ಮೈಸೂರು: ಬಿಎಂಡಬ್ಲೂ ಕಂಪನಿ ಉದ್ಯೋಗಿ ಎಂದು ನಂಬಿಸಿ ಮದುವೆಯಾದ ವಂಚಕ ಚಿನ್ನಾಭರಣ ಕದ್ದು ಸಿಕ್ಕಿಬಿದ್ದ ಪ್ರಸಂಗ
ಮೈಸೂರಿನಲ್ಲಿ ನಡೆದಿದೆ
ಈ ಘಟನೆ ಮೈಸೂರಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ವಂಚಕನ ವಿರುದ್ದ ನ್ಯಾಯಾಲಯ ಆದೇಶದ ಅನ್ವಯ ಎಫ್ಐಆರ್ ದಾಖಲಾಗಿದೆ.
ಬೆಳಗಾವಿ ಮೂಲದ ವಿಜಯಕುಮಾರ್ ಲಟ್ಟಿ(39) ಎಂಬಾತನ ವಿರುದ್ದ ಪ್ರಕರಣ ದಾಖಲಾಗಿದೆ.
ಶ್ರೀನಿವಾಸ್ ಎಂಬುವರು ತಮ್ಮ ತಮ್ಮ ಪುತ್ರಿಯನ್ನು ನಂಬಿಸಿ ಮದುವೆ ಆಗಿ ವಿಜಯಕುಮಾರ್ ವಂಚಿಸಿದ್ದಾನೆಂದು ದೂರು ದಾಖಲಿಸಿದ್ದಾರೆ.
2021 ರಲ್ಲಿ ಮ್ಯಾಟ್ರಿಮೋನಿಯಲ್ ಮೂಲಕ ವಿಜಯ್ ಕುಮಾರ್ ಲಟ್ಟಿ ಎಂಬಾತ ಶ್ರೀನಿವಾಸ್ ಪುತ್ರಿ ಸ್ವಾತಿ ಎಂಬವರನ್ನ ಸಂಪರ್ಕಿಸಿದ್ದಾನೆ.
ಹೈಟೆಕ್ ಪ್ರೊಫೈಲ್ ಹಾಕಿ ಸ್ವಾತಿ ಹಾಗೂ ತಂದೆ ಶ್ರೀನಿವಾಸ್ ಅವರಿಗೆ ನಂಬಿಕೆ ಬರುವಂತೆ ಮಾಡಿದ್ದಾನೆ.ಪ್ಯಾರಿಸ್ ನಲ್ಲಿ ಬಿಎಂಡಬ್ಲೂ ಕಂಪನಿ ಉದ್ಯೋಗಿ ಎಂಬಂತೆ ಸರ್ಟಿಫಿಕೇಟ್ ಗಳನ್ನ ತೋರಿಸಿದ್ದಾನೆ.
ತಾನು ಪ್ಯಾರಿಸ್ ಗೆ ಹೋಗಬೇಕು ಮದುವೆ ಬೇಗ ಮಾಡಿಕೊಡಿ ಎಂದು ಒತ್ತಾಯ ಮಾಡಿ ದ್ದಾನೆ.ಆತನ ಮಾತು ನಂಬಿದ ಶ್ರೀನಿವಾಸ್ ಮಗಳನ್ನ ಕೊಟ್ಟು 2021ರ ಫೆ.15 ರಂದು ವಿವಾಹ ಮಾಡಿದ್ದಾರೆ.
ಈ ವೇಳೆ ಕರೋನಾ ಭೀತಿ ಇದ್ದುದರಿಂದ ಪ್ಯಾರೀಸ್ ಗೆ ಹೋಗಲು ವಿಳಂಬವಾಗುತ್ತಿದೆ ಎಂದು ನಂಬಿಸಿ ಅತ್ತೆ ಮನೆಯಲ್ಲೇ ಠಿಕಾಣಿ ಹೂಡಿದ್ದಾನೆ.
ನಂತರ ಬೆಂಗಳೂರಿನ ರಾಜಾಜಿನಗರಕ್ಕೆ ಪತ್ನಿಯನ್ನ ಕರದೊಯ್ದು ಐಶಾರಾಮಿ ಮನೆಯನ್ನ ತೋರಿಸಿ,ಬಿಎಂಡಬ್ಲೂ ಕಾರಿನಲ್ಲಿ ಓಡಾಡಿದ್ದಾನೆ.ಕಂಪನಿಯಿಂದ ತನಗೆ ಬಂದಿರುವಂತೆ ಲೆಟರ್ ಗಳನ್ನ ತೋರಿಸಿದ್ದಾನೆ.
ನಂತರ ಮನೆಯಲ್ಲಿದ್ದ 20 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ್ದಾನೆ,ಅಲ್ಲದೆ ಶ್ರೀನಿವಾಸ್ ಅವರ ಪತ್ನಿ ಸರಸ್ವತಿ ಹೆಸರಲ್ಲಿ ಮುತ್ತೂಟ್ ಫೈನಾನ್ಸ್ ನಲ್ಲಿ 20 ಲಕ್ಷ ಸಾಲ ಕೂಡಾ ಪಡೆದಿದ್ದಾನೆ.
ಮನೆಯಲ್ಲಿದ್ದ ಚಿನ್ನಾಭರಣ ಕಾಣೆಯಾಗಿದ್ದು ಗೊತ್ತಾಗಿ ಶ್ರೀನಿವಾಸ್ ಅವರಿಗೆ ಅನುಮಾನ ಬಂದು ಟ್ರಾಪ್ ಮಾಡಿದಾಗ ವಿಜಯ್ ಕುಮಾರ್ ಲಟ್ಟಿ ತಾನು ಕದ್ದಿರುವುದಾಗಿ ಒಪ್ಪಕೊಂಡಿದ್ದಾನೆ.
ಲಾಯರ್ ಮಧ್ಯಸ್ಥಿಕೆಯಲ್ಲಿ ಕದ್ದ ಚಿನ್ನಾಭರಣದ ಹಣ ಹಾಗೂ ಲೋನ್ ನಲ್ಲಿ ಪಡೆದ 20 ಲಕ್ಷ ಒಟ್ಟು 40 ಲಕ್ಷ ಹಿಂದಿರುಗಿಸಿದ್ದ.
ನಂತರ ತನಗೆ 40 ಲಕ್ಷ ವರದಕ್ಷಿಣೆ ಬೇಕು ಎಂದು ಪಟ್ಟುಹಿಡಿದಿದ್ದಾನೆ.ಈತನ ಕಿರುಕುಳಕ್ಕೆ ಬೇಸತ್ತ ಶ್ರೀನಿವಾಸ್ ಮಗಳ ಭವಿಷ್ಯದ ದೃಷ್ಟಿಯಿಂದ ವಿಚ್ಛೇದನ ಕೊಡಿಸಿದ್ದಾರೆ.
ಅಳಿಯನ ಮೋಸದತನದಿಂದ ಬೇಸತ್ತಿದ್ದ ಶ್ರೀನಿವಾಸ್ ವಿಜಯ್ ಕುಮಾರ್ ಲಟ್ಟಿ ಹಾಗೂ ಆತನ ತಂದೆ ಸದಾಶಿವ ವಿರೂಪಾಕ್ಷ ಲಟ್ಟಿ ವಿರುದ್ದ ನ್ಯಾಯಾಲಯದ ಮೊರೆ ಹೋಗಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಈಗ ಎಫ್ಐಆರ್ ದಾಖಲಾಗಿದೆ.