ಕಾರು ‌ಬಸ್ ಮುಖಾಮುಖಿ ಡಿಕ್ಕಿ

ಮೈಸೂರು: ಮೈಸೂರಿನಲ್ಲಿ ಕಾರು ಮತ್ತು ಕೆಎಸ್ ಆರ್ ಟಿ ಸಿ ಬಸ್ ಮುಖಾಮುಖಿ ಡಿಕ್ಕಿಯಾಗಿದ್ದು,ಅದೃಷ್ಟವಶಾತ್ ‌ಯಾವುದೇ ಸಾವು ನೋವು ಉಂಟಾಗಿಲ್ಲ.

ಮೈಸೂರಿನ ಕೆಜಿ ಕೊಪ್ಪಲು ಮುಖ್ಯರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು, ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ.

ಮಂಗಳವಾರ ರಾತ್ರಿ 9.30ರ ಸಮಯದಲ್ಲಿ ಅಪಘಾತವಾಗಿದೆ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಲಕ್ಷ್ಮೀಪುರಂ ಪೋಲೀಸರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.