಕ್ಕಿ ಉತ್ಸವ ಮತ್ತು ತೆಪ್ಪೋತ್ಸವ ನಡೆಯಲಿದ್ದು, ರಾತ್ರಿ 8 ಗಂಟೆಗೆ ಕಾಕಡಾರತಿ ಹಾಗೂ ಡೋಲೋತ್ಸವದೊಂದಿಗೆ ಸಂಪನ್ನಗೊಳ್ಳಲಿದೆ

ಡಿಸೆಂಬರ್ 5, ಶುಕ್ರವಾರ:
ಬೆಳಿಗ್ಗೆ 9 ಗಂಟೆಗೆ ಮಂತ್ರ ಉಪದೇಶ ಕಾರ್ಯಕ್ರಮವಿರುತ್ತದೆ.

ಡಿಸೆಂಬರ್ 6, ಶನಿವಾರ:
ಶ್ರೀ ರಾಜರಾಜೇಶ್ವರಿ ದೇವಾಲಯದ 2ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತದೆ.
ಡಿಸೆಂಬರ್ 6, 7 ಮತ್ತು 8 ರಂದು ವಾರ್ಷಿಕ ಶಾಸ್ತ್ರ ಸಭೆ ನಡೆಯಲಿದೆ ಎಂದು ಆಶ್ರಮದ ಪ್ರಕಟಣೆ ತಿಳಿಸಿದೆ.

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀಗಳ ಕೃಪೆಗೆ ಪಾತ್ರರಾಗಬೇಕೆಂದು ಕೋರಲಾಗಿದೆ.

ಅವಧೂತ ದತ್ತ ಪೀಠದಲ್ಲಿ ಶ್ರೀ ದತ್ತಾತ್ರೇಯ ಜಯಂತಿ Read More