ಬಸವೇಶ್ವರ, ಅಂಬೇಡ್ಕರ್ ಜಯಂತಿ ಆಚರಿಸಿದ ಕರ್ನಾಟಕ ಸೇನಾ ಪಡೆ

Spread the love

ಮೈಸೂರು: ಕರ್ನಾಟಕ ಸೇನಾ ಪಡೆ ವತಿಯಿಂದ ಮೈಸೂರಿನ ರೋಟರಿ ಶಾಲೆ ಸಭಾಂಗಣದಲ್ಲಿ ಜಗಜ್ಯೋತಿ ಬಸವೇಶ್ವರ ಹಾಗೂ ಡಾ ಬಿ ಆರ್ ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮವನ್ನು ವಿಶೇಷವಾಗಿ ಆಚರಿಸಲಾಯಿತು.

ಕೊಳ್ಳೇಗಾಲದ ಮಾಜಿ ಶಾಸಕ ನಂಜುಂಡಸ್ವಾಮಿ ಜಿ. ಎನ್ ಅವರು ಕಾರ್ಯಕ್ರಮ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು,ಬಸವಣ್ಣ ಅವರು 12 ನೇ ಶತಮಾನದಲ್ಲಿಯೇ ಸಮಾನತೆ ವಿಚಾರವಾಗಿ ಹೋರಾಡಿದವರು. ಅನುಭವ ಮಂಟಪ ವನ್ನು ತೆರೆದು ಎಲ್ಲಾ ಸಮುದಾಯಗಳನ್ನು ಸೇರಿಸಿದವರು. ಅವರೊಬ್ಬ ಜಗತ್ತು ಕಂಡ ದಾರ್ಶನಿಕರು ಎಂದು ನುಡಿದರು.

ಅವರ ತತ್ವ, ಆದರ್ಶ ಸಿದ್ದಾಂತ ಗಳನ್ನು ಈಗಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಹೇಳಿದರು.

ಅಂಬೇಡ್ಕರ್ ರವರು ವಿಶ್ವ ಜ್ಞಾನಿ, ಓದು ಓದು ಓದಿದರೆ ಮಾತ್ರ, ನಿನ್ನ ವಿದ್ಯೆಗೆ ಜನರು ಹೆದರುತ್ತಾರೆ ಎಂದವರು, ಬೇರೆ ದೇಶಗಳಿಗೆ ಸಂವಿಧಾನ ರಚಿಸುವುದು ಸುಲಭ, ಆದರೆ ಭಾರತದಲ್ಲಿ ಹಲವಾರು ಭಾಷೆಗಳು ಹಾಗೂ ಸಮುದಾಯಗಳು, ಜಾತಿ ಧರ್ಮಗಳು ಇರುವುದರಿಂದ, ಸಂವಿಧಾನ ರಚಿಸಿರುವುದು ಅತ್ಯಂತ ಕ್ಲಿಷ್ಟಕರ ಎಂದು ನಂಜುಂಡಸ್ವಾಮಿ ತಿಳಿಸಿದರು.

ಹಾಗಾಗಿಯೇ ಇಂದಿಗೂ ವಿಶ್ವದಾದ್ಯಂತ ಅಂಬೇಡ್ಕರ್ ಅವರನ್ನು ನೆನೆಯುತ್ತಾರೆ ಎಂದು ಹೇಳಿದರು.

