ಅಡಿಕೆ ಕಾಯಿ ಎಂದು ನಾಡಬಾಂಬ್‌ ಚಚ್ಚಿದ ಮಹಿಳೆ!

Spread the love

ಮೈಸೂರು: ನಾಡ ಬಾಂಬ್ ಸ್ಪೋಟಗೊಂಡು ಮಹಿಳೆಯ ಮುಖಕಕ್ಕೆ ಸಿಡಿದು ಗಂಭೀರವಾಗಿ ಗಾಯಗೊಂಡ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ
ಲ್ಲಿ ನಡೆದಿದೆ.

ಹುಳಲಾಲು ಗ್ರಾಮದಲ್ಲಿ ಈ ಘಟನೆ ನಡೆದಿದ್ದು,ಕಮಲಮ್ಮ (55) ಗಂಭೀರ ಗಾಯಗೊಂಡಿದ್ದಾರೆ.

ಈಕೆಗೆ ಅಡಿಕೆ ತಿನ್ನುವ ಚಟವಿದ್ದು ನಾಡ ಬಾಂಬ್ ಅನ್ನು ಅರಿಯದೆ ಅಡಿಕೆಕಾಯಿ‌ ಎಂದು ತಿಳಿದು ಚೆಚ್ಚಿದ್ದಾಳೆ,ದಿಢೀರನೆ‌ ಬಾಂಬ್ ಸ್ಫೋಟಗೊಂಡಿದೆ.ಇದರಿಂದಾಗಿ ಕಮಲಮ್ಮನ ಮುಖ‌ಕ್ಕೆ ಗಂಭೀರ ಗಾಯವಾಗಿದೆ.

ಮನೆಯ ಮುಂಭಾಗದಲ್ಲಿರುವ ತೋಟದಲ್ಲಿ ಅಡಿಕೆಕಾಯಿ ಬಿದ್ದಿರಬಹುದು ಎಂದು ಆರಿಸಲು ಹೋಗಿದ್ದ ಮಹಿಳೆ ಅಡಿಕೆಕಾಯಿ ಎಂದು ತಿಳಿದು ನಾಡ ಬಾಂಬ್ ಚಚ್ಚಿದ್ದಾರೆ.

ಕಾಡು ಹಂದಿಗಳ ಹಾವಳಿ ತಪ್ಪಿಸಲು ರೈತರು ನಾಡ ಬಾಂಬ್ ಇಟ್ಟಿದ್ದರಂತೆ, ಅದನ್ನು ಅಡಿಕೆಕಾಯಿ ಎಂದು ಕಮಲಮ್ಮ ತಿಳಿದು
ಸುತ್ತಿಗೆಯಿಂದ ಚಚ್ಚಿದಾಗ ಅದು ಸಿಡಿದು ಮುಖ, ಕೈಕಾಲು ಹೊಟ್ಟೆ ಭಾಗಕ್ಕೆ ಗಂಭೀರ ಗಾಯಗಳಾಗಿದೆ.ಸಧ್ಯ ಆಕೆ ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.