ಪ್ರವಾಸಿಗರ ಆತ್ಮಕ್ಕೆ ಸಾಮೂಹಿಕ ಶಾಂತಿ ಜಪಿಸಿ ಬ್ರಾಹ್ಮಣ ಯುವ ವೇದಿಕೆ ಶ್ರದ್ಧಾಂಜಲಿ

Spread the love

ಮೈಸೂರು: ಪಹಲ್ಗಾಮ್ ನಲ್ಲಿ ಉಗ್ರರ ದಾಳಿಗೆ ಪ್ರಾಣತೆತ್ತ ಪ್ರವಾಸಿಗರ ಆತ್ಮಕ್ಕೆ ಶಾಂತಿ ಕೋರಿ ಮೈಸೂರು ನಗರ ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪದಾಧಿಕಾರಿಗಳು ಸಾಮೂಹಿಕ ಶಾಂತಿ ಮಂತ್ರ ಜಪಿಸಿ ಶ್ರದ್ಧಾಂಜಲಿ ಸಲ್ಲಿಸಿದರು.

ಗುರುವಾರ ಸಂಜೆ ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಹೊಯ್ಸಳ ಕರ್ನಾಟಕ ಸಂಘದ ಆವರಣದಲ್ಲಿ ಸಾಮೂಹಿಕ ಶಾಂತಿಮಂತ್ರ ಜಪಿಸಿ ಉಗ್ರರ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಪ್ರವಾಸಿಗರಿಗೆ ಶ್ರದ್ಧಾಂಜಲಿ ಅರ್ಪಿಸಿದರು.

ವಿವಿಧಡೆಯಿಂದ ಆಗಮಿಸಿದ ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರಗಾಮಿ ಚಟುವಟಿಕೆ ನಡೆಸಿರುವುದನ್ನು ಈ ವೇಳೆ ತೀವ್ರವಾಗಿ ಖಂಡಿಸಲಾಯಿತು.

ದಾಳಿ ವೇಳೆ ಮೃತಪಟ್ಟ ಮೂವರು ಕನ್ನಡಿಗರ ಭಾವಚಿತ್ರಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು.

ಪಾಕಿಸ್ತಾನವು ನೇರವಾಗಿ ಯುದ್ಧ ಮಾಡಲು ಧೈರ್ಯವಿಲ್ಲದೆ ಇಂತಹ ದುಶ್ಕೃತ್ಯಗಳನ್ನು ನಡೆಸುತ್ತಿದೆ, ಕಾಶ್ಮೀರದಲ್ಲಿ ಭಯೋತ್ಪಾದನೆ ಉಂಟು ಮಾಡಿ ಅದನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ವೇದಿಕೆ ಪದಾಧಿಕಾರಿಗಳು ಕಿಡಿಕಾರಿದರು.

ಆದರೆ ಪಾಪಿಸ್ತಾನದ ಪ್ರಯತ್ನ ಎಂದಿಗೂ ಸಫಲವಾಗುವುದಿಲ್ಲ,ಕೇಂದ್ರ ಸರ್ಕಾರವು ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಬೇಕು, ಕಾಶ್ಮೀರ ಕಣಿವೆಗಳಲ್ಲಿ ಸಕ್ರಿಯವಾಗಿರುವ ಉಗ್ರ ಸಂಘಟನೆಗಳನ್ನು ನಿರ್ಮೂಲನೆ ಮಾಡುವ ಮೂಲಕ ಪ್ರಾಣ ಕಳೆದುಕೊಂಡಿರುವ ಪ್ರವಾಸಿಗರ ಆತ್ಮಕ್ಕೆ ಶಾಂತಿ ದೊರಕುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ
ಜಿಲ್ಲಾ ಪ್ರತಿನಿಧಿ ಡಾಕ್ಟರ್ ಲಕ್ಷ್ಮೀದೇವಿ,
ಬ್ರಾಹ್ಮಣ ಸಂಘದ ಗ್ರಾಮಾಂತರ ಅಧ್ಯಕ್ಷರಾದ ಗೋಪಾಲ್ ರಾವ್,
ವೆಂಗಿಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ,
ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷರಾದ ಕೆ ಆರ್ ಸತ್ಯನಾರಾಯಣ್, ನಗರಪಾಲಿಕೆ ಮಾಜಿ ಸದಸ್ಯರಾದ ಮ ವಿ ರಾಮಪ್ರಸಾದ್,ಎಂ.ಡಿ ಪಾರ್ಥಸಾರಥಿ, ಕಾಂಗ್ರೆಸ್ ಮುಖಂಡರಾದ ಎನ್ ಎಂ ನವೀನ್ ಕುಮಾರ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷರಾದ ಎಚ್ ಎನ್ ಶ್ರೀಧರರ್ಮೂರ್ತಿ,ಅರ್ಚಕ ಸಂಘದ ಅಧ್ಯಕ್ಷರಾದ ವಿದ್ವಾನ್ ಕೃಷ್ಣಮೂರ್ತಿ,ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ,ಟಿ ಎಸ್ ಅರುಣ್,
ಜಯಸಿಂಹ ಶ್ರೀಧರ್,ವಿಜಯ್ ಕುಮಾರ್, ರಂಗನಾಥ್, ಪ್ರಶಾಂತ್,ಚಕ್ರಪಾಣಿ, ಸುಧೀಂದ್ರ,ಪುಟ್ಟಸ್ವಾಮಿ,ನಾಗರಾಜ್, ಸಿ ಎಸ್ ಚಂದ್ರಶೇಖರ್,ರವಿಶಂಕರ್,ಪುನೀತ್ ಕೂಡ್ಲೂರು,ಶ್ರೀಕಾಂತ್ ಕಶ್ಯಪ್, ವಾಸುದೇವಮೂರ್ತಿ,ಹರೀಶ್, ಸತ್ಯನಾರಾಯಣ್, ವಿಘ್ನೇಶ್ವರ ಭಟ್, ರಾಮು, ಭಾಗ್ಯಶ್ರೀ ಭಟ್,ಲತಾ ಬಾಲಕೃಷ್ಣ, ಸುಂದರಮೂರ್ತಿ,ಶ್ರೀನಿವಾಸ್ ಶರ್ಮಾ,
ಪ್ರವೀಣ್ ಕುಮಾರ್,ಮಂಜುನಾಥ್ ಹಾಗೂ ಇನ್ನಿತರ ವಿಪ್ರ ಸಮುದಾಯದ ಸಂಘ ಸಂಸ್ಥೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.