ವಿವಿಧ ಕ್ಷೇತ್ರಗಳ ಸಾಧಕರಾದ ಸರ್ಕಾರಿ ಕ್ಷೇತ್ರದ- ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಜಂಟಿ ನಿರ್ದೇಶಕಿ ಡಾ. ಲಕ್ಷಮ್ಮ, ಸಹಕಾರ ಕ್ಷೇತ್ರದ – ಮೈಸೂರು ಚಾಮರಾಜನಗರ ಸಹಕಾರ ಬ್ಯಾಂಕ್ ನಿರ್ದೇಶಕ ಡಾ. ಎಂ.ಬಿ ಮಂಜೇಗೌಡ, ಸಾರಿಗೆ ಕ್ಷೇತ್ರದ – ಕೆ ಎಸ್ ಆರ್ ಟಿ ಸಿ ಜಾಗೃತಿ & ಭದ್ರತಾ ಅಧಿಕಾರಿ ಎನ್ ಎಸ್ ಶಿವರಾಜೇಗೌಡ, ನಿರ್ಮಾಣ – ಕ್ಷೇತ್ರದ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಗೃಹ ನಿರ್ಮಾಣ ಕ್ಷೇತ್ರದ ಅಧ್ಯಕ್ಷ ಜಿ ಎಸ್ ಅಶೋಕ್ ಕುಮಾರ್, ಸಮಾಜ ಸೇವಾ ಕ್ಷೇತ್ರದ – ವಿಷನ್ ಟೀಂ ಮೈಸೂರು ಅಧ್ಯಕ್ಷ ನಂದೀಶ್ ಕುಮಾರ್ ಬಿ ಆರ್, ವೈದ್ಯಕೀಯ ಕ್ಷೇತ್ರದ – ಜೀವಧಾರ ರಕ್ತ ದಾನ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಲಯನ್ ಗಿರೀಶ್ ಎಸ್ ಇ, ಶಿಕ್ಷಣ ಕ್ಷೇತ್ರದ – ಪಾಂಡವಪುರ ಪ್ರೌಢಶಾಲೆ ಶಿಕ್ಷಕ ಲೋಕೇಶ್ ಕುಲ್ಕುಂದ, ಕನ್ನಡ ಹೋರಾಟ ಕ್ಷೇತ್ರದ – ಗೋವಿಂದರಾಜು ಮುತ್ತಿಗೆ ರವರಿಗೆ ಶ್ರೀ ಬಸವೇಶ್ವರ ಹಾಗೂ ಡಾ ಬಿ ಆರ್ ಅಂಬೇಡ್ಕರ್ ಕಾಯಕ ರತ್ನ ಪ್ರಶಸ್ತಿ ಯನ್ನು ಸಮಾಜ ಸೇವಕರಾದ ಡಾ ರಘುರಾಂ ಕೆ ವಾಜಪೇಯಿ ಪ್ರದಾನ ಮಾಡಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಶೈಕ್ಷಣಿಕ ಡೀನ್ ಡಾ. ಪ್ರೊಫೆಸರ್ ಲಕ್ಷ್ಮಿ ಎನ್ ಅವರು ಮಾತನಾಡಿದರು.

ಮುಖ್ಯ ಅತಿಥಿಗಳಾದ ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್ ಜಯಪ್ರಕಾಶ್ ಮಾತನಾಡಿ ಬುದ್ಧ ಬಸವ ಅಂಬೇಡ್ಕರ್ ರವರು ನಮ್ಮ ದೇಶದ ಆಸ್ತಿ, ಇಡೀ ಪ್ರಪಂಚಕ್ಕೆ ಬಸವಣ್ಣ ಸಾಂಸ್ಕೃತಿಕ ರಾಯಭಾರಿ ಹಾಗೂ ಅಂಬೇಡ್ಕರ್ ರವರು ವಿಶ್ವದ ಜ್ಞಾನಿ. ಇವರ ಹಾದಿಯಲ್ಲಿಯೇ ಈಗ ಪ್ರಧಾನ ಮಂತ್ರಿ ಮೋದಿ ಅವರು ಸಾಗಿ ನಮ್ಮ ದೇಶವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂದು ತಿಳಿಸಿದರು.

ಮಹಾರಾಣಿ ಕಲಾ ಕಾಲೇಜಿನ ಸುಮಾರು 40 ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಎಸ್ ಎಂ ಪಿ ಡೆವಲಪರ್ಸ್ ಮಾಲೀಕ ಎಸ್ ಎಂ ಶಿವಪ್ರಕಾಶ್ ಅವರು ಪ್ರತಿಭಾ ಪುರಸ್ಕಾರ ಮಾಡಿದರು‌.

ಕಾರ್ಯಕ್ರಮದಲ್ಲಿ ಕರ್ನಾಟಕ ಸೇನಾ ಪಡೆಯ ರಾಜ್ಯಾಧ್ಯಕ್ಷ ಶ್ರೀನಿವಾಸ ಗೌಡ, ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಮೂಗೂರು ನಂಜುಂಡಸ್ವಾಮಿ, ಪ್ರಭುಶಂಕರ್, ಗೋಲ್ಡ್ ಸುರೇಶ್, ಕೃಷ್ಣಪ್ಪ, ನೇಹಾ, ಸಿಂಧುವಳ್ಳಿ ಶಿವಕುಮಾರ್, ವರಕುಡು ಕೃಷ್ಣೇಗೌಡ, ನಾಗರಾಜು, ಬೋಗಾದಿ ಸಿದ್ದೇಗೌಡ, ಲಕ್ಷಿ, ಭಾಗ್ಯಮ್ಮ ಪ್ರಭಾಕರ್, ಮಹದೇವಸ್ವಾಮಿ ಹನುಮಂತಯ್ಯ, ಡಾ. ಶಾಂತರಾಜೇಅರಸ್, ಅಂಬಳೆ ಶಿವಣ್ಣ, ಗೀತಾ ಗೌಡ, ಮೂರ್ತಿ ಲಿಂಗಯ್ಯ, ಕುಮಾರ್, ರವಿ ನಾಯಕ್, ಶಿವರಾಂ ,ರಘು ಅರಸ್,ವಿಷ್ಣು ಮಹದೇವಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.