ಹುಣಸೂರು,ಜು.1: ಹುಣಸೂರಿನಲ್ಲಿ ಕಳಪೆ ಕಾಮಗಾರಿ ಮಾಡಿ ದುಡ್ಡು ಹೊಡೆಯುವುದರಲ್ಲಿ ಅಧಿಕಾರಿಗಳು ನಿಸ್ಸೀಮರು ಎಂಬುದಕ್ಜೆ ಕಾವೇರಿ ನೀರಾವರಿ ನಿಗಮ ಒಂದು ಸ್ಪಷ್ಟ ಉದಾಹರಣೆಯಾಗಿದೆ.
ಮಳೆ ಬಂದಾಗ ನೀರು ಸರಾಗವಾಗಿ ಹೋಗಬೇಕು ಕೆರೆಕಟ್ಟೆಗಳು ತುಂಬಬೇಕು ಎಂಬ ಮಹತ್ವದ ಉದ್ದೇಶದಿಂದ ಕೆರೆಗಳಿಗೆ ಕಾಲುವೆಗಳನ್ನು ತೋಡಲಾಗಿರುತ್ತದೆ ಈ ಕಾಲುವೆಗಳು ನಾನ ಕಾರಣಗಳಿಂದ ಕಲ್ಲು ಮಣ್ಣು ಸೇರಿಯೋ ಹಾಗೂ ಜೊಂಡು ಬೆಳೆದುಕೊಂಡೋ ಹೂಳು ತುಂಬಿಕೊಂಡಿರುತ್ತವೆ.
ಹೀಗೆ ಹೂಳು ತುಂಬಿಕೊಂಡರೆ ಕೆರೆಯಲ್ಲೂ ಸರಿಯಾಗಿ ನೀರು ನಿಲ್ಲಲು ಸಾಧ್ಯವಿಲ್ಲ ಹಾಗೆಯೇ ಕಾಲುವೆಗಳಲ್ಲೂ ನೀರು ಸರಿಯಾಗಿ ಹೋಗಲು ಸಾಧ್ಯವಿಲ್ಲ, ಆದ್ದರಿಂದ ಮಳೆಗಾಕದಲ್ಲಿ ನೀರು ಸರಿಯಾಗಿ ಹೋಗಬೇಕೆಂಬ ಉದ್ದೇಶದಿಂದ ಕಾಲುವೆಗಳ ಹೂಗಳನ್ನು ಸರ್ಕಾರದ ವತಿಯಿಂದ ತೆಗೆಸಲಾಗುತ್ತದೆ.
ಹುಣಸೂರು ಮತ್ತು ಹುಣಸೂರು ತಾಲೂಕಿನಲ್ಲಿ ಕಾವೇರಿ ನೀರಾವರಿ ನಿಗಮದ ವತಿಯಿಂದ ಟೆಂಡರ್ ಕರೆದು ಹೂಳು ತೆಗೆಸುವ ಕಾರ್ಯವನ್ನು ಮಾಡಲಾಗಿದೆ.
ಆದರೆ ಈ ಹೂಳು ತೆಗೆಯುವ ಕಾರ್ಯ ಅದೆಷ್ಟು ಕಳಪೆಯಿಂದ ಕೂಡಿದೆ ಎನ್ನುವುದಕ್ಕೆ ಕೆಂಚನಕೆರೆಯಿಂದ ಉದ್ದೂರು ಕೆರವರೆಗೆ ತೆಗೆದಿರುವ ಕಾಲುವೆ ಹೂಳೆತ್ತುವ ಕಾರ್ಯ ಸ್ಪಷ್ಟ ಉದಾರಣೆಯಾಗಿದೆ.
ಕೆಂಚನಕೆರೆಯಿಂದ ಉದ್ದೂರು ಕೆರೆ ವರೆಗಿನ ಕಾಲುವೆಯಲ್ಲಿ ಹೂಳೆತ್ತಲಾಗಿದ್ದು ಅತ್ಯಂತ ಕಳಪೆ ಕಾಮಗಾರಿ ಮಾಡಿರುವುದು ಮೇಲ್ನೋಟಕ್ಕೆ ಯಾರೇ ನೋಡಿದರೂ ಗೊತ್ತಾಗುತ್ತದೆ.
