ಬನಶಂಕರಿ ಬೊಂಬೆ ಮನೆಯಲ್ಲಿ 600 ಕ್ಕೂ ಹೆಚ್ಚು ದಸರಾ ಬೊಂಬೆ ಪ್ರದರ್ಶನ

Spread the love

ಮೈಸೂರು: ಮೈಸೂರಿನ ಶ್ರೀರಾಂಪುರದ ಮೂಕಾಂಬಿಕಾ ಸಮೃದ್ದಿ ಬಡಾವಣೆಯಲ್ಲಿ ನವರಾತ್ರಿಯ ದಸರಾ ಹಬ್ಬದ ಹತ್ತು ದಿನಗಳ ಕಾಲ ದಸರಾ ಬೊಂಬೆ ಪ್ರದರ್ಶನ ಏರ್ಪಡಿಸಲಾಗಿದೆ.

ಇದರಲ್ಲಿ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ವಿಭಾಗಗಳಲ್ಲಿ ಬೊಂಬೆ ಪ್ರದರ್ಶನ ಮಾಡಲಾಗಿದೆ.

ರಾಮಾಯಣ, ಮಹಾಭಾರತ, ಭಾಗವತ, ಕೃಷ್ಣನ ವಿವಿಧ ಲೀಲೆಗಳು, ಸಮುದ್ರ ಮಂಥನ, ತಲಕಾವೇರಿಯಲ್ಲಿ ಕಾವೇರಿ ಉಗಮ,ಕನಕಧರಾ ಸ್ತೋತ್ರ,ಆಚಾರ್ಯ ತ್ರಯರು, ಗಜೇಂದ್ರ ಮೋಕ್ಷ, ಘಟೋದ್ಘಜ, ಸಪ್ತ ಋಷಿಗಳು, ಪಂಚತಂತ್ರ ಕಥೆಗಳೊಂದಿಗೆ ಕಣ್ಮರೆಯಾಗುತ್ತಿರುವ ಭಾರತೀಯ ಆಟಗಳು, ಆಪರೇಷನ್ ಸಿಂಧೂರ, ಮಹಾ ಕುಂಭ ಮೇಳ, ಸ್ವದೇಶಿ ಜಾಗೃತಿ, ಹಳ್ಳಿಯ ಬದುಕು, ಶೃಂಗೇರಿ, ಧರ್ಮಸ್ಥಳ, ಮಂತ್ರಾಲಯ, ವಿವಾಹದ ವೈಭವ, ಮೈಸೂರು ದಸರಾ , ಅರಣ್ಯ ರಕ್ಷಣೆ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷದ ಮಾದರಿ ಬೊಂಬೆಗಳು, ಸಾಹಸ ಸಿಂಹ ಕರ್ನಾಟಕ ರತ್ನ ಡಾ. ವಿಷ್ಣು ವರ್ಧನ್ ಹಾಗೂ ಭಾರತದ ಕೀರ್ತಿಯನ್ನು ಬಾಹ್ಯಾಕಾಶಕ್ಕೆ ತಲುಪಿಸಿದ ಶುಭಾಂಶು ಶುಕ್ಲರವರನ್ನೂ ಸಹ ಬೊಂಬೆ ಪ್ರದರ್ಶನದಲ್ಲಿ ಸ್ಮರಿಸಲಾಗಿದೆ.

ಬನಶಂಕರಿ ಬೊಂಬೆ ಮನೆಯ
ಕೆ. ಆರ್. ಗಣೇಶ್, ಸರಸ್ವತಿ, ಡಾ. ಪೃಥು ಪಿ ಅದ್ವೈತ್, ಪುನೀತ್ ಜಿ, ಪೂಜಾ ಪುನೀತ್ ಅವರು ಶ್ರಮಪಟ್ಟು ಆಸ್ತೆಯಿಂದ‌ ಈ ಬೊಂಬೆ ಮನೆಯನ್ನು ಎಂಟು ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ.

ಈ ಬೊಂಬೆ ಮನೆಯಲ್ಲಿ ನವರಾತ್ರಿಯ ಪ್ರತಿ ದಿನ ಸಂಜೆ 5.30 ರಿಂದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮ ಜರುಗಲಿದೆ. ಸಾರ್ವಜನಿಕರು ನಾಳೆ ಸೋಮವಾರದಿಂದ ಅಕ್ಟೋಬರ್ ‌2 ರ ತನಕ ಬೆಳಿಗ್ಗೆ 10.30 ರಿಂದ ರಾತ್ರಿ 8.30 ರ ತನಕ ಬೊಂಬೆ ಮನೆಗೆ ಭೇಟಿ ನೀಡಿ ಬೊಂಬೆಗಳನ್ನು ವೀಕ್ಷಣೆ ಮಾಡಬಹುದು ಎಂದು ಬನಶಂಕರಿ ಬೊಂಬೆ ಮನೆಯ ಪೂಜಾ ಪುನೀತ್ ಮನವಿ ಮಾಡಿದ್ದಾರೆ.