ಬಾಂಗ್ಲಾ ಹಿಂದೂಗಳ ರಕ್ಷಣೆ ಮಾಡಿ ಮೋದಿಯವರಿಗೆ ರವಿ ಮಂಚೇಗೌಡನ ಕೊಪ್ಪಲು ಆಗ್ರಹ

Spread the love

ಮೈಸೂರು: ನೆರೆಯ ಬಾಂಗ್ಲಾದೇಶದಲ್ಲಿ ಅಲ್ಪ ಸಂಖ್ಯಾತ ಹಿಂದೂಗಳ ಮೇಲೆ ನಡೆದ ದೌರ್ಜನ್ಯ ಖಂಡನಾರ್ಹ ಎಂದು ಇಂದಿರಾಗಾಂಧಿ ಬ್ಲಾಕ್ ಅಧ್ಯಕ್ಷ ರವಿ ಮಂಚೇಗೌಡನ ಕೊಪ್ಪಲು ಹೇಳಿದ್ದಾರೆ.

ಕೂಡಲೆ ಪ್ರಧಾನಿ ಮೋದಿಯವರು ಮಧ್ಯಪ್ರವೇಶಿಸಿ ಬಾಂಗ್ಲಾ ಸರ್ಕಾರ ದೊಂದಿಗೆ
ಮಾತುಕತೆ ನಡೆಸಿ,ಹಿಂದೂಗಳು ಹಾಗೂ ಇತರೆ ಅಲ್ಪ ಸಂಖ್ಯಾತರ ರಕ್ಷಣೆ ಮಾಡಬೇಕೆಂದು ರವಿ ಆಗ್ರಹಿಸಿದ್ದಾರೆ.

1971ರಲ್ಲಿ ನಡೆದ ಯುದ್ಧದಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿಯವರ ದಿಟ್ಟ ನಿರ್ಧಾರದಿಂದ ಪಾಕಿಸ್ತಾನದ ವಿರುದ್ಧ ಯುದ್ಧದಲ್ಲಿ ಗೆದ್ದು ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕೆ ಕಾರಣವಾದರು.

ಅಲ್ಲದೇ, ಬಾಂಗ್ಲಾದೇಶ ಕೂಡಾ ಒಂದು ಜಾತ್ಯತೀತ ರಾಷ್ಟ್ರವಾಗಿ ಉದಯವಾಯಿತು. ಎಲ್ಲಾ ಧರ್ಮಿಯರನ್ನು ರಕ್ಷಣೆ ಮಾಡುವುದು ಅಲ್ಲಿನ ಆಡಳಿತದ ಆದ್ಯ ಕರ್ತವ್ಯ,ಆದರೆ ಅಲ್ಲಿನ ಸರ್ಕಾರ ತನ್ನ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದರು.

ಪ್ರಧಾನಿ ಮೋದಿಯವರು ಕೂಡಲೇ ಮಧ್ಯಪ್ರವೇಶಿಸಿ ನೆರೆ ರಾಷ್ಟ್ರದ ಪ್ರಧಾನಿ ಜೊತೆ ಮಾತುಕತೆ ನಡೆಸಿ, ಹಿಂದಿನ ಭಾರತದ ಸಹಾಯವನ್ನು ನೆನಪಿಸಿ ಕೊಟ್ಟು ಅಲ್ಲಿರುವ ಹಿಂದೂಗಳ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಬೇಕು, ಅವಶ್ಯಬಿದ್ದರೆ ಸೈನ್ಯದ ನೆರವನ್ನು ನೀಡಲು ಹಿಂಜರಿಯಬಾರದು ಎಂದು ರವಿ ಮಂಚೇಗೌಡನ ಕೊಪ್ಪಲು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.