ಕಾಲುವೆ ಉದ್ದಕ್ಕೂ ಜೊಂಡು ಒಳ್ಳೆ ಭತ್ತದ ಪೈರಿನಂತೆ ಬೆಳೆದು ನಿಂತಿದೆ. ಇದನ್ನೆಲ್ಲ ತೆಗೆದು ಕಾಲುವೆ ಸ್ವಚ್ಛಪಡಿಸಬೇಕಾದ್ದು ಟೆಂಡರ್ ಪಡೆದವರ ಜವಾಬ್ದಾರಿ. ಆದರೆ ಇಲ್ಲಿ ಕಾವೇರಿ ನೀರಾವರಿ ನಿಗಮದವರ ಸಿಬ್ಬಂದಿ ಹಾಗೂ ಅಧಿಕಾರಿಗಳು ಮತ್ತು ಯಾರು ಟೆಂಡರ್ ಪಡೆದಿದ್ದಾರೋ ಅವರು ಕಳಪೆ ಕಾಮಗಾರಿಯ ಜವಾಬ್ದಾರಿಯನ್ನು ಹೊರಬೇಕಿದೆ.
ಇದರಲ್ಲಿ ನೀರು ಹೋಗುವುದಿರಲಿ, ಮಳೆ ಬಂದರೆ ಮತ್ತೆ ಜುಂಡು ಆಳೆತ್ತರಕ್ಕೆ ಬೆಳೆದು ಯಾವುದಾದರೂ ಪ್ರಾಣಿಗಳು ಇದರಲ್ಲಿ ಸೇರಿದರು ಅಚ್ಚರಿ ಪಡಬೇಕಿಲ್ಲ.
ಆಕಸ್ಮಾತಾಗಿ ರೈತರು, ರೈತಪಿ ಮಕ್ಕಳು ಈ ಕಾಲುವೆ ಸಮೀಪ ಹೋಗಿ ಇದರಲ್ಲಿ ಬಿದ್ದರೂ ಹೇಳುವವರು ಗತಿ ಇಲ್ಲ. ಅಷ್ಟು ಕಳಪೆ ಮಟ್ಟದಲ್ಲಿದೆ ಈ ಕಾಲಯವೆ ಹೂಳು ತೆಗೆಯುವ ಕಾಮಗಾರಿ.ಜೊಂಡು ಅತಿಯಾಗಿ ಬೆಳೆದು ನಿಂತಿದೆ ಇದಕ್ಕೆ ಕಾವೇರಿ ನೀರಾವರಿ ನಿಗಮದವರು ಉತ್ತರಿಸಬೇಕಿದೆ.
ಸರ್ಕಾರದ ಹಣ ಈ ಮಟ್ಟದಲ್ಲಿ ಪೋಲಾಗುತ್ತಿದ್ದರೂ ಇದನ್ನು ಪ್ರಶ್ನಿಸುವ ಯಾವುದೇ ಜನಪ್ರತಿನಿಧಿಯು ಕಾಣಿಸುತ್ತಿಲ್ಲ.
ಕೂಡಲೇ ಇದರ ಬಗ್ಗೆ ಗಮನ ಹರಿಸಿ ಸರಿಯಾದ ಕಾಮಗಾರಿ ಮಾಡಿ ನೀರು ಸರಾಗವಾಗಿ ಹೋಗುವಂತೆ ಮಾಡಬೇಕೆಂದೂ,ಕಳಪೆ ಕಾಮಗಾರಿ ಮಾಡಿ ಹಣ ಹೊಡೆದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಆಗ್ರಹಿಸಿದ್ದಾರೆ.
ಕೆಂಚನಕೆರೆಯಿಂದ ಉದ್ದೂರು ಕೆರೆವರೆಗೆ ಕಾಲುವೆ ಹೂಳು ತೆಗೆದಿರುವುದು ಒಂದು ಸಣ್ಣ ಉದಾಹರಣೆ. ಇಡೀ ಹುಣಸೂರಿನ ಕಾಲುವೆಗಳ ಕಥೆ ಹೀಗೆಯೇ ಇದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಇದರಲ್ಲಿ ಲಕ್ಷಾಂತರ ಹಣ ಪೋಲಾಗಿದೆ ಕೂಡಲೇ ಇದರ ಬಗ್ಗೆ ತನಿಖೆ ನಡೆಯಲೇಬೇಕಿದೆ.