ನಾಳೆಯಿಂದ ಬಾವಲತ್ತಿಯ ಶ್ರೀ ಲಕ್ಷ್ಮೀ ರಂಗನಾಥ ಜಾತ್ರೆ

Spread the love

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಬಾವಲತ್ತಿ ಗ್ರಾಮದ ಶ್ರೀ ಲಕ್ಷ್ಮೀ ರಂಗನಾಥ ಜಾತ್ರಾ ಮಹೋತ್ಸವ ಪ್ರತಿ ವರ್ಷದಂತೆ ಈ ವರ್ಷವೂ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ.

ಈ ವರ್ಷದ ಕ್ಯಾಲೆಂಡರ್ ಪ್ರಕಾರ ಜಾತ್ರೆಗೆ 9 ಪೂಜೆಗಳು ಬಂದಿವೆ.ಎಂಟು ದಿನ ಪ್ರತಿ ಸಾಯಂಕಾಲ ಚಿಕ್ಕ ರಥೋತ್ಸವ ಜರುಗಿದರೆ ಒಂಭತ್ತನೆಯ ದಿನ ಮಹಾ ರಥೋತ್ಸವ ಜರುಗಲಿದೆ.

ಗರುಡ ಪಟ್ಟ ,ಸಮರಾಜ್ಞೆಯಂತಹ ವಿಶೇಷ ಪೂಜಾ ಕೈಂಕರ್ಯಗಳು ಕೂಡ ನಡೆಯುತ್ತವೆ.ಸೊಗಸಾಗಿ ಮೆಟ್ಟಿನ ಪದಗಳನ್ನು ಹಾಡಲಾಗುತ್ತದೆ.

ಶ್ರೀ ಲಕ್ಷ್ಮೀ ರಂಗನಾಥನ ದೇವಸ್ಥಾನದ ಸೇವಕಾರರು ಅತ್ಯಂತ ಶ್ರದ್ಧಾ,ಭಕ್ತಿ,ನಿಷ್ಠೆಯಿಂದ ಸ್ವಾಮಿಯ ಸೇವೆ ಮಾಡುತ್ತಾರೆ. ಗ್ರಾಮದ ಸಮಸ್ತ ಗುರು ಹಿರಿಯರು ಮುಂದೆ ನಿಂತು ಜಾತ್ರೆ ಅಚ್ಚುಕಟ್ಟಾಗಿ ನೆರವೇರುವಂತೆ ಮಾಡುತ್ತಾರೆ.

ನಾಳೆ ಶನಿವಾರ ರಥೋತ್ಸವ ಜರುಗುತ್ತದೆ. ಎರಡನೆಯ ದಿನ ಅಂದರೆ ರವಿವಾರ ಶ್ರೀ ಲಕ್ಷ್ಮೀ ರಂಗನಾಥನ ನೀರೊಕಳಿ ನಡೆಯಲಿದೆ. ಅಂದೇ ಮದ್ಯಾಹ್ನ ಆಲದ ಮರದ ಕೆಳಗೆ ಮೆಟ್ಟಿನ ಪದಗಳನ್ನೂ ಕೂಡ ಎಲ್ಲರೂ ಕೇಳಿ ಮನತುಂಬಿಕೊಳ್ಳಬಹುದು.

ಮೂರನೆಯ ಹಾಗೂ ಕೊನೆ ದಿನ ಅಂದರೆ ಸೋಮವಾರ ಏ.೧೪ ರಂದು ಶ್ರೀ ಗುಡ್ಡದ ತಿಮ್ಮಯ್ಯನ ಸನ್ನಿಧಾನದಲ್ಲಿ ಸಾಮೂಹಿಕ ದಿಂಡರಕಿ ಹಾಗೂ ಹರಿಸ್ಯಾವಿಗೆ ಪದ್ದತಿ ನೆರವೇರಲಿದೆ.

ಜತೆಗೆ ಇನ್ನೂ ಹತ್ತು ಹಲವಾರು ಪೂಜಾ ಕೈಂಕರ್ಯಗಳು ಜಾತ್ರಾ ಸಮಯದಲ್ಲಿ ನೆರವೇರಲಿವೆ.

ಸಕಲ ಸದ್ಭಕ್ತರು ಜಾತ್ರೆಗೆ ಆಗಮಿಸಿ ಭಗವಂತನ ಕೃಪಾಶೀರ್ವಾದ ಪಡೆಯಬೇಕೆಂದು ಬಾವಲತ್ತಿ ಗ್ರಾಮದ ಯುವ ಸಾಹಿತಿ ರಾ.ಹ ಕೊಂಡಕೇರ ಮನವಿ ಮಾಡಿದ್ದಾರೆ.