ಬೆಳಗಾವಿ: ಚಳಿಗಾಲದ ಅಧಿವೇಶನ ಮೂರನೇಯ ದಿನ ಕೂಡಾ ವಿವಿಧ ಸಂಘಟನೆಗಳ ಪ್ರತಿಭಟನೆ ತೀವ್ರಗೊಂಡಿದ್ದು,ಈ ವೇಳೆ ರೈತರೊಬ್ಬರು ತೀವ್ರವಾಗಿ ಅಸ್ವಸ್ಥಗೊಂಡ ಪ್ರಸಂಗ ನಡೆದಿದೆ.
ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ಕಾವು ಜೋರಾಗಿದೆ,
ಈ ಸಂದರ್ಭದಲ್ಲಿ ರಾಯಬಾಗ ತಾಲೂಕಿನ ಕುಡಚಿ ಗ್ರಾಮದ ರೈತ ಯಲ್ಲಪ್ಪಾ ಹಿರೇಕುರಬರ (35) ಅವರು ಅಸ್ವಸ್ಥರಾಗಿದ್ದಾರೆ.
ಬುಧವಾರ ಸುವರ್ಣಸೌಧದ ಪಕ್ಕದಲ್ಲಿರುವ ಪ್ರತಿಭಟನಾ ಸ್ಥಳದಲ್ಲಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದಾಗ ಭಾರೀ ಒತ್ತಡ, ಜನಸಮೂಹ ಹಾಗೂ ದೀರ್ಘ ಕಾಲದಿಂದ ಕೂಗಾಟ, ಘೋಷಣೆಗಳ ತೀವ್ರಗೊಂಡಿತು,ಆಗ ರೈತ ಯಲ್ಲಪ್ಪಾ ಹಿರೇಕುರಬರ ತಲೆ ಸುತ್ತಿ ನೆಲಕ್ಕೆ ಬಿದ್ದರು.
ತಕ್ಷಣ ಇತರೆ ರೈತರು, ಸಂಘಟಕರು ಹಾಗೂ ಪೊಲೀಸರು ಶಿಶ್ರೂಷೆ ಮಾಡಿದರು.
ಸ್ಥಳಕ್ಕೆ ವೈದ್ಯಕೀಯ ಸಿಬ್ಬಂದಿ ಧಾವಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ, ಅವರನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರು.
ಇದರಿಂದ ಆತಂಕ ಹಾಗೂ ಗೊಂದಲ ವಾತಾವರಣ ನಿರ್ಮಾಣಕೊಂಡಿತ್ತು, ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಯಿತು.
ಯಲ್ಲಪ್ಪಾ ಹಿರೇಕುರಬರ ಅವರ ಆರೋಗ್ಯ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಆಸ್ಪತ್ರೆಗೆ ಮೂಲಗಳು ತಿಳಿಸಿವೆ.
ರೈತರ ಬೇಡಿಕೆಗಳನ್ನು ತ್ವರಿತವಾಗಿ ಮೌಲ್ಯಮಾಪನ ಮಾಡಿ ಈಡೇರಿಸಲು ಸರಕಾರ ಕೂಡಲೇ ಕ್ರಮ ಕೈಗೊಳಬೇಕೆಂದು ಪ್ರತಿಭಟನಾ ನಿರತರು ಆಗ್ರಹಿಸಿದ್ದಾರೆ.
ಪ್ರತಿಭಟನೆ ವೇಳೆ ರೈತ ತೀವ್ರ ಅಸ್ವಸ್ಥ